ಸಂತೇಮರಹಳ್ಳಿ,: ಮಹಾದೇಶ್ವರ ಹಾಗೂ ಗಣಪತಿ ದೇವಸ್ಥಾನಗಳಲ್ಲಿ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಭಾನುವಾರ ವಿಶೇಷ ಪೂಜೆ ಜರುಗಿದವು.
ಬೆಳಗ್ಗೆಯಿಂದಲೇ ಮಹಾದೇಶ್ವರಸ್ವಾಮಿಗೆ ಎಣ್ಣೆಮಜ್ಜನ, ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ನಾನಾ ಬಗೆಯ ಅಭಿಷೇಕ ನಡೆಸಲಾಯಿತು.
ಹರಕೆ ಹೊತ್ತ ಭಕ್ತರು ಬೆಳಗ್ಗೆಯಿಂದಲೇ ಪಂಜಿನ ಸೇವೆ ಹಾಗೂ ಧೂಪದ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹುಲಿವಾಹನ ಹಾಗೂ ದಂಡು ಗೋಲು ಮೆರವಣಿಗೆ ನಡೆಯಿತು.
ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಸಮೀಪದ ಕಾವುದವಾಡಿ, ಬಸವಟ್ಟಿ, ದೇಶವಳ್ಳಿ, ತೆಳ್ಳನೂರು, ಕುದೇರು, ಉಮ್ಮತ್ತೂರು, ಕಮರವಾಡಿ, ಕೆಂಪನಪುರ, ಚುಂಗಡಿಪುರ, ಹೊಸಮೋಳೆ, ದೇಮಹಳ್ಳಿ, ಮೂಡಲಅಗ್ರಹಾರ, ಮಂಗಲ, ಯಡಿಯೂರು, ಚಾಮರಾಜನಗರ, ಮಾದಾಪುರ, ಕಿರಗಸೂರು, ಸಂತೇಮರಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದತು. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಯಡಿಯೂರು ಹಾಗೂ ಮಂಗಲ ಮಾರ್ಗ ಮಧ್ಯದಲ್ಲಿರುವ ಶಂಕರೇಶ್ವರಬೆಟ್ಟದಲ್ಲೂ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು.
ಭಕ್ತರು ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದರು.
ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಮನಿಯಮ್ಮ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು.
ಬೆಳಗ್ಗೆಯಿಂದಲೇ ದೇವಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ, ಬಿಲ್ವಾರ್ಚನೆ, ಬಲಿ ಪೂಜೆ ನಡೆಯಿತು.
ಕೂಡ್ಲೂರು ಗ್ರಾಮದ ಮಂಟೇಸ್ವಾಮಿ, ಮಹಾದೇಶ್ವರ, ಗಣಪತಿ, ರಾಕಸಮ್ಮ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಿತು.
ಸಿಎಚ್ಎನ್30ಎಸ್ಎಂಆರ್1
ಸಂತೇಮರಹಳ್ಳಿ ಮಹಾದೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಭಾನುವಾರ ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು.