ಆ್ಯಪ್ನಗರ

ಆತ್ಮಸ್ಥೈರ್ಯ ತುಂಬಿದ ವಿಜಯೀಭವ

ವಿಜಯ ಕರ್ನಾಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೊಳ್ಳೇಗಾಲದ ಲಯನ್ಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿಗುರುವಾರ ಆಯೋಜಿಸಿದ್ದ 'ವಿಜಯೀಭವ' ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ನಿರ್ವಹಣೆ ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Vijaya Karnataka 11 Jan 2020, 5:00 am
ಕೊಳ್ಳೇಗಾಲ : ವಿಜಯ ಕರ್ನಾಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೊಳ್ಳೇಗಾಲದ ಲಯನ್ಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿಗುರುವಾರ ಆಯೋಜಿಸಿದ್ದ 'ವಿಜಯೀಭವ' ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ನಿರ್ವಹಣೆ ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
Vijaya Karnataka Web vijayibhava


ನಗರ ವ್ಯಾಪ್ತಿಯ 20ಕ್ಕೂ ಹೆಚ್ಚು ವಿವಿಧ ಶಾಲೆಗಳ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಿರ್ಭಿತಿಯಿಂದ ಬರೆಯಬೇಕು. ಉತ್ತಮ ಅಂಕ ಪಡೆಯಬೇಕೆಂಬ ಸಂಕಲ್ಪದೊಂದಿಗೆ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಆಗಮಿಸಿದ್ದರು. ತಜ್ಞರು ನೀಡಿದ ಸಲಹೆ-ಸೂಚನೆಗಳನ್ನು ಗಮನವಿಟ್ಟು ಆಲಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿತ್ವ ವಿಕಸನ ತಜ್ಞ ಆರ್‌.ಎ.ಚೇತನ್‌ರಾಮ್‌ ಅವರು ಪರೀಕ್ಷೆ ಎದುರಿಸುವ ಕ್ರಮದ ಬಗ್ಗೆ ತಮ್ಮದೇ ಆದ ವಿಶೇಷ ಶೈಲಿಯಲ್ಲಿವಿವರಿಸಿ ಮಕ್ಕಳಲ್ಲಿಆತ್ಮವಿಶ್ವಾಸ ತುಂಬಿದರು.

ಏಕಾಗ್ರತೆ, ಸ್ಮರಣ ಶಕ್ತಿ ಹೆಚ್ಚಿಸುವ ಟಿಫ್ಸ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು, ಪರೀಕ್ಷೆಯನ್ನು ಹಬ್ಬದಂತೆ ಬರಮಾಡಿಕೊಂಡು ಉತ್ತಮ ಸಾಧನೆ ತೋರುವ ಆತ್ಮಸ್ಥೆರ್ಯ ವ್ಯಕ್ತಪಡಿಸಿದರು.

ಮತ್ತೊಬ್ಬ ಉಪನ್ಯಾಸಕರಾದ ಶಿಕ್ಷಕ ಎಸ್‌.ಮುರುಗೇಶ್‌ ಅವರು ಇಂಗ್ಲಿಷ್‌ ಬಗೆಗಿನ ಭಯವನ್ನು ಹೋಗಲಾಡಿಸಿದರು.

ಸಹಕಾರ: ಲಯನ್ಸ್‌ ಶಿಕ್ಷಣ ಸಂಸ್ಥೆ, ಎಚ್‌.ಕೆ.ಟ್ರಸ್ಟ್‌, ಜೆಎಸ್‌ಬಿ ಪ್ರತಿಷ್ಠಾನ, ರೋಟರಿ ಸಂಸ್ಥೆ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದವು.

ಪರೀಕ್ಷೆ ನಿಮ್ಮ ತಮ್ಮನಿದ್ದಂತೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಪೆಡಂಭೂತದಂತೆ ಕಾಣದೇ ಸಹೋದರನಂತೆ ಕಂಡರೆ ಸುಲಭವಾಗಿ ಯಶಸ್ಸು ಗಳಿಸಬಹುದು ಎಂದು ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದತ್ತೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

'ವಿಜಯೀಭವ' ಕಾರ್ಯಾಗಾರವನ್ನು ಉದ್ಘಾಟಿಸ ಮಾತನಾಡಿದ ಅವರು, ''ಪರೀಕ್ಷೆಯೇ ನನ್ನ ತಮ್ಮ. ನಾನೇ ಅದರ ಅಣ್ಣ ಎಂಬ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪೆಡಂಭೂತದಂತೆ ಕಂಡರೆ ಆ ಭಯದಲ್ಲೇ ಎಲ್ಲಮರೆಯುವ ಸಾಧ್ಯತೆ ಇರುತ್ತದೆ'' ಎಂದು ಹೇಳಿದರು.

''ಆಕಸ್ಮಿಕವಾಗಿ ಫಲಿತಾಂಶದಲ್ಲಿಏರುಪೇರಾದರೂ ವಿಚಲಿತರಾಗದೆ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಜೀವನ ಅಮೂಲ್ಯವಾದದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು'' ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಮಂಜುನಾಥ್‌ ಮಾತನಾಡಿ, ''ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖಘಟ್ಟ. ಅದನ್ನು ಎದುರಿಸಲು ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಯೋಜನಾ ಬದ್ಧ ಕಲಿಕೆ, ಓದು ಅವಶ್ಯ. ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅಗತ್ಯವಾದ ವಿಶೇಷ ತರಗತಿ, ಪೋಷಕರ ಸಭೆಗಳನ್ನು ನಡೆಸಲಾಗುತ್ತಿದೆ'' ಎಂದು ಹೇಳಿದರು.

ಎಚ್‌.ಕೆ.ಟ್ರಸ್ಟ್‌ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್‌ ಮಾತನಾಡಿದರು. ಲಯನ್ಸ್‌ ಸಂಸ್ಥೆಯ ನಾಗರಾಜು, ರೋಟರಿ ಮಿಡ್‌ಟೌನ್‌ ಅಧ್ಯಕ್ಷ ಗಿರೀಶ್‌ ಜಡೆ, ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್‌, ಲಯನ್ಸ್‌ ಶಾಲೆ ಮುಖ್ಯ ಶಿಕ್ಷಕಿ ಮೇಬಲ್‌ ಇತರರು ಹಾಜರಿದ್ದರು.

ವಿಜಯ ಕರ್ನಾಟಕ ಕಿರಿಯ ಸಹಾಯಕ ಸಂಪಾದಕ ಶಿವಮೂರ್ತಿ ಜುಪ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾಮರಾಜನಗರ ವರದಿಗಾರ ಫಾಲಲೋಚನ ಆರಾಧ್ಯನಿರೂಪಿಸಿದರು. ಕೊಳ್ಳೇಗಾಲ ವರದಿಗಾರ ಕೋಟಂಬಳ್ಳಿ ಗುರುಸ್ವಾಮಿ ಸ್ವಾಗತಿಸಿದರು. ಕೆ.ಗೋವಿಂದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ