ಆ್ಯಪ್ನಗರ

ಬೈಕ್‌ ಕದ್ದು ತಪಾಸಣೆ ವೇಳೆ ಸಿಕ್ಕಿಬಿದ್ದ

ಬೈಕ್‌ ಕಳವು ಮಾಡಿದ್ದ ಆರೋಪಿ ತಪಾಸಣೆ ವೇಳೆ ಸಿಕ್ಕಿಬಿದ್ದ ಘಟನೆ ಮುಡಿಗುಂಡ ಸೇತುವೆ ಬಳಿ ಶುಕ್ರವಾರ ನಡೆದಿದೆ.

Vijaya Karnataka 11 May 2019, 5:00 am
ಕೊಳ್ಳೇಗಾಲ : ಬೈಕ್‌ ಕಳವು ಮಾಡಿದ್ದ ಆರೋಪಿ ತಪಾಸಣೆ ವೇಳೆ ಸಿಕ್ಕಿಬಿದ್ದ ಘಟನೆ ಮುಡಿಗುಂಡ ಸೇತುವೆ ಬಳಿ ಶುಕ್ರವಾರ ನಡೆದಿದೆ.
Vijaya Karnataka Web bike stolen accused arrested
ಬೈಕ್‌ ಕದ್ದು ತಪಾಸಣೆ ವೇಳೆ ಸಿಕ್ಕಿಬಿದ್ದ


ಹೊಂಡರಬಾಳು ಗ್ರಾಮದ ಲಿಂಗರಾಜು ಬಂಧಿತ ಆರೋಪಿ. ಪಟ್ಟಣದ ಭಾವನಾ ಲಾಡ್ಜ್‌ ಮುಂಭಾಗ ಮಧುವನಹಳ್ಳಿ ಗ್ರಾಮದ ಶ್ರೀರಾಮ್‌ ಎಂಬುವವರು ಬೈಕ್‌ ನಿಲ್ಲಿಸಿ ಮೈಸೂರಿಗೆ ಹೋಗಿದ್ದರು. ಆರೋಪಿ ಲಿಂಗರಾಜು ಬೈಕ್‌ ಲಾಕ್‌ ಹೊಡೆದು ಕಳ್ಳತನ ಮಾಡಿ ಪರಾರಿಯಾಗಿದ್ದ. ಪಿಎಸ್‌ಐ ವೀಣಾನಾಯಕ್‌ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕುಣಗಳ್ಳಿ ರಸ್ತೆಯಿಂದ ಪಟ್ಟಣದ ಕಡೆ ಬರುತ್ತಿದ್ದ ವೇಳೆ ತಪಾಸಣೆಗೆ ಒಳಪಡಿಸಿದಾಗ ಆರೋಪಿಯ ಬಳಿ ಬೈಕ್‌ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬೈಕ್‌ ಮಾಲೀಕರಿಂದ ದೂರು ಪಡೆದು ಆರೋಪಿ ಲಿಂಗರಾಜನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ತಪಾಸಣೆ ವೇಳೆ ಜಡೇಸ್ವಾಮಿ, ನಾಗೇಂದ್ರರಾಜೇ ಅರಸ್‌, ಶಿವಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ