ಆ್ಯಪ್ನಗರ

ಚಾಮರಾಜನಗರ: ಚಳಿಗಾಲದಲ್ಲಿ ಕೋವಿಡ್‌ ತಡೆಗೆ ವಿಶೇಷ ಕಣ್ಗಾವಲು, ಡಿಸಿ ಸೂಚನೆ

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಕೋವಿಡ್‌ ಸಂಬಂಧ ನಿಯೋಜನೆಗೊಂಡಿರುವ ನೋಡೆಲ್‌ ಅಧಿಕಾರಿಗಳ ಸಭೆಯಲ್ಲಿ, ಚಳಿಗಾಲದ ಸಂದರ್ಭದಲ್ಲಿ ಕೊರೊನಾ ವೈರಸ್‌ ಹರಡುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Vijaya Karnataka Web 12 Nov 2020, 11:22 am
ಚಾಮರಾಜನಗರ: ಚಳಿಗಾಲದ ಸಂದರ್ಭದಲ್ಲಿ ಕೊರೊನಾ ವೈರಸ್‌ ಹರಡುವ ಸಾಧ್ಯತೆಯಿದ್ದು ವಿಶೇಷ ಕಣ್ಗಾವಲು, ಕಾರ್ಯಬದ್ಧ ಯೋಜನೆ ಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಕಾರ್ಯ ನಿರತರಾಗುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚನೆ ನೀಡಿದರು.
Vijaya Karnataka Web ಸಾಂದರ್ಭಿಕ ಚಿತ್ರ


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಚಳಿಗಾಲ ಅವಧಿಯಲ್ಲಿ ಕೋವಿಡ್‌19 ಹರಡುವಿಕೆ ತಡೆಯುವ ಕುರಿತು ಆರೋಗ್ಯ ಇಲಾಖೆ ಹಾಗೂ ಕೋವಿಡ್‌ ಸಂಬಂಧ ನಿಯೋಜನೆಗೊಂಡಿರುವ ನೋಡೆಲ್‌ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಕೊರೊನಾ ಎಫೆಕ್ಟ್: ಡ್ರಂಕ್‌ ಅಂಡ್‌ ಡ್ರೈವ್‌ ಪರೀಕ್ಷೆ ವೇಳೆ ಪೊಲೀಸರಿಗೆ ಪಿಪಿಇ ಕಿಟ್‌..!

''ಜಿಲ್ಲೆಯಲ್ಲಿ ಕೋವಿಡ್‌19 ಪ್ರಕರಣಗಳನ್ನು ಬೇಸಿಗೆ ಹಾಗೂ ಮಳೆಗಾಲ ಅವಧಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿ ನಿಯಂತ್ರಣಕ್ಕೆ ತರಲಾಗಿದೆ. ಈಗ ಆರಂಭವಾಗಿರುವ ಚಳಿಗಾಲ ವೇಳೆಯೂ ಕೋವಿಡ್‌ ಪ್ರಕರಣಗಳು ಉಲ್ಬಣವಾಗದಂತೆ ಪೂರ್ವ ಸಿದ್ದತಾ ಯೋಜನೆಗಳನ್ನು ವ್ಯಾಪಕವಾಗಿ ಜಾರಿಗೊಳಿಸಿ ಸಂಪೂರ್ಣವಾಗಿ ತಹಬದಿಗೆ ತರಬೇಕಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಇಳಿಮುಖವಾಗುತ್ತಿದೆ ಎಂಬ ಅತಿ ಆತ್ಮವಿಶ್ವಾಸದಿಂದ ಯಾರೂ ನಿರ್ಲಕ್ಷ್ಯ ವಹಿಸಬಾರದು. ನಿಗಾ ಹಾಗೂ ನಿಯಂತ್ರಣ ವ್ಯವಸ್ಥೆ ನಿರಂತರವಾಗಿ ಮುಂದುವರೆಸಬೇಕು. ಮುಂದಿನ 3 ತಿಂಗಳ ಕಾಲ ಚಳಿಗಾಲ ಇರುವುದರಿಂದ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದಾದ ಅನಾರೋಗ್ಯ ತೊಂದರೆಗಳನ್ನು ಪರಿಹರಿಸಲು ಸನ್ನದ್ದರಾಗಿರಬೇಕು,'' ಎಂದರು.

30 ಸಾವಿರ ಮಂದಿ
''ಜಿಲ್ಲೆಯಲ್ಲಿ ಆರೋಗ್ಯ ಕಾಳಜಿಗಾಗಿ ವಿಶೇಷ ವರ್ಗದವರೆಂದು ಗುರುತಿಸಲಾಗಿರುವ ವೃದ್ದರು, ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್‌, ಎಚ್‌.ಐ.ವಿ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ 30 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಈ ಪೈಕಿ ಬಹುತೇಕ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಬಾಕಿ ಉಳಿದಿರುವವರಿಗೂ ವಿಶೇಷ ವರ್ಗದ ಆರೋಗ್ಯ ಕಾಳಜಿ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸುವ ಮೂಲಕ ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಆ ಮೂಲಕ ಕೋವಿಡ್‌ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿದೆ,'' ಎಂದರು.
ದೀಪಾವಳಿ ಪಟಾಕಿಗೆ ಕಂಟಕವಾದ ಕೊರೊನಾ..! ಈ ಬಾರಿ ನಿರೀಕ್ಷಿತ ವಹಿವಾಟು ಅನುಮಾನ

''ಚಳಿಗಾಲ ಸಂದರ್ಭದಲ್ಲಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗಬಹುದಾದ ಜನರನ್ನು ಗುರುತಿಸಿ ಅವರ ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಬೇಕು. 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸಿ ಎಲ್ಲರ ಆರೋಗ್ಯದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ ಕೂಡಲೇ ಚಿಕಿತ್ಸೆ ಕ್ರಮಗಳಿಗೆ ಒಳಪಡಿಸಬೇಕು,'' ಎಂದು ತಿಳಿಸಿದರು.

ಪರೀಕ್ಷೆ ಹೆಚ್ಚಳ
''ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್‌ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ಗುರಿ ಪ್ರಕಾರ ಪ್ರತೀ ದಿನಕ್ಕೆ 1.500 ಪರೀಕ್ಷೆಯನ್ನು ಮಾಡಬೇಕಿದೆ. ರಜಾ ದಿನಗಳಲ್ಲಿಯೂ ಕಡ್ಡಾಯವಾಗಿ ಗುರಿ ಅನುಸಾರ ಪರೀಕ್ಷೆ ನಡೆಸಬೇಕು. ಕೋವಿಡ್‌ ಪರೀಕ್ಷೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ರೇಷ್ಮೆಗೂಡಿನ ಮಾರುಕಟ್ಟೆ, ನಗರ ಪಟ್ಟಣಗಳ ಮಾರುಕಟ್ಟೆಯಂತಹ ಹೆಚ್ಚು ಜನಸಂದಣಿ ಸ್ಥಳಗಳಲ್ಲಿಯೂ ಕೈಗೊಳ್ಳಲು ಸಂಚಾರಿ ಅಥವಾ ಇತರೆ ಯೂನಿಟ್‌ ಅನ್ನು ಬಳಸಿಕೊಳ್ಳಬೇಕು. ವರ್ತಕರು, ವ್ಯಾಪಾರಿಗಳ ಸಹಕಾರ ಪಡೆಯಬೇಕು,'' ಎಂದರು.
ರಾಜ್ಯದ ಕೊರೊನಾ ಕೇಸ್‌ಗಳಲ್ಲಿ ಕೊಂಚ ಏರಿಕೆ..! ಚೇತರಿಕೆ ಪ್ರಮಾಣದಲ್ಲಿಯೂ ಕುಸಿತ

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌, ಉಪವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬಡೋಲೆ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾಸರ್ವೆಲನ್ಸ್‌ ಅಧಿಕಾರಿ ಡಾ.ನಾಗರಾಜು, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಮುರಳೀಕೃಷ್ಣ, ವೈದ್ಯಕೀಯ ತಜ್ಞರಾದ ಡಾ. ರಮೇಶ್‌, ಡಾ.ಮಹೇಶ್‌, ಡಾ.ಕಾಂತರಾಜು, ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ನೋಡೆಲ್‌ ಅಧಿಕಾರಿಗಳಾದ ಆಹಾರ ಇಲಾಖೆ ಉಪನಿರ್ದೇಶಕ ಸಿ.ಎನ್‌.ರುದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕೋವಿಡ್‌ ತಡೆಗೆ ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳ ವಾರ್ಡ್‌ ಮಟ್ಟದ ಕಾರ್ಯಪಡೆಯ ನೆರವು ಪಡೆಯಬೇಕು. ಮಾಸ್ಕ್‌ ಧರಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ದ ದಂಡ ವಿಧಿಸುವ ಕಾರ್ಯವೂ ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕ್ರಿಯವಾಗಬೇಕು.
ಡಾ.ಎಂ.ಆರ್‌.ರವಿ ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ