ಆ್ಯಪ್ನಗರ

ಪಿಡಿಒ, ಕಾರ್ಯದರ್ಶಿ ಮೇಲೆ ಬಿಲ್‌ ಕಲೆಕ್ಟರ್‌ ಹಲ್ಲೆ

ಕರ ವಸೂಲಿ ಮಾಡಿದ ಹಣವನ್ನು ಪಾವತಿಸುವಂತೆ ಕೇಳಿದ ಪಿಡಿಒ ಮತ್ತು ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದಿದ್ದು, ಆರೋಪಿ ಬಿಲ್‌ ಕಲೆಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka 9 Aug 2019, 5:00 am
ಕೊಳ್ಳೇಗಾಲ: ಕರ ವಸೂಲಿ ಮಾಡಿದ ಹಣವನ್ನು ಪಾವತಿಸುವಂತೆ ಕೇಳಿದ ಪಿಡಿಒ ಮತ್ತು ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದಿದ್ದು, ಆರೋಪಿ ಬಿಲ್‌ ಕಲೆಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web assaults pdo secretary
ಪಿಡಿಒ, ಕಾರ್ಯದರ್ಶಿ ಮೇಲೆ ಬಿಲ್‌ ಕಲೆಕ್ಟರ್‌ ಹಲ್ಲೆ


ಸತ್ತೇಗಾಲ ಗ್ರಾ.ಪಂ.ಬಿಲ್‌ ಕಲೆಕ್ಟರ್‌ ನಾಗಸುಂದ್ರ ಬಂಧಿತ ಆರೋಪಿ. ಪಿಡಿಒ ನಮಿತ ತೇಜೇಗೌಡ, ಕಾರ್ಯದರ್ಶಿ ಲೊಕೇಶ್‌ ಹಲ್ಲೆಗೊಳಗಾದವರು.

ನಾಗಸುಂದ್ರ ಸತ್ತೇಗಾಲ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ ಕಲೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ವಸೂಲಾದ ಹಣವನ್ನು ಪಾವತಿ ಮಾಡುತ್ತಿರಲಿಲ್ಲ. ಈ ಕುರಿತು ಪಿಡಿಒ ನಮಿತ ತೇಜೇಗೌಡ ವಸೂಲಾದ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡದೆ ಇರುವ ಬಗ್ಗೆ ನೋಟಿಸ್‌ ನೀಡಿದ್ದರು, ಬುಧವಾರ ಮಧ್ಯಾಹ್ನ ಬಿಲ್‌ ಕಲೆಕ್ಟರ್‌ ನಾಗಸುಮದ್ರ ಕಚೇರಿಗೆ ಸಮಜಾಯಿಸಿ ನೀಡಲು ಬಂದು ವಸೂಲಾದ ಹಣವನ್ನು ಹಿಂದೆ ಇದ್ದ ಪಿಡಿಒಗೆ ಕೊಟ್ಟಿದ್ದೇನೆ ಎಂದು ಹೇಳಿದರು. ಹಣ ಸಂದಾಯ ಮಾಡಿರುವ ಬಗ್ಗೆ ದಾಖಲೆಯನ್ನು ಕೊಡುವಂತೆ ಪಿಡಿಒ ಕೇಳಿದರು. ಮತ್ತೊಂದು ನೋಟಿಸ್‌ ನೀಡುವಂತೆ ಕಾರ್ಯದರ್ಶಿಗೆ ಪಿಡಿಒ ಸೂಚಿಸಿದ್ದರು. ಈ ವೇಳೆ ನಾಗಸುಂದ್ರ ವಾಪಸ್‌ ಹೋಗಿದ್ದ.

ಮತ್ತೆ 7-30ಕ್ಕೆ ಹಿರಿಯ ಅಧಿಕಾರಿಗಳಿಗೆ ನೀಡಲು ವರದಿ ಸಿದ್ಧಪಡಿಸುತ್ತಿದ್ದ ವೇಳೆ ಬಂದ ನಾಗಸುಂದ್ರ ಕಂಪ್ಯೂಟರ್‌ ಅಪರೇಟರ್‌ ಮಹದೇವರ ಜತೆ ಜಗಳ ತೆಗೆದು ಜತೆಯಲ್ಲಿ ತಂದಿದ್ದ ಕಲ್ಲಿನ್ನು ಜೋರಾಗಿ ಬಿಸಾಡಿದ, ಕಲ್ಲು ಪಿಡಿಒ ಎಡ ಭುಜಕ್ಕೆ ಬಿದ್ದಿತು. ನಂತರ ಕಾರ್ಯದರ್ಶಿ ಮೇಲೆಯೂ ಕೈಯಿಂದ ಹಲ್ಲೆ ನಡೆಸಿದ. ಕಾರ್ಯದರ್ಶಿ ಲೊಕೇಶ್‌ರವರನ್ನು ತಡೆಯಲು ಹೋದಾಗ ಪಿಡಿಒ ಕಪಾಳಕ್ಕೆ ಒಡೆದಿದ್ದು, ಈ ವೇಳೆ ಪೊಲೀಸರಿಗೆ ಕರೆ ಮಾಡುತ್ತೇನೆ ಎಂದರೂ ಲೆಕ್ಕಿಸದೆ ಹಲ್ಲೆಗೆ ಮುಂದಾದ. ಈ ವೇಳೆ ಹೊರಗಡೆ ಇದ್ದ ಗ್ರಾಮಸ್ಥರು ಕಚೇರಿಗೆ ಆಗಮಿಸಿ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಿದ್ದಂತೆ ಆರೋಪಿ ಸ್ಥಳಿಂದ ಕಾಲ್ಕಿತ್ತ. ಈ ವೇಳೆ ಹಲ್ಲೆಗೊಳಗಾದವರನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಜತೆಗೆ ನಾನು ಮತ್ತು ಕಾರ್ಯದರ್ಶಿ ಲೊಕೇಶ್‌ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವುದರಿಂದ ನಾಗಸುಂದ್ರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿಡಿಒ ನಮಿತ ತೇಜೇಗೌಡ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನಾಗಸುಂದ್ರನನ್ನು ಬಂಧಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಆಸ್ಪತ್ರೆಗೆ ಬೇಟಿ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಸತ್ತೇಗಾಲ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌ನಿಂದ ಹಲ್ಲೆಗೊಳಗಾಗಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಡಿಒ ನಮಿತಾ ತೇಜೇಗೌಡ ಮತ್ತು ಕಾರ್ಯದರ್ಶಿ ಲೊಕೇಶ್‌ ಅವರ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ತಪ್ಪಿತಸ್ಥ ಬಿಲ್‌ಕಲೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ