ಚಾಮರಾಜನಗರ: ಆಶ್ಲೇಷ ಆರ್ಭಟಕ್ಕೆ ಮೈದುಂಬಿಕೊಂಡ ಭರಚುಕ್ಕಿ ಜಲಪಾತ..!
ಕಳೆದೊಂದಿಷ್ಟು ದಿನಗಳಿಂದ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಸುರಿಯುತ್ತಿರುವ ಮಳೆಗೆ ಭರಚುಕ್ಕಿ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಆದರೆ, ಕೊರೊನಾ ವೈರಸ್ ಕಾರಣದಿಂದ ಪ್ರವಾಸಿಗರಿಗೆ ಜಲಪಾತ ಕಣ್ತುಂಬಿಕೊಳ್ಳಲು ಅವಕಾಶ ನೀಡಿಲ್ಲ.
Vijaya Karnataka Web 6 Aug 2020, 8:52 pm
ಚಾಮರಾಜನಗರ: ಕಳೆದೊಂದಿಷ್ಟು ದಿನಗಳಿಂದ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನಯನ ಮನೋಹರ ಜಲಪಾತ ಎನಿಸಿದ ಭರಚುಕ್ಕಿ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆಯಾದರೂ ಆ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ದೊರೆಯುತ್ತಿಲ್ಲ.
ಕಳೆದ ವಾರವಷ್ಟೇ ಭಣಗುಡುತ್ತಿದ್ದ ಜಲಪಾತವೀಗ ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾಗುತ್ತಿದ್ದಂತೆ ಎರಡು ದಿನಗಳಿಂದ ಮೈದುಂಬಿಕೊಳ್ಳಲಾರಂಭಿಸಿದೆ. ಹಾಲ್ನೊರೆಯಂತಹ ಜಲಪಾತದ ದೃಶ್ಯ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮುಂದಿನ ದಿನಗಳಲ್ಲಿ ಜಲಾಶಯಗಳಿಂದ ಹೊರ ಹರಿವು ಇನ್ನೂ ಹೆಚ್ಚಲಿದ್ದು, ಭರಚುಕ್ಕಿ ಮತ್ತಷ್ಟು ಭೋರ್ಗರೆಯಲಿದೆ. ಆದರೆ, ಕೊರೊನಾ ವೈರಸ್ ಹಿನ್ನೆಲೆ ಇಂತಹ ಅದ್ಭುತ ದೃಶ್ಯವನ್ನು ಸವಿಯವ ಅವಕಾಶ ಇನ್ನು ಜನತೆಗೆ ದೊರೆತಿಲ್ಲ.
ಚಾಮರಾಜನಗರ: ಬಿಳಿಗಿರಿ ರಂಗನ ಬೆಟ್ಟದ ಅರಣ್ಯದಲ್ಲಿ ಕರಿ ಚಿರತೆ
ಕೊರೊನಾ ವೈರಸ್ ಕಾರಣಕ್ಕೆ ಜಲಪಾತ ಪ್ರದೇಶಕ್ಕೆ ಪ್ರವಾಸಿಗರನ್ನು ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿ ಕ್ರಮ ವಹಿಸುವುದಾಗಿ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡು ತಿಳಿಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಮಲೆಮಹದೇಶ್ವನ ದರ್ಶನಕ್ಕೆ ಸಾವಿರ ಸಾವಿರ ಭಕ್ತರು..!
ಕಳೆದ ವಾರವಷ್ಟೇ ಭಣಗುಡುತ್ತಿದ್ದ ಜಲಪಾತವೀಗ ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾಗುತ್ತಿದ್ದಂತೆ ಎರಡು ದಿನಗಳಿಂದ ಮೈದುಂಬಿಕೊಳ್ಳಲಾರಂಭಿಸಿದೆ. ಹಾಲ್ನೊರೆಯಂತಹ ಜಲಪಾತದ ದೃಶ್ಯ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮುಂದಿನ ದಿನಗಳಲ್ಲಿ ಜಲಾಶಯಗಳಿಂದ ಹೊರ ಹರಿವು ಇನ್ನೂ ಹೆಚ್ಚಲಿದ್ದು, ಭರಚುಕ್ಕಿ ಮತ್ತಷ್ಟು ಭೋರ್ಗರೆಯಲಿದೆ. ಆದರೆ, ಕೊರೊನಾ ವೈರಸ್ ಹಿನ್ನೆಲೆ ಇಂತಹ ಅದ್ಭುತ ದೃಶ್ಯವನ್ನು ಸವಿಯವ ಅವಕಾಶ ಇನ್ನು ಜನತೆಗೆ ದೊರೆತಿಲ್ಲ.
ಚಾಮರಾಜನಗರ: ಬಿಳಿಗಿರಿ ರಂಗನ ಬೆಟ್ಟದ ಅರಣ್ಯದಲ್ಲಿ ಕರಿ ಚಿರತೆ
ಕೊರೊನಾ ವೈರಸ್ ಕಾರಣಕ್ಕೆ ಜಲಪಾತ ಪ್ರದೇಶಕ್ಕೆ ಪ್ರವಾಸಿಗರನ್ನು ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿ ಕ್ರಮ ವಹಿಸುವುದಾಗಿ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡು ತಿಳಿಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಮಲೆಮಹದೇಶ್ವನ ದರ್ಶನಕ್ಕೆ ಸಾವಿರ ಸಾವಿರ ಭಕ್ತರು..!