ಚಾಮರಾಜನಗರ : ತಾಲೂಕಿನ ಅಮಚವಾಡಿ ಸಮೀಪದ ಚನ್ನಪ್ಪನಪುರ ಗ್ರಾಮದಲ್ಲಿ ಪಾರಿವಾಳ ಹಿಡಿಯಲು ಹೋದ ಬಾಲಕ ದೇಗುಲದ ಗೋಪುರದಿಂದ ಬಿದ್ದು ಮೃತಪಟ್ಟಿದ್ದಾನೆ.
ಅಮಚವಾಡಿ ಗ್ರಾಮದ ಕಿಕ್ಕೇರಿ ಬಸವಶೆಟ್ಟಿ ಅವರ ಪುತ್ರ ಶಿವು(16) ಮೃತ ಬಾಲಕ. ಗುರುವಾರ ಸಂಜೆ ಚನ್ನಪ್ಪನಪುರ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿದ್ದ ವೇಳೆ ಪಾರಿವಾಳಗಳನ್ನು ಹಿಡಿಯಲು ಶಿವು ಗೋಪುರ ಹತ್ತಿದ್ದಾನೆ. ಆ ವೇಳೆ ಕಾಲುಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಮೃತಪಟ್ಟ ವಿಚಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದವರು ಬಾಲಕನ ಶವಕಂಡು ಕುಟುಂಬದವರಿಗೆ ಸುದ್ದಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಚವಾಡಿ ಗ್ರಾಮದ ಕಿಕ್ಕೇರಿ ಬಸವಶೆಟ್ಟಿ ಅವರ ಪುತ್ರ ಶಿವು(16) ಮೃತ ಬಾಲಕ. ಗುರುವಾರ ಸಂಜೆ ಚನ್ನಪ್ಪನಪುರ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿದ್ದ ವೇಳೆ ಪಾರಿವಾಳಗಳನ್ನು ಹಿಡಿಯಲು ಶಿವು ಗೋಪುರ ಹತ್ತಿದ್ದಾನೆ. ಆ ವೇಳೆ ಕಾಲುಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಮೃತಪಟ್ಟ ವಿಚಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದವರು ಬಾಲಕನ ಶವಕಂಡು ಕುಟುಂಬದವರಿಗೆ ಸುದ್ದಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.