ಆ್ಯಪ್ನಗರ

ಆಷಾಢ ಶುಕ್ರವಾರ; ದೇವಾಲಯಗಳಲ್ಲಿ ಭಕ್ತರ ದಂಡು

ಆಷಾಢ ಶುಕ್ರವಾರದ ಅಂಗವಾಗಿ ನಗರದ ಚಾಮರಾಜೇಶ್ವರ ಹಾಗೂ ಕಾಳಮ್ಮನಗುಡಿ ಬೀದಿಯಲ್ಲಿರುವ ಕಾಳಿಕಾಂಬ ಕಮಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಜರುಗಿದವು.

Vijaya Karnataka 21 Jul 2018, 5:00 am
ಚಾಮರಾಜನಗರ : ಆಷಾಢ ಶುಕ್ರವಾರದ ಅಂಗವಾಗಿ ನಗರದ ಚಾಮರಾಜೇಶ್ವರ ಹಾಗೂ ಕಾಳಮ್ಮನಗುಡಿ ಬೀದಿಯಲ್ಲಿರುವ ಕಾಳಿಕಾಂಬ ಕಮಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಜರುಗಿದವು.
Vijaya Karnataka Web ashada friday temple
ಆಷಾಢ ಶುಕ್ರವಾರ; ದೇವಾಲಯಗಳಲ್ಲಿ ಭಕ್ತರ ದಂಡು


ಶುಕ್ರವಾರ ನಗರದ ನಾನಾ ಬಡಾವಣೆಯಿಂದ ಆಗಮಿಸಿದ ಮಹಿಳೆಯರು ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಒಳಾವರಣದಲ್ಲಿರುವ ಚಾಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತ ಮಹಿಳಾ ಭಕ್ತರು ನಿಂಬೆಹಣ್ಣನ್ನು ಹೋಳು ಮಾಡಿ, ದೀಪಗಳನ್ನು ಇಟ್ಟು ಪೂಜೆ ಸಲ್ಲಿಸಿ ತಮಗೆ ಆರೋಗ್ಯ ಕೊಡಮ್ಮ ಎಂದು ವರವ ಬೇಡಿದರು.

ಪರಸ್ವರತಾಳಿ ಪೂಜೆ; ನಿಂಬೆಹಣ್ಣಿನ ದೀಪ ಪೂಜೆ ಸಲ್ಲಿಸಿದ ನಂತರ ಆವರಣದಲ್ಲಿ ಸಮಾವೇಶಗೊಂಡ ಮಹಿಳೆಯರು, ತಟ್ಟೆಯಲ್ಲಿ ಅಕ್ಕಿ, ಬಾಳೆಹಣ್ಣು, ಹೂ ಎಲೆ ಅಡಿಕೆ ಇಟ್ಟು ಪರಸ್ವರ ತಾಳಿಪೂಜೆ ನೆರವೇರಿಸಿದರು. ಪ್ರಾಂಗಣದಲ್ಲಿ ಹಚ್ಚಿ ಇಟ್ಟಿದ್ದ ದೀಪಗಳು ಬೆಳಗುತ್ತಿದ್ದ ದೃಶ್ಯ ನೋಡುಗರನ್ನು ಆಕರ್ಷಿಸಿತು.

ದೇವಸ್ಥಾನದಲ್ಲಿ ನೆರೆದಿದ್ದ ಮಹಿಳಾ ಭಕ್ತರು, ಚಾಮುಂಡೇಶ್ವರಿ ಅಮ್ಮನಿಗೆ ಪೂಜೆ ಸಲ್ಲಿಸಿ, ನಂತರ ಚಾಮರಾಜೇಶ್ವರ, ಕೆಂಪನಂಜಾಂಬ ದೇವಿಗೂ ಪೂಜೆ ಸಲ್ಲಿಸಿ, ವರವಕೊಡೆ, ಚಾಮುಂಡಿ ವರವ ಕೊಡೆ ಎಂದು ಮನಸಾರೆ ಬೇಡಿದರು, ನಂತರ ಪರಸ್ವರ ಆಷಾಢ ಶುಕ್ರವಾರದ ಶುಭಾಶಯ ಕೋರಿದರು.

ಆಷಾಢ ಮಾಸ ತಾಯಿ ಚಾಮುಂಡಾಂಬೆಗೆ ವಿಶೇಷವಾಗಿದ್ದು, ಇವಳನ್ನು ಪೂಜಿಸಿ ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದ್ದು, ಆ ನಿಟ್ಟಿನಲ್ಲಿ ಇಂದು ದೇವಸ್ಥಾನಕ್ಕೆ ಆಗಮಿಸಿ ನಿಂಬೆಹಣ್ಣಿನ ದೀಪ ಹಚ್ಚಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾಳಿಕಾಂಬ ದೇಗುಲದಲ್ಲೂ: ನಗರದ ಕಾಳಿಕಾಂಬ ಕಮಠೇಶ್ವರ ದೇಗುಲದಲ್ಲೂ ಕೂಡಾ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಜರುಗಿದವು. ಬಂದ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿತರಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ