ಆ್ಯಪ್ನಗರ

ಬಲಿಪಾಡ್ಯಮಿ: ಯಡಬೆಟ್ಟದಲ್ಲಿ ಮಹದೇಶ್ವರ ರಥೋತ್ಸವ

ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಗುರುವಾರ ತಾಲೂಕಿನ ಯಡಪುರ ಸಮೀಪದ ಯಡಬೆಟ್ಟದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿತು.

Vijaya Karnataka 9 Nov 2018, 5:00 am
ಚಾಮರಾಜನಗರ : ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಗುರುವಾರ ತಾಲೂಕಿನ ಯಡಪುರ ಸಮೀಪದ ಯಡಬೆಟ್ಟದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿತು.
Vijaya Karnataka Web balipadyamy mahadeswara rathotsava at yadabetta
ಬಲಿಪಾಡ್ಯಮಿ: ಯಡಬೆಟ್ಟದಲ್ಲಿ ಮಹದೇಶ್ವರ ರಥೋತ್ಸವ


ಉತ್ತವಳ್ಳಿ, ಯಡಪುರ ಗ್ರಾಮದಿಂದ ಬುಧವಾರ ಸಂಜೆಯೇ ಹಾಲರವಿ ಉತ್ಸವ ಸತ್ತಿಗೆಸುರಾಪಾಣಿ, ಮಂಗಳವಾದ್ಯದೊಂದಿಗೆ ಬೆಟ್ಟ ತಲುಪಿತು. ಗುರುವಾರ ಬೆಳಗ್ಗೆ 6 ಕ್ಕೆ ಆರಂಭವಾದ ರಥೋತ್ಸವ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ 7.30 ಕ್ಕೆ ಸ್ವಸ್ಥಾನಕ್ಕೆ ಬಂದು ನಿಂತಿತು.

ರಥೋತ್ಸವದಲ್ಲಿ ಮಂಗಳವಾದ್ಯ, ಹುಲಿವೇಷಧಾರಿ, ಸತ್ತಿಗೆಸುರಾಪಾಣಿ, ಬೇಡರ ಕುಣಿತ ತಂಡಗಳು ಭಾಗವಹಿಸಿದ್ದವು. ಉಘೇ ಉಘೇ ಮಾದಪ್ಪ ಎಂಬ ಉದ್ಘೋಷಗಳನ್ನು ಕೂಗುತ್ತ ಭಕ್ತರು ಸಂಭ್ರಮದಿಂದ ರಥ ಎಳೆದರು.

ಈ ವರ್ಷದಲ್ಲಿ ಮದುವೆಯಾದ ನವವಧುವರರು ರಥೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರಸ್ವಾಮಿ ರಥಕ್ಕೆ ಹಣ್ಣುಧವನ ಎಸೆದು ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು.

ಸುತ್ತಮುತ್ತಲ ಗ್ರಾಮಗಳಾದ ಉತ್ತುವಳ್ಳಿ, ಮಲ್ಲಯ್ಯನಪುರ, ಯಡಪುರ, ಕಡುವಿನಕಟ್ಟೆಹುಂಡಿ, ಶಿವಪುರ,ಅಮಚವಾಡಿ, ತಾವರೆಕಟ್ಟೆಮೋಳೆ, ಮೂಡ್ಲುಪುರ ಗ್ರಾಮ ಸೇರಿದಂತೆ ಉಡಿಗಾಲ,ವೀರನಪುರ, ನಂಜೇದೇವನಪುರ, ಹಳೇಪುರ, ಹರವೆಭಾಗದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ರಥೋತ್ಸವಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ಸರತಿಸಾಲಿನಲ್ಲಿ ನಿಂತು, ಪೂಜೆಸಲ್ಲಿಸಿದರು.

ರಥೋತ್ಸವದ ಅಂಗವಾಗಿ ದೇವಸ್ಥಾನದ ಸುತ್ತಲೂ ವಿದ್ಯುತ್‌ದೀಪಾಲಂಕಾರ, ತಳಿರುತೋರಣ, ಬಾಳೆಕಂದುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.

ಅಂಗಡಿಮುಂಗಟ್ಟು; ರಥೋತ್ಸವದ ಹಿನ್ನೆಲೆಯಲ್ಲಿ ಮಿಠಾಯಿ, ಮಕ್ಕಳಾಟಿಕೆ ವಸ್ತುಗಳ ಅಂಗಡಿಗಳು, ಪೂಜಾಸಾಮಾಗ್ರಿ ಮಾರಾಟ ಮಾಡುವ ಅಂಗಡಿಮುಂಗಟ್ಟುಗಳನ್ನು ತೆರೆಯಲಾಗಿತ್ತು. ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆಯಲ್ಲಿ ಐಸ್‌ಕ್ರೀಂ ಗೆ ಬೇಡಿಕೆಯಿತ್ತು.

ಸರಕಾರಿ ವೈದ್ಯಕೀಯ ಕಾಲೇಜಿನ ಸಮೀಪದಲ್ಲೇ ದೇವಸ್ಥಾನವಿದ್ದು, ಪ್ರವೇಶದ್ವಾರದಲ್ಲಿ ಮಾವಿನತಳಿರನ್ನು ಕಟ್ಟಲಾಗಿತ್ತು. ಬಸ್‌ ನಿಂದ ಇಳಿದ ಭಕ್ತರು ಮೊದಲು ಗಣಪತಿದೇವಸ್ಥಾನದ ಬಳಿ ತೆರಳಿ, ಮಹಾಮಂಗಳಾರತಿ ಪಡೆದರು. ನಂತರ ಯಡಬೆಟ್ಟದತ್ತ ಪ್ರಯಾಣ ಬೆಳೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ