ಬೇಗೂರು(ಗುಂಡ್ಲುಪೇಟೆ) : ಕೋಟೆಕೆರೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗರಿಸಿ ಮಹರ್ಷಿಯ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿರಿಸಿ ವಾದ್ಯ, ಮೆಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಾಯಕ ಜನಾಂಗದ ಕಟ್ಟೆಯಜಮಾನ್ ಮಂಜುನಾಥ, ಗ್ರಾಮದ ಯಜಮಾನರಾದ ಚಿನ್ನನಾಯ್ಕ ಹಾಜರಿದ್ದರು.