ಆ್ಯಪ್ನಗರ

ಭಕ್ತಿಪಂಥದ ದಾಸವರೇಣ್ಯ ಕನಕದಾಸರು

16 ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆಂಪರಾಜು ತಿಳಿಸಿದರು.

Vijaya Karnataka 5 Dec 2018, 5:00 am
ಚಾಮರಾಜನಗರ : 16 ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆಂಪರಾಜು ತಿಳಿಸಿದರು.
Vijaya Karnataka Web
ಭಕ್ತಿಪಂಥದ ದಾಸವರೇಣ್ಯ ಕನಕದಾಸರು


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯ ಸಂಸ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿದರು.

ತಿಮ್ಮಪ್ಪನಾಯಕ ಎಂಬ ಹೆಸರನ್ನು ಹೊಂದಿದ್ದ ಕನಕದಾಸರು ಸೈನ್ಯದ ದಂಡನಾಯಕರಾಗಿದ್ದರು ಯುದ್ದವೊಂದರಲ್ಲಿ ಸೋತ ಅವರು ಅಪಾರವಾದ ಸಾವು ನೋವು ಕಂಡು ವೈರಾಗ್ಯ ಉಂಟಾಗಿ ಹರಿಭಕ್ತರಾದರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌. ವಿನಯ್‌ ಮಾತನಾಡಿ, ದಾಸಪರಂಪರೆಯ ಹರಿದಾಸರಲ್ಲಿ ಕನಕದಾಸರು ತಳಸಮುದಾಯದಿಂದ ಬಂದು ಜನರ ಆಡುಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ದಾಸಶ್ರೇಷ್ಠರೆನಿಸಿದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಎಸ್‌.ನಿರಂಜನಕುಮಾರ್‌, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಬಸವರಾಜು, ಕೃಷ್ಣಸ್ವಾಮಿನಾಯಕ, ಜಯಣ್ಣ, ರಾಧಗುರುರಾಜ್‌, ನಾಗೇಂದ್ರ, ಪರಶಿವಮೂರ್ತಿ ಸುರೇಶ್‌, ಪದ್ಮಾಕ್ಷಿ, ಚಾ. ಶ್ರೀ.ಜಗದೀಶ್‌, ಎ.ಜಿ.ಬಸವಣ್ಣ, ಪ್ರಭುಸ್ವಾಮಿ, ಮುಕುಂದರಾಜು, ಬಸವನಾಯಕ, ಟಿ.ಬಂಗಾರ ಗಿರಿನಾಯಕ, ಹಾಜರಿದ್ದರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ