ಆ್ಯಪ್ನಗರ

ಕಾನೂನು ಅರಿವು ಹೊಂದಿ

ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಕಾನೂನು ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಪ್ರಾಯಪಟ್ಟರು.

Vijaya Karnataka 1 Jul 2018, 5:00 am
ಗುಂಡ್ಲುಪೇಟೆ : ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಕಾನೂನು ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಪ್ರಾಯಪಟ್ಟರು.
Vijaya Karnataka Web be aware of the law
ಕಾನೂನು ಅರಿವು ಹೊಂದಿ


ತಾಲೂಕಿನ ಬನ್ನಿತಾಳಪುರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸೃಷ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್‌, ಕೈಲಾಸ್‌ ಸತ್ಯಾರ್ಥಿ ಚಿಲ್ಡ್ರನ್‌ ಪೌಂಡೇಷನ್‌ಯಿಂದ ಹಮ್ಮಿಕೊಂಡಿದ್ದ ಮೂಲ ಕಾನೂನುಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

''ಮಹಿಳಾ ದೌರ್ಜನ್ಯ ತಡೆ, ಜನನ ಮರಣ, ಮೋಟಾರು ವಾಹನ, ಬಾಲ್ಯ ವಿವಾಹ ತಡೆ ಇನ್ನೂ ಮೊದಲಾದ ಕಾಯಿದೆಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಕಾನೂನಿನ ಅರಿವು ಇದ್ದಾಗ ಕುಟುಂಬದಲ್ಲಿ, ಸುತ್ತಲಿನ ಪರಿಸರದಲ್ಲಿ ನಡೆಯುವ ಕಾಯಿದೆಗಳ ಉಲ್ಲಂಘನೆಯನ್ನು ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಮಾಹಿತಿ ನೀಡುವ ಮೂಲಕ ತಡೆಯಬಹುದು. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಕಾನೂನು ಸೇವೆಗಳ ಸಮಿತಿಯಿಂದ ನಡೆಯುವ ಅರಿವು-ನೆರವು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಾಯಕ ಸರಕಾರಿ ಅಭಿಯೋಜಕ ಎ.ಎನ್‌.ರಾಜಣ್ಣ ಮಾತನಾಡಿ,''ಪೋಷಕರು ಮಕ್ಕಳ ಮೇಲಿನ ಪ್ರೀತಿಗೆ ಅಪ್ರಾಪ್ತರಿಗೆ ಬೈಕ್‌ ಕೊಡಿಸುವುದು, ಜವಾಬ್ದಾರಿ ನಿಭಾಯಿಸುವ ಹೆಸರಿನಲ್ಲಿ ಓದುವ ಮಕ್ಕಳಿಗೆ ವಿವಾಹ ಮಾಡುವುದು, ಮಕ್ಕಳನ್ನು ಕೂಲಿಗೆ ಹಚ್ಚುವುದು ಇತ್ಯಾಧಿಗಳು ಸಹ ಕಾನೂನಿಗೆ ವಿರುದ್ಧ. ಆದ್ದರಿಂದ ಜವಬ್ದಾರಿ ಅರಿತು ನಿರ್ಧಾರ ಕೈಗೊಳ್ಳಿ. ಇಲ್ಲವಾದರೆ ವಿನಾಕಾರಣ ತೊಂದರೆ ಅನುಭವಿಸಬೇಕಾಗುತ್ತದೆ ''ಎಂದು ಎಚ್ಚರಿಕೆ ನೀಡಿದರು.

ಕೈಲಾಸ್‌ ಸತ್ಯಾರ್ಥಿ ಚಿಲ್ಡ್ರನ್‌ ಪೌಂಡೇಷನ್‌ನ ಸಹಾಯಕಯೋಜನಾಧಿಕಾರಿ ಜಿ.ಸಿ. ನಾರಯಣಸ್ವಾಮಿ ಬಾಲ್ಯ ವಿವಾಹ ನಿರ್ಮೂಲನೆಯಲ್ಲಿ ಸಮುದಾಯದ ಪಾತ್ರ ಕುರಿತು, ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್‌ ನ ಗಂಗಾಧರಸ್ವಾಮಿ ಮಕ್ಕಳಿಗೆ ಸಂಬಂಧಿಸಿದ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು.

ಶಾಲೆ ಮುಖ್ಯ ಶಿಕ್ಷ ಕ ನಾಗಸುಂದ್ರಪ್ಪ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಕಾರ್ಯದರ್ಶಿ ಟಿ.ಎಸ್‌.ವೆಂಕಟೇಶ್‌, ಸೃಷ್ಟಿ ಸಂಸ್ಥೆಯ ಎಚ್‌.ಬಿ.ವೃಷಬೇಂದ್ರ, ವಕೀಲ ಪುಟ್ಟಸ್ವಾಮಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ