ವಿಕ ಸುದ್ದಿಲೋಕ ಗುಂಡ್ಲುಪೇಟೆ
ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆಂಪರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಹಂಗಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಂದರ ಮತ್ತು ಕನಕ ದಾಸರು ಪದಗಳ ಮೂಲಕ ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆ, ಕಂದಚಾರ ಸೇರಿದಂತೆ ಸಾಮಾಜಿಕ ಅನಿಷ್ಟಗಳನ್ನು ಕೈಬಿಡುವಂತೆ ಜನರ ಮನವೊಲಿಸುವ ಪ್ರಾಮಾಣಿಕ ಯತ್ನ ಮಾಡಿದರು. ಇಂದಿನ ಆಧುನಿಕ ಯುಗಕ್ಕೂ ದಾಸ ಸಾಹಿತ್ಯದ ವಿಚಾರಗಳು ಅನ್ವಯಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ದಾಸ ಸಾಹಿತ್ಯ ಅಭ್ಯಸಿಸಬೇಕು. ದಾಸ ಸಾಹಿತ್ಯದ ಸಾರವನ್ನು ಸಮಾಜಕ್ಕೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿರಣ್ರಾಜ್ ಮಾತನಾಡಿ ಶತಮಾನ ಪೂರೈಸಿರುವ ಕಸಾಪ ಕನ್ನಡ ನಾಡು ನುಡಿ ಅಮೂಲ್ಯ ಕೊಡುಗೆ ನೀಡಿದೆ. ಪ್ರಸ್ತುತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿತ್ಯೋತ್ಸವದ ಮೂಲಕ ಎಲ್ಲೆಡೆ ಕನ್ನಡತನ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ನಾಗಪ್ಪ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಕೆ.ಎಂ.ಗುರುಪ್ರಸಾದ್, ಉಪನ್ಯಾಸಕರಾದ ಬಸವಣ್ಣ, ಕಾಂತರಾಜು, ಉಮಾಮಹೇಶ್ವರ ಹಾಜರಿದ್ದರು.
ಸಿಎಚ್ಎನ್2ಜಿಪಿಟಿ4
ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ ನಡೆದ ನಿತ್ಯೋತ್ಸವದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆಂಪರಾಜು ಮಾತನಾಡಿದರು.