ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಟೌನ್ ಲಾಬಾಬೀನ್ ಮಸೀದಿ ಹತ್ತಿರದಲ್ಲಿರುವ ಎರಡು ಮದ್ಯದಂಗಡಿಗಳನ್ನು ತೆರವು ಮಾಡಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಅಬಕಾರಿ ಇಲಾಖೆ ಉಪ ಆಯುಕ್ತ ಎ.ಎಲ್.ನಾಗೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
1967ರ ನಿಯಮ 5ನ್ನು ಉಲ್ಲಂಘಿಸಿ ಗುಂಡ್ಲುಪೇಟೆ ಟೌನ್ ಲಾಬಾಬೀನ್ ಮಸೀದಿ ಹತ್ತಿರದಲ್ಲಿ ಮದ್ಯದಂಗಡಿಗಳು ಅಕ್ರಮವಾಗಿ ನಡೆಯುತ್ತಿದೆ. ಈ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವಂತೆ ಈಗಾಗಲೇ ಪಕ್ಷ ದಿಂದ ಹಲವಾರು ಹೋರಾಟಗಳನ್ನು ಮಾಡಲಾಗಿದ್ದು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ . ಆದರೂ ಪ್ರಯೋಜನವಾಗಿಲ್ಲ .
ಈ ಅಕ್ರಮ ಮದ್ಯದ ಅಂಗಡಿಗಳು ತೆರವುಗೊಳಿಸುವ ಸಂಬಂಧ ಈಗಾಗಲೇ ನ್ಯಾಯಾಲಯಗಳ ವಿಚಾರಣೆಯಲ್ಲೂ ಅಕ್ರಮ ಎಂಬುದಾಗಿ ಸಾಬೀತು ಆಗಿದೆ. ಆದರೂ ಮದ್ಯದಂಗಡಿಗಳು ಸ್ಥಳಾಂತರವಾಗಿಲ್ಲ. ಆದರಿಂದ ತಕ್ಷ ಣ ಈ ಎರಡು ಅಕ್ರಮ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಅಬ್ಕಾರಿ ಇಲಾಖೆ ಉಪ ಆಯುಕ್ತರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ಅಬ್ರಾರ್ಅಹಮದ್, ಗುಂಡ್ಲುಪೇಟೆ ಟೌನ್ ಅಧ್ಯಕ್ಷ ಮನ್ಸೂರ್ಅಲಿ, ಕಾರ್ಯದರ್ಶಿ ಸರ್ಫರಾಜ್, ಸಲೀಂ, ಅಫ್ರೋಜ್ ಹಾಜರಿದ್ದರು.