ಆ್ಯಪ್ನಗರ

ಬಳಕೆಯಾಗದೆ 56 ಲಕ್ಷ ರೂ. ವಾಪಸ್‌

ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ನಿಗದಿಯಾಗಿದ್ದ 56 ಲಕ್ಷ ರೂ. ಬಳಕೆಯಾಗದೇ ಸರಕಾರಕ್ಕೆ ವಾಪಸ್‌ ಹೋಗಿದ್ದು, ಇದಕ್ಕೆ ಕಾರಣರಾದ ಇಲಾಖಾಧಿಕಾರಿಗಳ ವಿರುದ್ಧ ಕ್ರಮ ವಹಿಸದೇ ನಿರ್ಲಕ್ಷ ್ಯ ವಹಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡುವವರೆಗೆ ಸಭೆ ನಡೆಸಬಾರದು ಎಂದು ಆರೋಪಿಸಿ ಸೋಮವಾರ ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ಸದಸ್ಯರು ಬಹಿಷ್ಕರಿಸಿ ಹೊರ ನಡೆದರು.

Vijaya Karnataka 9 Jul 2019, 5:00 am
ಚಾಮರಾಜನಗರ: ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ನಿಗದಿಯಾಗಿದ್ದ 56 ಲಕ್ಷ ರೂ. ಬಳಕೆಯಾಗದೇ ಸರಕಾರಕ್ಕೆ ವಾಪಸ್‌ ಹೋಗಿದ್ದು, ಇದಕ್ಕೆ ಕಾರಣರಾದ ಇಲಾಖಾಧಿಕಾರಿಗಳ ವಿರುದ್ಧ ಕ್ರಮ ವಹಿಸದೇ ನಿರ್ಲಕ್ಷ ್ಯ ವಹಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡುವವರೆಗೆ ಸಭೆ ನಡೆಸಬಾರದು ಎಂದು ಆರೋಪಿಸಿ ಸೋಮವಾರ ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ಸದಸ್ಯರು ಬಹಿಷ್ಕರಿಸಿ ಹೊರ ನಡೆದರು.
Vijaya Karnataka Web CHN-CHN07UM4


ಸಭೆಯ ಆರಂಭದಲ್ಲಿ ಮಲೆಯೂರು ತಾಪಂ ಸದಸ್ಯ ಕೆ.ಬಿ.ನಂದೀಶ್‌ ಮಾತನಾಡಿ, ತಾಲೂಕಿನ ಇತಿಹಾಸದಲ್ಲೇ ತಾಲೂಕು ಪಂಚಾಯಿತಿ ಅಭಿವೃದ್ಧಿ ಅನುದಾನ 56 ಲಕ್ಷ ರೂ. ಅಪವ್ಯಯವಾಗಿದ್ದು, ಜಿಲ್ಲೆಯ ಇತರೇ ತಾಲೂಕುಗಳಲ್ಲಿ ಇಂತಹ ಪರಿಸ್ಥಿತಿ ಬಂದಿಲ್ಲ. ಮೊದಲೇ ತಾಲೂಕು ಪಂಚಾಯಿತಿಗೆ ಅನುದಾನ ಬರುವುದೇ ಕಡಿಮೆ, ಅದರಲ್ಲೂ ಬಿಡುಗಡೆಯಾದ ಅನುದಾನ ಬಳಕೆ ಮಾಡಿಕೊಳ್ಳದೇ ಹೋಗುವುದು ಅಧಿಕಾರಿಗಳ ಅಸಮರ್ಥತೆ ತೋರಿಸುತ್ತದೆ. ಜತೆಗೆ 14 ಇಲಾಖೆಗಳ ಪ್ರಗತಿ ಪರಿಶೀಲನಾ ವರದಿಯಲ್ಲಿ ಇಂದು 7 ಇಲಾಖೆಗಳ ಅನುಪಾಲನಾ ವರದಿಯನ್ನು ಕೊಡಲಾಗಿದೆ. ಸಭೆ ನಡೆಯುವ ವಾರದ ಮೊದಲು ನಮಗೆ ತಲುಪಿಸಬೇಕು, ಸಭೆಯ ದಿನ ಕೊಟ್ಟರೇ ಹೇಗೆ ನಾವು ಅಧಿಕಾರಿಗಳಿಂದ ಉತ್ತರ ಪಡೆಯುವುದು, ಲೀಡ್‌ ಬ್ಯಾಂಕ್‌, ಶಿಕ್ಷ ಣ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಸಭೆ ನಡೆಸಿ, ಇಲ್ಲದಿದ್ದರೆ ಸಭೆ ನಡೆಸೋದೇ ಬೇಡ ಎಂದು ನಂದೀಶ್‌ ಹರವೆ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌.ರೇವಣ್ಣ ಸೇರಿದಂತೆ ಮಹಿಳಾ ಸದಸ್ಯರು ಹೊರ ನಡೆದರು.

ಕೆಂಪನಪುರ ತಾಪಂ ಸದಸ್ಯ ಎಚ್‌.ವಿ.ಚಂದ್ರು' ಕಾಮಗಾರಿ ನಡೆಸಿದ ಶೇ. 60ರಷ್ಟು ಬಿಲ್‌ಗಳನ್ನು ಮಾ.15ರೊಳಗೆ ಖಜಾನೆಗೆ ಸಲ್ಲಿಸಬೇಕಿತ್ತು. ಆ ದಿನಾಂಕದೊಳಗೆ ಬಿಲ್‌ಗಳನ್ನು ಸಲ್ಲಿಸದಿದ್ದರೆ, ಅದಕ್ಕೆ ಯಾರು ಹೊಣೆ ಎಂದು ಪಂಚಾಯತ್‌ ರಾಜ್‌ ಎಂಜಿನಿಯರ್‌ ಇಲಾಖೆಯ ಎಇಇ ಅವರನ್ನು ಕೇಳಿದ್ದೇ, ಅದಕ್ಕೆ ಎಇಇ ಅವರು ಬಹುತೇಕ ಭೌತಿಕ ಕಾಮಗಾರಿಗಳು ಮುಗಿದಿದ್ದು, ಮಾ.15ರೊಳಗೆ ಬಿಲ್‌ ಸಲ್ಲಿಸುವುದಾಗಿ ತಿಳಿಸಿದ್ದರು, ಒಂದು ವೇಳೆ ಬಿಲ್‌ ಸಲ್ಲಿಕೆ ವಿಳಂಬವಾದಲ್ಲಿ ಮುಂದಿನ ಕ್ರಮಕ್ಕೆ ತಾವು ಸಿದ್ಧ ಎಂದು ಹೇಳಿದ್ದರು,

ಆದ್ದರಿಂದ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮತ್ತು ಸರಕಾರಕ್ಕೆ ಪತ್ರ ಬರೆಯಿರಿ ಎಂದು ಒತ್ತಾಯಿಸಿದರು.

ತಾಪಂ ಉಪಾಧ್ಯಕ್ಷ ಬಸವಣ್ಣ 56 ಲಕ್ಷ ರೂ. ಅನುದಾನ ಬಳಕೆಯಾಗದ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಸಭೆ ನಡೆಸಲು ಸದಸ್ಯರು ಅವಕಾಶ ಮಾಡಿಕೊಡಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ಅಷ್ಟರಲ್ಲಾಗಲೇ ಬಹುತೇಕ ಎಲ್ಲ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಸದಸ್ಯರನ್ನು ಮನವೊಲಿಸಿ ಸಭೆಗೆ ಕರೆತರಲು ಹೋದ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ ಅವರ ಪ್ರಯತ್ನ ಫಲಕೊಡಲಿಲ್ಲ.

ಬಾಯಿಬಿಡದ ಅಧ್ಯಕ್ಷೆ; ತಾಪಂ ಸದಸ್ಯರ ಅಸಮಾಧಾನ

ಜಿಲ್ಲೆಯ 4 ತಾಲೂಕು ಪಂಚಾಯಿತಿಗಳಲ್ಲಿ ಚುನಾಯಿತರಾಗಿರುವ ಅಧ್ಯಕ್ಷ ರು, ಉಪಾಧ್ಯಕ್ಷ ರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತೊಡಕಿಲ್ಲ. ಆದರೆ ಚಾಮರಾಜನಗರ ತಾಪಂ ಅಧ್ಯಕ್ಷ ರು ಯಾವ ಸಭೆಯಲ್ಲೂ ಮಾತನಾಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಮಲೆಯೂರು ತಾಪಂ ಸದಸ್ಯ ಕೆ.ಬಿ.ನಂದೀಶ್‌ ಆರೋಪಿಸಿದರು.

ಪ್ರತಿಸಭೆಯಲ್ಲೂ ಅಧ್ಯಕ್ಷ ರಿಂದ ಸದಸ್ಯರಿಗೆ ಉತ್ತರ ಸಿಗುತ್ತಿಲ್ಲ. ಬದಲಾಗಿ ಉಪಾಧ್ಯಕ್ಷ ರು ಅಥವಾ ತಾಲೂಕು ಪಂಚಾಯಿತಿ ಇಒ ಅವರು ಉತ್ತರ ನೀಡಬೇಕು, ನಮಗೆ ತಾಲೂಕು ಪಂಚಾಯಿತಿ ಅಧಿಕಾರಿಯ ಉತ್ತರ ಬೇಕಿಲ್ಲ. ನಿಮ್ಮಿಂದ ಬರಬೇಕು, ಅದು ಯಾವ ಸಭೆಯಲ್ಲೂ ನಡೆಯುತ್ತಿಲ್ಲ. ಇದರಿಂದ ಅಧಿಕಾರಿಗಳು ನಿಮ್ಮ ಹಿಡಿತಕ್ಕೆ ಸಿಗುತ್ತಿಲ್ಲ. ನೀವು ಅಧಿಕಾರ ನಡೆಸಲು ಅಸಮರ್ಥರು ಎಂದು ಒಪ್ಪಿಕೊಳ್ಳಿ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ