ಆ್ಯಪ್ನಗರ

ಅಕ್ರಮ ಮರಳು: ನಾಲ್ಕು ಎತ್ತಿನ ಗಾಡಿ ವಶ

ತಾಲೂಕಿನ ಅಂಬಳೆ ಗ್ರಾಮದ ಸುವರ್ಣಾವತಿ ನದಿಯಿಂದ ಅಕ್ರಮವಾಗಿ ಮರಳು ತುಂಬಿ ಹೊಮ್ಮ ಹಾಗೂ ಇರಸವಾಡಿಗೆ ಮಾರಾಟ ಮಾಡಲು ತೆರಳುತ್ತಿದ್ದಾಗ ದಾಳಿ ನಡೆಸಿದ ...

Vijaya Karnataka Web 13 Oct 2016, 8:32 pm

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಸುವರ್ಣಾವತಿ ನದಿಯಿಂದ ಅಕ್ರಮವಾಗಿ ಮರಳು ತುಂಬಿ ಹೊಮ್ಮ ಹಾಗೂ ಇರಸವಾಡಿಗೆ ಮಾರಾಟ ಮಾಡಲು ತೆರಳುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು 4 ಎತ್ತಿನ ಗಾಡಿ ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

ಅಂಬಳೆ ಗ್ರಾಮದ ರಂಗಸ್ವಾಮಿ, ಶ್ರೀಧರ, ಮಂಜುನಾಥ, ಯರಿಯೂರು ಗ್ರಾಮದ ಮಹದೇವಯ್ಯ ಎಂಬುವವರು ಎತ್ತಿನಗಾಡಿಗಳಲ್ಲಿ ಮರಳು ತುಂಬಿ ಸಾಗಣೆ ಮಾಡುತ್ತಿದ್ದ ವೇಳೆ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಟ್ಟಣ ಠಾಣೆ ಪೊಲೀಸರು ಎತ್ತಿನ ಗಾಡಿಗಳನ್ನು ವಶಪಡಿಸಿಕೊಂಡು ನಾಲ್ವರನ್ನೂ ಬಂಧಿಸಿದ್ದಾರೆ.

ಪಿಎಸ್‌ಐ ಮಂಜುನಾಥ್‌, ಪೇದೆ ರಾಘವೇಂದ್ರ, ಗುರುಲಿಂಗಯ್ಯ, ಪ್ರಕಾಶ್‌, ರಂಗಸ್ವಾಮಿ, ನಂಜುಂಡಸ್ವಾಮಿ, ರಾಜಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ