ಆ್ಯಪ್ನಗರ

ಬಿ.ರಂ.ಬೆಟ್ಟಕ್ಕೆ ಬಾಬಾ ರಾಮದೇವ್‌ ಭೇಟಿ

ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನ ಬೆಟ್ಟಕ್ಕೆ ಯೋಗ ಗುರು, ಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್‌ ಭೇಟಿ ನೀಡಿದರು.

Vijaya Karnataka 25 Jul 2018, 5:00 am
ಯಳಂದೂರು (ಚಾಮರಾಜನಗರ): ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನ ಬೆಟ್ಟಕ್ಕೆ ಯೋಗ ಗುರು, ಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್‌ ಭೇಟಿ ನೀಡಿದರು.
Vijaya Karnataka Web baba ramdev visits b ram hill
ಬಿ.ರಂ.ಬೆಟ್ಟಕ್ಕೆ ಬಾಬಾ ರಾಮದೇವ್‌ ಭೇಟಿ


ಸೋಮವಾರ ಸಂಜೆ ಬಿಳಿಗಿರಿರಂಗನಾಥ ಸ್ವಾಮಿಯ ದರ್ಶನ ಪಡೆದು ನಂತರ ನಿರ್ಮಾಣ ಹಂತದಲ್ಲಿರುವ ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಪಕ್ಕದಲ್ಲಿರುವ ಕಮರಿಯಲ್ಲಿ ನಿಂತು ಪ್ರಕೃತಿಯ ಸೊಬಗನ್ನು ಸವಿದರು. ಬೆಟ್ಟದ ಇತಿಹಾಸ, ಪೌರಾಣಿಕ ಹಿನ್ನೆಲೆ, ಸ್ಥಳೀಯ ಬುಡಕಟ್ಟು ಜನಾಂಗ ಹಾಗೂ ಪ್ರಾಕೃತಿಕ ವಿಶೇಷತೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಇದೊಂದು ಖಾಸಗಿ ಭೇಟಿಯಾಗಿದ್ದು, ಯಾವುದೇ ಮಾಹಿತಿ ಇರಲಿಲ್ಲ. ನಿರ್ಮಲಾನಂದಸ್ವಾಮಿ ಆಶ್ರಮದ ಬ್ರಹ್ಮಾನಂದ ಸ್ವಾಮೀಜಿ ಸೇರಿದಂತೆ ಇವರ ಇತರ ಆಪ್ತವಲಯದ ಕೆಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ