ಆ್ಯಪ್ನಗರ

ಆಸ್ಪತ್ರೆ ವೈದ್ಯರಿಗೆ ಶಾಸಕ ಮಹೇಶ್‌ ತರಾಟೆ

ಪಟ್ಟಣದ ಆಸ್ಪತ್ರೆಯಲ್ಲಿ ಶಿಸ್ತು ಪಾಲನೆ ಮಾಡದಿದ್ದರೆ, ಅದನ್ನು ಹೇಗೆ ಮಾಡಿಸಬೇಕೆಂಬುದು ನಮಗೆ ಗೊತ್ತಿದೆ ಎಂದು ಶಾಸಕ ಎನ್‌.ಮಹೇಶ್‌ ಉಪವಿಭಾಗ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka 24 Nov 2019, 5:00 am
ಕೊಳ್ಳೇಗಾಲ: ಪಟ್ಟಣದ ಆಸ್ಪತ್ರೆಯಲ್ಲಿ ಶಿಸ್ತು ಪಾಲನೆ ಮಾಡದಿದ್ದರೆ, ಅದನ್ನು ಹೇಗೆ ಮಾಡಿಸಬೇಕೆಂಬುದು ನಮಗೆ ಗೊತ್ತಿದೆ ಎಂದು ಶಾಸಕ ಎನ್‌.ಮಹೇಶ್‌ ಉಪವಿಭಾಗ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಶಾಸಕ ಎನ್‌, ಮಹೇಶ್‌ ಬೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.


ಉಪ ವಿಭಾಗಾ ಆಸ್ಪತ್ರೆಗೆ ತಮ್ಮ ಸಂಬಂಧಿಕರ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದ ವೇಳೆ ಆಸ್ಪತ್ರೆ ಸಿಬ್ಬಂದಿ ಸಮವಸ್ತ್ರ ಧರಿಸಿದೆ ಇರುವುದು, ವೈದ್ಯರು ಹಾಗೂ ಸಿಬ್ಬಂದಿ ಗೈರು ಹಾಜರಾಗಿರುವುದು ಗಮನಕ್ಕೆ ಬಂತು. ಹಾಜರಾತಿ ಪುಸ್ತಕ ತಂದು ಪರಿಶೀಲಿಸಿದಾಗ ಓರ್ವ ಸಿಬ್ಬಂದಿ ಹಾಗೂ ಐವರು ವೈದ್ಯರು ಗೈರು ಹಾಜರಾಗಿದ್ದರು. ಇಂದು ಸರಕಾರಿ ರಜೆ ಇರುವುದರಿಂದ ಕೆಲವು ಸಿಬ್ಬಂದಿಗೆ ರಜೆ ಇರುವುದರಿಂದ ಬಂದಿಲ್ಲಎಂಬುದು ಶಾಸಕರ ಗಮನಕ್ಕೆ ಬಂತು. ಅಂತಹವರನ್ನು ಹೊರತುಪಡಿಸಿ ಗೈರು ಹಾಜರಾಗಿರುವ ಉಳಿದವರಿಗೆ ನೊಟೀಸ್‌ ನೀಡುವಂತೆ ಡಿಎಚ್‌ಒಗೆ ಕರೆ ಮಾಡಿ ಸೂಚಿಸಿದರು.

ನಂತರ ಮಾತನಾಡಿದ ಅವರು, ಆಸ್ಪತ್ರೆ ಸಂತೆ ಮಾದರಿಯಲ್ಲಿದೆ. ಇಲ್ಲಿಶಿಸ್ತು ಇಲ್ಲವೇ ಇಲ್ಲ, 15 ಜನ ಹೊರಗುತ್ತಿಗೆದಾರರು ಹಾಗೂ ದಾದಿಯರು ಸಮವಸ್ತ್ರವನ್ನೆ ಧರಿಸಿಲ್ಲ, ಸಿಬ್ಬಂದಿ ಯಾರು ಎಂಬುದೆ ತಿಳಿಯದೆ ಜನ ಪರದಾಡುವಂತಾಗಿದೆ. ಚಿಕಿತ್ಸೆಗೆ ಬಂದ ಜನರನ್ನು ಸಾಲಾಗಿ ನಿಲ್ಲಿಸುವ ಕಾರ್ಯವನ್ನೂ ಮಾಡಿಲ್ಲ, ಇದೀಗ ಬರಿ ಎಚ್ಚರಿಕೆ ನೀಡಿದ್ದೇನೆ. ಇದೇ ರೀತಿ ಮುಂದುವರಿದರೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ