ಆ್ಯಪ್ನಗರ

ಬೇಗೂರು: ಬಸ್‌ಗಳಿಲ್ಲದೆ ಪರದಾಟ

ಬೇಗೂರಿನಿಂದ ಮೈಸೂರು ಮತ್ತು ನಂಜನಗೂಡಿಗೆ ಹೆಚ್ಚಿನ ಬಸ್‌ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಬೇಗೂರು ಹೋಬಳಿಯ ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.

Vijaya Karnataka 26 Aug 2019, 5:00 am
ಬೇಗೂರು: ಬೇಗೂರಿನಿಂದ ಮೈಸೂರು ಮತ್ತು ನಂಜನಗೂಡಿಗೆ ಹೆಚ್ಚಿನ ಬಸ್‌ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಬೇಗೂರು ಹೋಬಳಿಯ ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.
Vijaya Karnataka Web CHN-CHN25BGR6


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಮರಾಜನಗರ ಗ್ರಾಮಾಂತರ ವಿಭಾಗದ ಬೇಗೂರು ಸಾರಿಗೆ ಬಸ್‌ ನಿಲ್ದಾಣದಿಂದ ಬೆಳಗಿನ ವೇಳೆ ಮೈಸೂರು ಮತ್ತು ನಂಜನಗೂಡಿಗೆ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನೌಕರರು ತೆರಳಲು ಹೆಚ್ಚಿನ ಸಾರಿಗೆ ಬಸ್‌ಗಳಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ಮತ್ತು ಕಚೇರಿಗೆ ತೆರಳಲು ಪರದಾಡುವಂತಾಗಿದೆ.

ಬೇಗೂರು ಗ್ರಾಮವು ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಎಚ್‌.ಡಿ ಕೋಟೆ, ಗುಂಡ್ಲುಪೇಟೆ, ಮೈಸೂರು, ನಂಜನಗೂಡು, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷ ನ್‌ ಆಗಿದೆ. ರಾಷ್ಟ್ರೀಯ ಹೆದ್ದಾರಿ 766 ಸಹ ಬೇಗೂರು ಗ್ರಾಮದ ಮೂಲಕ ಹಾದು ಹೋಗಿದ್ದು, ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ವಿದ್ಯಾರ್ಥಿಗಳು ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇಗೂರು ಗ್ರಾಮದಿಂದ ಬೆಳಗ್ಗಿನ ವೇಳೆ ಮೈಸೂರು ಮತ್ತು ನಂಜನಗೂಡಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚಿನ ಸಾರಿಗೆ ಬಸ್‌ ಓಡಿಸಲು ಅಗ್ರಹಿಸಿದ್ದಾರೆ.

ಮೈಸೂರಿಗೆ ಬೆಳಗ್ಗಿನ ವೇಳೆ ಬರುವ ಬೆರಳೆಣಿಕೆಯ ಬಸ್‌ಗಳು ಅಂತಾರಾಜ್ಯ ವಾಹನ ಎಂಬ ನಾಮಫಲಕವನ್ನು ಹಾಕಿಕೊಂಡು ವಿದ್ಯಾರ್ಥಿಗಳ ಪಾಸ್‌ಗೆ ಅನುಮತಿ ಇಲ್ಲ ಎಂದು ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳುವುದಿಲ್ಲ. ಹೀಗಾಗಿ ಬೆಳಗಿನ ವೇಳೆ ಹೆಚ್ಚಿನ ಬಸ್‌ಗಳನ್ನು ಸಂಚರಿಸುವಂತೆ ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ