ಆ್ಯಪ್ನಗರ

ನೀರಿನಲ್ಲಿ ಆಡುತ್ತಿದ್ದ ಒಂದೇ ಕುಟುಂಬದ 3 ಮಕ್ಕಳು ಮೃತ

ಜಮೀನಿನ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಆಟವಾಡುತ್ತಿದ್ದ ಒಂದೇ ಕುಟುಂಬದ ಮೂವರು ಮಕ್ಕಳು ಕೊಚ್ಚಿ ಹೋಗಿ ಮೃತಪಟ್ಟ ಧಾರುಣ ಘಟನೆ ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಬಳಿ ನಡೆದಿದೆ. ಹನೂರು ಕ್ಷೇತ್ರ ವ್ಯಾಪ್ತಿಯ ಪೊನ್ನಾಚಿ ಹಾಗೂ ಮರೂರು ಗ್ರಾಮದ ಬಳಿ ಬರುವ ರಾಮೇಗೌಡನ ಹಳ್ಳಿ ಗ್ರಾಮದ ಶಿವಣ್ಣ -ಜಯಮ್ಮ ದಂಪತಿ ಪುತ್ರಿಯರಾದ ನಿಖಿತ (6) ಅನುಪಮ (5) ಹಾಗೂ ಬಸವರಾಜು- ಶಿವಮ್ಮನವರ ಪುತ್ರಿ ಪ್ರಣೀತ (5) ಮೃತರು.

Vijaya Karnataka 14 Oct 2019, 5:00 am
ಹನೂರು: ಜಮೀನಿನ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಆಟವಾಡುತ್ತಿದ್ದ ಒಂದೇ ಕುಟುಂಬದ ಮೂವರು ಮಕ್ಕಳು ಕೊಚ್ಚಿ ಹೋಗಿ ಮೃತಪಟ್ಟ ಧಾರುಣ ಘಟನೆ ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಬಳಿ ನಡೆದಿದೆ. ಹನೂರು ಕ್ಷೇತ್ರ ವ್ಯಾಪ್ತಿಯ ಪೊನ್ನಾಚಿ ಹಾಗೂ ಮರೂರು ಗ್ರಾಮದ ಬಳಿ ಬರುವ ರಾಮೇಗೌಡನ ಹಳ್ಳಿ ಗ್ರಾಮದ ಶಿವಣ್ಣ -ಜಯಮ್ಮ ದಂಪತಿ ಪುತ್ರಿಯರಾದ ನಿಖಿತ (6) ಅನುಪಮ (5) ಹಾಗೂ ಬಸವರಾಜು- ಶಿವಮ್ಮನವರ ಪುತ್ರಿ ಪ್ರಣೀತ (5) ಮೃತರು.
Vijaya Karnataka Web 3 children were playing in the water died
ನೀರಿನಲ್ಲಿ ಆಡುತ್ತಿದ್ದ ಒಂದೇ ಕುಟುಂಬದ 3 ಮಕ್ಕಳು ಮೃತ


ಘಟನೆ ವಿವರ: ಸೋಲಿಗ ಸಮುದಾಯದ ರಾಮೇಗೌಡನ ಹಳ್ಳಿ ಗ್ರಾಮದ ತಾತ ಚಿನ್ನಪ್ಪಿ ಮನೆಯಲ್ಲಿದ್ದ ಈ ಮೂವರು ಮಕ್ಕಳು, ಭಾನುವಾರ ರಜೆ ಇದ್ದ ಕಾರಣ ತಾತನ ಜೊತೆ ಜಮೀನಿಗೆ ಹೋಗಿದ್ದರು. ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಜಮೀನಿನ ಪಕ್ಕದಲ್ಲಿಯೇ ಹಳ್ಳವೊಂದು ತುಂಬಿ ಹರಿಯುತ್ತಿದ್ದು, ಈ ಮೂವರು ಮಕ್ಕಳು ಆಟವಾಡಲು ನೀರಿಗೆ ಇಳಿದಿದ್ದಾರೆ. ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿದ ಮೂವರೂ ನೀರುಪಾಲಾದರು. ಮಕ್ಕಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಳ್ಳದಲ್ಲಿಹುಡುಕಾಟ ನಡೆಸಿದಾಗ ಮೂವರ ಮಕ್ಕಳ ಮೃತದೇಹ ಸಂಜೆ ವೇಳೆ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಗಂಗಾಧರ್‌, ಮಲೆ ಮಹದೇಶ್ವರ ಬೆಟ್ಟ ವೃತ್ತ ನಿರೀಕ್ಷಕ ಮಹೇಶ್‌, ಹನೂರು ತಹಸೀಲ್ದಾರ್‌ ನಾಗರಾಜ್‌, ಆರ್‌ಐ ಮಾದೇಶ್‌ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮುತ್ತಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಮೂವರು ಒಂದೇ ಕುಟುಂಬದ ಮಕ್ಕಳು: ರಾಮೇಗೌಡನ ಹಳ್ಳಿಯ ಚಿನ್ನಪ್ಪಿಯ ಮಗಳು ಜಯಮ್ಮನ ಇಬ್ಬರು ಪುತ್ರಿಯರು ಹಾಗೂ ಮಗ ಬಸವರಾಜು ಅವರ ಪುತ್ರಿಯನ್ನು ಕಳೆದುಕೊಂಡು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ