ಆ್ಯಪ್ನಗರ

ನರ್ಸಿಂಗ್‌ ನಲ್ಲಿ ಹೇರಳ ಉದ್ಯೋಗಾವಕಾಶ

ಶುಶ್ರೂಷಕ ವೃತ್ತಿಗೆ ಜಗತ್ತಿನಾದ್ಯಂತ ಬೇಡಿಕೆಯಿದ್ದು, ಅದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡಾಗ ಉತ್ತಮ ಜೀವನ ದೊರಕುವುದರ ಜತೆಗೆ ಉನ್ನತಮಟ್ಟದ ಗೌರವ ಪ್ರಾಪ್ತವಾಗಲಿದೆ ಎಂದು ಮೈಸೂರು ಶಾಂತವೇರಿ ಗೋಪಾಲಗೌಡ ಮೆಮೋರಿಯಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಕಾಲೇಜಿನ ಡೀನ್‌ ಯಶೋಧಾ ಸಲಹೆ ನೀಡಿದರು.

Vijaya Karnataka 30 May 2018, 5:00 am
ಚಾಮರಾಜನಗರ : ಶುಶ್ರೂಷಕ ವೃತ್ತಿಗೆ ಜಗತ್ತಿನಾದ್ಯಂತ ಬೇಡಿಕೆಯಿದ್ದು, ಅದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡಾಗ ಉತ್ತಮ ಜೀವನ ದೊರಕುವುದರ ಜತೆಗೆ ಉನ್ನತಮಟ್ಟದ ಗೌರವ ಪ್ರಾಪ್ತವಾಗಲಿದೆ ಎಂದು ಮೈಸೂರು ಶಾಂತವೇರಿ ಗೋಪಾಲಗೌಡ ಮೆಮೋರಿಯಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಕಾಲೇಜಿನ ಡೀನ್‌ ಯಶೋಧಾ ಸಲಹೆ ನೀಡಿದರು.
Vijaya Karnataka Web an abundance of job opportunities in nursing
ನರ್ಸಿಂಗ್‌ ನಲ್ಲಿ ಹೇರಳ ಉದ್ಯೋಗಾವಕಾಶ


ನಗರದ ಮನೋ ನಿಧಿನರ್ಸಿಂಗ್‌ ಶಾಲೆಯಿಂದ ಮಂಗಳವಾರ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಜ್ಯೋತಿಬೆಳಗುವಿಕೆ ಹಾಗೂ ಪ್ರತಿಜ್ಞಾವಿಧಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಫ್ಲಾರೆನ್ಸ್‌ ನೈಟಿಂಗೇಲ್‌ ಅವರು ಸ್ವತಃ ಶುಶ್ರೂಷಕರಾಗಿ, ಮಿಲಿಟರಿಯಲ್ಲಿ ಸೇರ್ಪಡೆಯಾಗಿ ಯುದ್ದದಲ್ಲಿ ಹೋರಾಟಮಾಡಿ ಗಾಯಗೊಂಡ ಸೈನಿಕರ ಶುಶ್ರೂಷೆ ಮಾಡಿದರು. ಅವರ ನಗುಮೊಗದಿಂದ ಮಾಡುವ ಸೇವೆಗಾಗಿಯೇ ಬಹಳಷ್ಟುಮಂದಿ ಗುಣವಾಗುತ್ತಿದ್ದರು. ಶುಶ್ರೂಷಕರಾದವರಿಗೆ ತಾಳ್ಮೆ ಜತೆಗೆ ಏಕಾಗ್ರತೆ ಬೇಕು. ಇಂದಿನ ಯುವ ಮನಸ್ಸುಗಳು ಮೊಬೈಲ್‌, ಫೇಸ್‌ ಬುಕ್‌, ವಾಟ್ಸಪ್‌ನಂಥ ಆಕರ್ಷಣೆಗೆ ಒಳಗಾಗಿ ಅಮೂಲ್ಯವಾದ ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ. ನರ್ಸಿಂಗ್‌ ಕೋರ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಕೈಗಾರಿಕಾಕ್ಷೇತ್ರ, ಶಾಲಾಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಾಲಾಮುಖ್ಯಶುಶ್ರೂಷಕರಾಗಿ ಸೇವೆ ಸಲ್ಲಿಸುವ ಅವಕಾಶಗಳಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿದ್ದ ಮನೋನಿಧಿ ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ ಶೈಲಜಾಕೃಪಾನಿಧಿ ಮಾತನಾಡಿ, ಶುಶ್ರೂಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠವಾಗಿದೆ. ವೃತ್ತಿಯನ್ನು ಮೇಲುಕೀಳು ಎನ್ನಬಾರದು. ನೀವು ನಿರ್ವಹಿಸುವ ಕೆಲಸಕ್ಕೆ ಗೌರವ ನೀಡಬೇಕು. ಸದಾಮುಗುಳ್ನಗುತ್ತ ರೋಗಿಗಳಿಗೆ ಸೇವೆ ನೀಡಬೇಕು. ಇದೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಜ್ಞಾವಿಧಿ ಭೋದಿಸಲಾಯಿತು.

ಪ್ರಾಂಶುಪಾಲ ಸಿಬಿಲ್‌ಸಿ ವರ್ಗೀಸ್‌ ವಾರ್ಷಿಕವರದಿ ಮಂಡಿಸಿದರು.

ಚಾಮರಾಜನಗರ ಸೆಂಟ್‌ಜೋಸೆಫ್‌ ಆಸ್ಪತ್ರೆಆಡಳಿತಾಧಿಕಾರಿ ಜೂಲಿಯಾನ, ಮನೋನಿಧಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಆಲ್ಬರ್ಟ್‌ಮನೋಜ್‌, 15 ನೇ ಬ್ಯಾಚ್‌ ಜಿಎನ್‌ಎಂ, 6 ನೇ ಬ್ಯಾಚ್‌ಬಿಎಸ್ಸಿ ನರ್ಸಿಂಗ್‌, 4 ನೇ ಬ್ಯಾಚ್‌ ಪ್ಯಾರಾಮೆಡಿಕಲ್‌, ಜೆಎಸ್‌ಎಸ್‌ ನರ್ಸಿಂಗ್‌, ಸರಕಾರಿ ಶುಶ್ರೂಷಕರ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ನರ್ಸಿಂಗ್‌ ಕೋರ್ಸ್‌ ಮಾಡುವ ವಿದ್ಯಾರ್ಥಿಗಳಿಗೆ ದೇಶದಲ್ಲಿ ಅಲ್ಲದೇ ಅಂತಾ ರಾಷ್ಟ್ರೀಯಮಟ್ಟದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸಮಯದ ಸದುಪಯೋಗ, ಮೊಬೈಲ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಗ್ಗೆ ಗಮನ ನೀಡದೇ ಅಧ್ಯಯನಶೀಲರಾಗಬೇಕು.

-ಯಶೋಧಾ, ಡೀನ್‌ , ಶಾಂತವೇರಿಗೋಪಾಲಗೌಡ ಮೆಮೋರಿಯಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಮೈಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ