ಕೊಳ್ಳೇಗಾಲ: ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್ಮನ್ಗಳನ್ನು ಕಾಯಂಗೊಳಿಸುವ ಹೋರಾಟಕ್ಕೆ ಸರಕಾರ ಸ್ಪಂದಿಸಿದ ಹಿನ್ನೆಲೆ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಒಕ್ಕೂಟ ಹಾಗೂ ಹೊರಗುತ್ತಿಗೆ ಕಾರ್ಮಿಕರ ಸಂಘ ಮಂಗಳವಾರ ಮಧ್ಯಾಹ್ನ ಧರಣಿ ಕೈಬಿಟ್ಟಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತಮ್ಮ 160 ಅಂಶಗಳುಳ್ಳ ಪ್ರಾಣಾಳಿಕೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್ಮನ್ಗಳನ್ನು ಕಾಯಂಗೊಳಿಸಲು ಭರವೆಸ ನೀಡಿತ್ತು. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರು ಕಾಯಂ ಮಾಡಲು ಮುಂದಾಗಿಲ್ಲ, ಜೂ. 12ರಿಂದ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್ಮನ್ಗಳನ್ನು ಕಾಯಂಗೊಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆ ಮಾಡುವ ಕೆಲಸವನ್ನು ಬಹಿಷ್ಕರಿಸಿ ಆಯಾ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಎದುರು ಅನಿರ್ದಿಷ್ಟ ಕಾಲ ಧರಣಿ ಆರಂಭಿಸಿತ್ತು. ಸರಕಾರ ಹೋರಾಟಕ್ಕೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯಲ್ಲಿ ಗುತ್ತಿಗೆದಾರರು ಧರಣಿ ಕೈಬಿಟ್ಟರು. ಗುತ್ತಿಗೆ ನೌಕರರ ಸಂಘದ ಜಿಲ್ಲಾ ಗೌರವ ಆಧ್ಯಕ್ಷ ಸೋಮಣ್ಣ , ನಿಂಗರಾಜು, ಸರವಣ, ಆರ್ಮುಗಂ, ಎಂ.ಮಹದೇವ, ವಾಟರ್ ಮ್ಯಾನ್, ಎ.ರಮೇಶ್ ಮುಂತಾದವರಿದ್ದರು. ಬಿಎಸ್ಪಿ ಸದಸ್ಯರಾದ ರಾಮಕೃಷ್ಣ. ರವಿ. ಮುಖಂಡ ಶಂಕನಪುರ ಜಗದೀಶ್ ಹೋರಾಟಕ್ಕೆ ಬಂಬಲಿ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು.