ಆ್ಯಪ್ನಗರ

ಆಷಾಢ ಮಾಸ ದೇಗುಲದಲ್ಲಿ ವಿಶೇಷ ಪೂಜೆ

ಆಷಾಢ ಮಾಸದ ಮೊದಲ ಶುಕ್ರವಾರ ಚಾಮರಾಜೇಶ್ವರ ದೇಗುಲ ಸೇರಿದಂತೆ ನಗರದ ವಿವಿಧ ಚಾಮುಂಡೇಶ್ವರಿ ದೇವಾಲಯದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.

ವಿಕ ಸುದ್ದಿಲೋಕ 9 Jul 2016, 8:15 am
ಚಾಮರಾಜನಗರ: ಆಷಾಢ ಮಾಸದ ಮೊದಲ ಶುಕ್ರವಾರ ಚಾಮರಾಜೇಶ್ವರ ದೇಗುಲ ಸೇರಿದಂತೆ ನಗರದ ವಿವಿಧ ಚಾಮುಂಡೇಶ್ವರಿ ದೇವಾಲಯದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.
Vijaya Karnataka Web a special worship in the chapel of the second month
ಆಷಾಢ ಮಾಸ ದೇಗುಲದಲ್ಲಿ ವಿಶೇಷ ಪೂಜೆ


ಮುಂಜಾನೆ ದೇವಾಲಯದ ಆವರಣದಲ್ಲಿ ನೆರೆದಿದ್ದ ಮಹಿಳೆಯರು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ತಟ್ಟೆಯಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ, ದೇವಿಗೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ಚಾಮರಾಜೇಶ್ವರ ದೇಗುಲ ಪಕ್ಕದಲ್ಲಿ ಕೆಂಪನಂಜಾಂಬ, ಬಲಭಾಗದಲ್ಲಿ ಚಾಮುಂಡೇಶ್ವರಿ ದೇವಾಲಯವಿದೆ, ನಿಂಬೆಹಣ್ಣು ದೀಪವನ್ನು ಪೂಜಿಸಿದ ಬಳಿಕ ಅದನ್ನು ಅಲ್ಲೇ ಇಡಲಾಯಿತು. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಮಹಿಳೆ ಯರು ಕುಳಿತು, ಪರಸ್ವರ ತಾಳಿಪೂಜೆ ನೆರವೇರಿಸಿಕೊಂಡರು. ಶೂನ್ಯ ಮಾಸವು ಚಾಮುಂಡಿಗೆ ಪ್ರಶಸ್ತವಾಗಿದ್ದು, ಅದರಲ್ಲೂ ಶುಕ್ರವಾರ ದೇವಿಗೆ ಪ್ರಿಯ, ಇಂದು ನಾವು ಏನೂ ಇಷ್ಟಾರ್ಥ ಕೇಳಿಕೊಳ್ಳುತ್ತೇವೆಯೋ ಅದು ನಮಗೆ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಚಾಮುಂಡೇಶ್ವರಿ ದೇಗುಲಕ್ಕೆ ಮಹಿಳೆಯರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ದೇವಾಲಯದ ಅರ್ಚಕ ರಾಮಕಷ್ಣ ಭಾರದ್ವಾಜ್ ಮಾತನಾಡಿ, ಆಷಾಢ ಮಾಸದಲ್ಲಿ ಮೊದಲನೇ ಶುಕ್ರವಾರ ಚಾಮುಂಡಿಗೆ ವಿಶೇಷ ವಾರ,ಇಂದು ನಿಂಬೆಹಣ್ಣಿನ ದೀಪಹಚ್ಚಿ ಪೂಜಿಸಿದರೆ, ಒಳಿತಾಗುತ್ತದೆ ಎಂದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಮಂಜೇಶ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ