ಆ್ಯಪ್ನಗರ

ತಂಬಾಕು ಸೇವನೆ ವಿರುದ್ಧ ಅರಿವು ಮೂಡಿಸಿ

ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಸೇವನೆ ನಿಷೇಧ( ಕೋಟ್ಪಾ) ಕಾಯಿದೆಯಡಿ ಕಳೆದ ಎರಡೂವರೆ ವರ್ಷದಲ್ಲಿ 9199 ಪ್ರಕರಣಗಳು ದಾಖಲಾಗಿದ್ದು, 8.42ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್‌ಗೌಡ ತಿಳಿಸಿದರು.

Vijaya Karnataka Web 2 Jul 2016, 5:15 am
ಚಾಮರಾಜನಗರ: ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಸೇವನೆ ನಿಷೇಧ( ಕೋಟ್ಪಾ) ಕಾಯಿದೆಯಡಿ ಕಳೆದ ಎರಡೂವರೆ ವರ್ಷದಲ್ಲಿ 9199 ಪ್ರಕರಣಗಳು ದಾಖಲಾಗಿದ್ದು, 8.42ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್‌ಗೌಡ ತಿಳಿಸಿದರು.
Vijaya Karnataka Web awareness against tobacco
ತಂಬಾಕು ಸೇವನೆ ವಿರುದ್ಧ ಅರಿವು ಮೂಡಿಸಿ


ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಘಟಕ ವತಿಯಿಂದ ನಡೆದ’ ತಂಬಾಕು ಸೇವನೆ ದುಷ್ಪರಿಣಾಮ ಗಳು ಹಾಗೂ ಕೋಟ್ಪಾ ಕಾಯಿದೆ ಅನುಷ್ಠಾನ’ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿವರ್ಷ ಪೊಲೀಸ್ ಇಲಾಖೆ ಮಟ್ಟದಲ್ಲಿ ಹಾಗೂ ಸಂಘ ಸಂಸ್ಥೆಗಳ ಮುಖಂಡರಿಗೆ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯಿದೆ ಕೋಟ್ಪಾ ಅನುಷ್ಠಾನ ಕುರಿತ ಕಾರ್ಯಾಗಾರವನ್ನು ಏರ್ಪಡಿಸುತ್ತ ಬಂದಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುವುದು ಕಾನೂನು ಪ್ರಕಾರ ಅಪರಾಧ, ಆ ನಿಟ್ಟಿನಲ್ಲಿ 2014 ರಲ್ಲಿ 2163 ಪ್ರಕರಣಗಳಿಗೆ 2 ಲಕ್ಷ ರೂ. ದಂಡ, 2015 ರಲ್ಲಿ 5898 ಪ್ರಕರಣಗಳಿಗೆ 5.29 ಲಕ್ಷ ರೂ.ದಂಡ, ಈ ವರ್ಷ 1132 ಪ್ರಕರಣಗಳಿಗೆ 92 ಸಾವಿರ ರೂ.ಗಳ ದಂಡ ವಸೂಲು ಮಾಡಲಾಗಿದೆ ಎಂದರು.

ಫಲಕ ಪ್ರದರ್ಶಿಸಿ: ಅಂಗಡಿ ಮಾಲೀಕರು 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನ ಸೇವನೆಯಿಂದ ದೂರವಿದ್ದು, ಅದರಿಂದಾಗುವ ದುಷ್ಪರಿಣಾಮ ಕುರಿತ ನಾಮಫಲಕವನ್ನು ತಪ್ಪದೇ ಪ್ರದರ್ಶಿಸಬೇಕು. ಅದೇ ರೀತಿ ಶಾಲಾವರಣದಿಂದ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ಇನ್ನೊಂದು ಗಂಭೀರವಿಚಾರವೆಂದರೆ, ಕೋಟ್ಪಾ ಕಾಯಿದೆ ಪ್ರಕಾರ’ ತಂಬಾಕು ಉತ್ಪನ್ನದ ಗುಣಮಟ್ಟವನ್ನು ಸಾರ್ವಜನಿಕರಿಗೆ ಪ್ರಚಾರ ಮಾಡುವ ಹಾಗಿಲ್ಲ. ಇದರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದರ ಜತೆಗೆ, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಅವಕಾಶವಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಕಣ್ಗಾವಲು ಘಟಕಾಧಿಕಾರಿ ನಾಗರಾಜು ಮಾತನಾಡಿ, ಪ್ರತಿವರ್ಷ ಪ್ರಪಂಚದ ವಿವಿಧೆಡೆ 50 ರಿಂದ 55 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ ವಿಶ್ವಆರೋಗ್ಯ ಸಂಸ್ಥೆ ವರದಿ ಪ್ರಕಾರ 9 ರಿಂದ 10 ಲಕ್ಷ ಮಂದಿ ಸಾಯುತ್ತಿದ್ದಾರೆ. ಸಂಭವಿಸುವ 10 ಸಾವಿರಗಳ ಪೈಕಿ 1 ಸಾವು ತಂಬಾಕು ಸೇವನೆಯಿಂದ ಜರುಗಲಿದೆ, ಅದೇ ರೀತಿ ಮೂವರು ಕ್ಯಾನ್ಸರ್ ರೋಗಿಗಳ ಪೈಕಿ ಒಬ್ಬ ತಂಬಾಕು ಚಟಕ್ಕೆ ಬಿದ್ದವನಾಗಿರುತ್ತಾನೆ ಎಂದರು. ಕೊಳ್ಳೇಗಾಲ ಡಿವೈಎಸ್‌ಪಿ ಸುರೇಶ್‌ಬಾಬು ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಪಾಂಡು ವಿಜಯನ್, ಜಿಲ್ಲಾಮಲೇರಿಯಾ ನಿಯಂತ್ರಣಾಧಿಕಾರಿ ಅನಿಲ್‌ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕೋಟ್ಪಾ ಕಾಯಿದೆ 7ಎ ಪ್ರಕಾರ ತಂಬಾಕು ಉತ್ಪನ್ನಗಳ ಮೇಲೆ ಶೇ85 ರಷ್ಟು ದುಷ್ಪರಿಣಾಮ ಬೀರುವ ಅಂಶಗಳ ಚಿಹ್ನೆಯನ್ನು ಮುದ್ರಿಸಿ, ಜನರಲ್ಲಿ ಅರಿವು ಮೂಡಿಸಬೇಕು. ನಾವು ಕಾರ್ಯಾಚರಣೆ ಕೈಗೊಂಡಿದ್ದ ಸಂದರ್ಭದಲ್ಲಿ ಶೇ 45 ರಷ್ಟು ಮಾತ್ರ ಅಂಶಗಳಿದ್ದ ಚಿಹ್ನೆ ಇದ್ದದ್ದು ಕಂಡುಬಂತು. ನಿಯಮ ಮೀರಿದರೆ ದಂಡವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಇದು ಗ್ರಾಮಾಂತರ ಪ್ರದೇಶಗಳಿಗೂ ಅನ್ವಯವಾಗುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. - ಡಾ.ಪಾಂಡುವಿಜಯನ್, ಜಿಲ್ಲಾ ಆರೋಗ್ಯಾಧಿಕಾರಿ, ಚಾ.ನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ