ಆ್ಯಪ್ನಗರ

ಬಾಲಕನನ್ನು ಬಾವಿಗೆ ತಳ್ಳಿದ ತಾಯಿ

ಅನೈತಿಕ ಸಂಬಂಧ ಬಹಿರಂಗವಾಗುವ ಭಯದಿಂದ ಮಗನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ ಕೆರೆಗೆ ಎಸೆದ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Vijaya Karnataka 13 Oct 2018, 5:00 am
ಕೊಳ್ಳೇಗಾಲ: ಅನೈತಿಕ ಸಂಬಂಧ ಬಹಿರಂಗವಾಗುವ ಭಯದಿಂದ ಮಗನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ ಕೆರೆಗೆ ಎಸೆದ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Vijaya Karnataka Web a mother who pushed the boy to the well
ಬಾಲಕನನ್ನು ಬಾವಿಗೆ ತಳ್ಳಿದ ತಾಯಿ


ಶಿಲಕಲ್‌ಪುರ ಗ್ರಾಮದ ಸಾಕಮ್ಮ ಹಾಗೂ ನಾಗರಾಜಮೂರ್ತಿ ಬಂಧಿತ ಆರೋಪಿಗಳು. ಸಾಕಮ್ಮನ ಪುತ್ರ ಮಹದೇವಪ್ರಸಾದ್‌ ಪ್ರತೀಮ್‌(8) ಕೊಲೆಯಾದ ಬಾಲಕ. ಅ.8ರಂದು ಬಾಲಕ ಕಾಣೆಯಾಗಿರುವ ಬಗ್ಗೆ ಆತನ ತಂದೆ, ಸಾಕಮ್ಮಳ ಪತಿ ಮರಿಸ್ವಾಮಿ ದೂರು ನೀಡಿದ್ದರು. ಅ 10ರಂದು ಕಾಣೆಯಾಗಿದ್ದ ಬಾಲಕನ ಶವ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮರಿಸ್ವಾಮಿ ನನ್ನ ಮಗ ತಾನಾಗಿಯೇ ನೀರಿನಲ್ಲಿ ಮುಳುಗಿ ಸತ್ತಿಲ್ಲ. ಅವನನ್ನು ಬೇರೆ ಕಾರಣಕ್ಕೆ ಕೊಲೆ ಮಾಡಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅನೈತಿಕ ಸಂಬಂಧ: ಪ್ರತೀಮ್‌ ತಾಯಿ ಸಾಕಮ್ಮ ಅದೇ ಗ್ರಾಮದ ನಾಗರಾಜಮೂರ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಸಾಕಮ್ಮನ ಪುತ್ರ ಪ್ರತೀಮ್‌ ತನ್ನ ತಾಯಿ ನಾಗರಾಜಮೂರ್ತಿ ಜತೆ ಇದ್ದುದ್ದನ್ನು ಕಂಡು ಈ ವಿಷಯವನ್ನು ಅಪ್ಪನಿಗೆ ಹೇಳುವುದಾಗಿ ಹೇಳಿದ್ದ. ತಮ್ಮ ಅನೈತಿಕ ಸಂಬಂಧ ಬಯಲಾಗಲಿದೆ ಎಂಬ ಕಾರಣಕ್ಕೆ ಅಟವಾಡುತ್ತಿದ್ದ ಬಾಲಕನನ್ನು ಸ್ಕೂಟರ್‌ ಮೇಲೆ ಕರೆದುಕೊಂದು ಹೋಗಿ ಕೆರೆಗೆ ತಳ್ಳಿರುವ ವಿಚಾರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಾಲಕನ ಕೊಲೆ ಮಾಡಿದ ಆರೋಪ ಮೇಲೆ ಸಾಕಮ್ಮ ಮತ್ತು ಆಕೆಯ ಪ್ರಿಯಕರ ನಾಗರಾಜಮೂರ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವೃತ್ತ ನಿರೀಕ್ಷ ಕ ರಾಜಣ್ಣ, ಪಿಎಸ್‌ಐ ವನರಾಜು ತನಿಖೆ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ