ಆ್ಯಪ್ನಗರ

ಏಕತಾ ಜಾಗೃತಿ ಓಟಕ್ಕೆ ಚಾಲನೆ

ನಗರದ ಸೇವಾ ಭಾರತಿ ಶಿಕ್ಷ ಣ ಸಂಸ್ಥೆ ವತಿಯಿಂದ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಜಯಂತಿ ದಿನದ ಅಂಗವಾಗಿ ಏಕತಾ ಜಾಗೃತಿ ಜಾಥಾ ನಡೆಯಿತು.

Vijaya Karnataka 1 Nov 2018, 5:00 am
ಚಾಮರಾಜನಗರ : ನಗರದ ಸೇವಾ ಭಾರತಿ ಶಿಕ್ಷ ಣ ಸಂಸ್ಥೆ ವತಿಯಿಂದ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಜಯಂತಿ ದಿನದ ಅಂಗವಾಗಿ ಏಕತಾ ಜಾಗೃತಿ ಜಾಥಾ ನಡೆಯಿತು.
Vijaya Karnataka Web
ಏಕತಾ ಜಾಗೃತಿ ಓಟಕ್ಕೆ ಚಾಲನೆ


ಮಾರಿಗುಡಿ ಆವರಣದಲ್ಲಿ ಏಕತಾ ಓಟಕ್ಕೆ ಸೇವಾ ಭಾರತಿ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವ್‌ರಾವ್‌ ಚಾಲನೆ ನೀಡಿದರು. 500 ಕ್ಕು ಹೆಚ್ಚು ಕಾಲೇಜು ಹಾಗು ಶಾಲಾ ವಿದ್ಯಾರ್ಥಿಗಳು ನಗರದ ಪ್ರಮುಖಬೀದಿಗಳಲ್ಲಿ ಏಕತಾ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ನಂತರ ಸೇವಾ ಭಾರತಿ ಪಬ್ಲಿಕ್‌ ಶಾಲಾವರಣದಲ್ಲಿ ಜಾಥಾ ಮುಕ್ತಾಯಗೊಂಡಿತು.

ವಕೀಲ ಕೆ. ಸುಬ್ರಮಣ್ಯ, ಚುಡಾ ಮಾಜಿ ಅಧ್ಯಕ್ಷ ಎಸ್‌. ಬಾಲಸುಬ್ರಮಣ್ಯ, ರಾ. ಸತೀಶ್‌, ಮುಖ್ಯ ಶಿಕ್ಷ ಕರು, ಸಹ ಶಿಕ್ಷ ಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ