ವಿಕ ಸುದ್ದಿಲೋಕ ಗುಂಡ್ಲುಪೇಟೆ
ತಾಲೂಕಿನ ಹಳ್ಳದಮಾದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಉತ್ಪಾದಕರಿಗೆ ಬೋನಸ್ ವಿತರಿಸಲಾಯಿತು.
ಸಂಘದ ಕಚೇರಿ ಆವರಣದಲ್ಲಿ ಸಂಘದ ಅಧ್ಯಕ್ಷ ಎಚ್.ಜಿ.ಯೋಗಾನಂದಸ್ವಾಮಿ(ಪ್ರಸಾದ್) ಬೋನಸ್ ವಿತರಿಸಿದರು.
ನಂತರ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಂಘ ಗಳಿಸಿದ ಲಾಭದಲ್ಲಿ 60 ಸಾವಿರ ರೂಗಳನ್ನು ಉತ್ಪಾದಕರಿಗೆ ಬೋನಸ್ ಆಗಿ ನೀಡಲಾಗುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆ ಮೂಲಕ ಸಂಘದ ಬೆಳವಣಿಗೆಗೆ ಉತ್ಪಾದಕರ ಸಹಕಾರ ಕೋರುವ ಸಲುವಾಗಿ ಬೋನಸ್ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಚ್.ವಿ.ಬಸಪ್ಪ, ಎಚ್.ವಿ.ಬಸವರಾಜು, ಕಾಡಪ್ಪ, ಎಸ್.ಶಿವಮೂರ್ತಿ, ಮಲ್ಲಮ್ಮ, ಸರ್ವಮ್ಮ, ಮಲ್ಲಿಗಮ್ಮ, ಪ್ರಮೀಳಬಾಯಿ, ಎಚ್.ಬಿ.ಬಸವರಾಜು, ಮುಖ್ಯ ಕಾರ್ಯನಿವಾಹಕಿ ಮಂಜುಳಾ, ನೌಕರರಾದ ಎಚ್.ಎನ್.ಕರುಣಾಮೂರ್ತಿ, ಸಂಜೀವಯ್ಯ ಹಾಜರಿದ್ದರು.