ಆ್ಯಪ್ನಗರ

ಆನೆ ದಾಳಿ: ಚಾಲಕನ ಸಮಯಪ್ರಜ್ಞೆ ಉಳಿಸಿತು 60 ಜನರ ಪ್ರಾಣ

ಚಾಮರಾಜನಗರ: ಇತ್ತೀಚಿಗೆ ರಾಜ್ಯದಲ್ಲಿ ಆನೆ ದಾಳಿ ಹೆಚ್ಚಾಗಿದ್ದು, ಭಾನುವಾರ ಸಂಜೆ ಕೆಎಸ್ಸಾರ್ಟಿಸಿ ಬಸ್ ಮೇಲೆ ತಾಯಿ ಆನೆಯೊಂದು ದಾಳಿ ಮಾಡಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 60 ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಈ ಘಟನೆ ನಡೆದಿದೆ.

Vijaya Karnataka Web 25 Jun 2018, 1:51 pm
ಚಾಮರಾಜನಗರ: ಇತ್ತೀಚಿಗೆ ರಾಜ್ಯದಲ್ಲಿ ಆನೆ ದಾಳಿ ಹೆಚ್ಚಾಗಿದ್ದು, ಭಾನುವಾರ ಸಂಜೆ ಕೆಎಸ್ಸಾರ್ಟಿಸಿ ಬಸ್ ಮೇಲೆ ತಾಯಿ ಆನೆಯೊಂದು ದಾಳಿ ಮಾಡಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 60 ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಈ ಘಟನೆ ನಡೆದಿದೆ.
Vijaya Karnataka Web Elephant


ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಿಕ್ಕಮಗಳೂರಿನಿಂದ್ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಕೋಯಿಕ್ಕೋಡ್‌ಗೆ ತೆರಳುತ್ತಿತ್ತು. ಭಾನುವಾರ ಮುಂಜಾನೆ 7.30ಕ್ಕೆ ಚಿಕ್ಕಮಗಳೂರಿಂದ ಹೊರಟಿದ್ದ ಬಸ್ ಮೂಲೆಹೊಳೆ ಬಳಿ ಸಂಚರಿಸುತ್ತಿದ್ದಾಗ ಮಾರ್ಗ ಮಧ್ಯೆ ಆನೆಗಳ ಹಿಂಡೊಂದು ಮರಿಯೊಂದಿಗೆ ಸುತ್ತಾಡುತ್ತಿರುವುದು ಕಂಡು ಬಂದಿದೆ. ಅಲ್ಲಿಗೆ ಬಂದ ಬಸ್ ನೋಡಿದ ತಾಯಿ ಆನೆ ಘರ್ಜಿಸುತ್ತ ಬಂದು ಎರಡು ಬಾರಿ ಬಸ್‌ನ್ನು ಉರುಳಿಸಲು ಪ್ರಯತ್ನಿಸಿದೆ. ತನ್ನ ಸೊಂಡಿಲಿನಿಂದ ಆನೆ ಬಸ್ ಮೇಲೆ ದಾಳಿ ಮಾಡಿದಾಗ ನಿರಂತರವಾಗಿ ಹಾರ್ನ್ ಮಾಡಿದ ಚಾಲಕ ಬಸ್‌ ಅನ್ನು ರಿವರ್ಸ್ ತೆಗೆದುಕೊಂಡಿದ್ದು, ಆನೆಗಳ ಹಿಂಡುಗಳೆಲ್ಲ ಒಗ್ಗೂಡಿ ಬಸ್ ಮೇಲೆ ದಾಳಿ ಮಾಡುವ ಮೊದಲೇ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ.


ಚಾಲಕ ಹಾರ್ನ್ ಮಾಡುತ್ತಲೇ ಇದ್ದುದರಿಂದ ತಾಯಿ ಆನೆ ದಾಳಿಯನ್ನು ಮುಂದುವರಿಸದೆ ಮರಳಿ ಹೋಯಿತು. ಅಷ್ಟೇ ಅಲ್ಲದೆ ಪ್ರಯಾಣಿಕರು ಸಹ ಜೋರಾಗಿ ಕೂಗುತ್ತ ಆನೆಯನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಡೆಯಲಿದ್ದ ದೊಡ್ಡ ವಿಪತ್ತು ಶೀಘ್ರದಲ್ಲಿಯೇ ಶಮನವಾದಂತಾಯಿತು.

ಗುಂಪಿನಲ್ಲಿ 5 ರಿಂದ 6 ಆನೆಗಳಿದ್ದು, ತಾಯಿ ಆನೆ ಎದುರಾಗಿ ಬರುತ್ತಿದ್ದಂತೆ ಚಾಲಕ ಬಸ್ ಅನ್ನು ತಿರುಗಿಸಲು ಪ್ರಾರಂಭಿಸಿದ್ದಾನೆ. ಆದರೆ ವೇಗವಾಗಿ ಬಂದ ಆನೆ ನೋಡ ನೋಡುತ್ತಿದ್ದಂತೆ ಬಸ್ ಬಳಿ ತಲುಪಿಯೇಬಿಟ್ಟಿತು. ಆದರೆ ಚಾಲಕ ಹಾರ್ನ್ ಮಾಡುತ್ತಲೇ ಇದ್ದುದರಿಂದ ಮತ್ತು ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದರಿಂದ ಹೆದರಿದ ಆನೆ ಮರಳಿ ಹೋಯಿತು. ಇದೊಂದು ಪವಾಡವೇ ಸರಿ. ಆನೆ ಮರಳಿದಾಗ ಎಲ್ಲ ಪ್ರಯಾಣಿಕರು ಹೋದ ಜೀವ ಬಂದತಾದ ಅನುಭವವಾಗಿ ನಿಟ್ಟುಸಿರು ಬಿಟ್ಟರು- ಸಿವನ್, ಬಸ್ ಪ್ರಯಾಣಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ