ಆ್ಯಪ್ನಗರ

ಆಕಸ್ಮಿಕ ಗುಂಡೇಟು: ಪೇದೆಗೆ ಗಾಯ

ತಾಲೂಕಿನ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿಯ ಅರಣ್ಯ ಕಚೇರಿ ಆವರಣದಲ್ಲಿ ಬುಧವಾರ ಬಂದೂಕುಗಳ ಪರಿಶೀಲನೆ ವೇಳೆ ಆಕಸ್ಮಿಕ ಗುಂಡೇಟು ತಗುಲಿ ಮುಖ್ಯಪೇದೆಯೊಬ್ಬರು ಗಾಯಗೊಂಡರು.

Vijaya Karnataka 25 Jul 2019, 5:00 am
ಚಾಮರಾಜನಗರ : ತಾಲೂಕಿನ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿಯ ಅರಣ್ಯ ಕಚೇರಿ ಆವರಣದಲ್ಲಿ ಬುಧವಾರ ಬಂದೂಕುಗಳ ಪರಿಶೀಲನೆ ವೇಳೆ ಆಕಸ್ಮಿಕ ಗುಂಡೇಟು ತಗುಲಿ ಮುಖ್ಯಪೇದೆಯೊಬ್ಬರು ಗಾಯಗೊಂಡರು.
Vijaya Karnataka Web CHN-CHN24P2


ತಮಿಳುನಾಡಿನ ಈರೋಡ್‌ ಜಿಲ್ಲೆ ಸಶಸ್ತ್ರ ಮೀಸಲು ಪಡೆಯ ಪ್ರೇಮ್‌ಕುಮಾರ್‌(40) ಗಾಯಗೊಂಡಿದ್ದು, ಅವರಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಾಮಾನ್ಯವಾಗಿ ಪೊಲೀಸರು ತಿಂಗಳಿಗೊಮ್ಮೆ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಬಳಸುವ ಬಂದೂಕು ಹಾಗೂ ರಿವಾಲ್ವಾರ್‌ಗಳನ್ನು ಪರಿಶೀಲಿಸುವುದು ಹಾಗೂ ಅವುಗಳ ಸ್ಥಿತಿಗತಿಯನ್ನು ಪರೀಕ್ಷಿಸುವುದು ನಿಯಮ. ಅದರಂತೆಯೇ ಬುಧವಾರ ಆ ಪ್ರಕ್ರಿಯೆಯನ್ನು ತಾಳವಾಡಿಯ ಅರಣ್ಯ ಇಲಾಖೆಯ ವಲಯ ಕಚೇರಿ ಆವರಣದಲ್ಲಿ ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿದ್ದು, ಅದು ಮುಖ್ಯಪೇದೆ ಪ್ರೇಮ್‌ ಕುಮಾರ್‌ ಅವರಿಗೆ ತಗುಲಿದೆ. ಹೊಟ್ಟೆ ಭಾಗಕ್ಕೆ ತಗುಲಿ ಗಾಯಗೊಂಡ ಪ್ರೇಮ್‌ಕುಮಾರ್‌ ಅವರನ್ನು ತಕ್ಷಣ ನಗರದ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ