ಚಾಮರಾಜನಗರ: ವಿಜಯದಶಮಿ ಅಂಗವಾಗಿ ನಗರದ ವಾದಿರಾಜನಗರದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶಮಿವೃಕ್ಷ (ಬನ್ನಿ) ಪೂಜೆ ನಡೆಯಿತು.
ಮಠದ ಆವರಣದಲ್ಲಿ ಶಮಿವೃಕ್ಷ ಕ್ಕೆ ಪೂಜೆ ಸಲ್ಲಿಸಿ. ನಂತರ ಸೀತಾರಾಮರ ಸಮೇತ ರಾಯರ ಮೂರ್ತಿಯ ರಥೋತ್ಸವ ನಡೆಸಲಾಯಿತು.
ಸಂಕಲ್ಪ ಪೂರ್ವಕ ಶಮಿಪೂಜೆ ಹಾಗೂ ಅಷ್ಟಾವಾದನ ಸೇವೆಯನ್ನು ಅರ್ಚಕರಾದ ಪವನಚಾರ್ ನೆರವೇರಿಸಿದರು.
ಮಹಿಳಾ ಸಂಘದ ವತಿಯಿಂದ ದೇವರ ನಾಮಸ್ಮರಣೆ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ವಾಸುದೇವರಾವ್,ಕಾರ್ಯದರ್ಶಿ ಅಣ್ಣಯ್ಯಪ್ಪ, ಶ್ರೀಧರ್ ಆಚಾರ್, ವಾಸು, ರವಿ, ಲಕ್ಷ್ಮಿವಾಸುದೇವರಾವ್,ಗೀತಾ,ಲಕ್ಷ್ಮಿಸುರೇಶ್, ಜಯಬಲಕೃಷ್ಣ ಇತರರು ಹಾಜರಿದ್ದರು.