ಯಳಂದೂರು : ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ಎರಡೂ ಕಾಲುಗಳು ಜಖಂಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಮುಂಟಿಪಾಳ್ಯ ಗ್ರಾಮದ ಮಣಿಕಂಠನ್(26) ಎಂಬುವರು ಮಧ್ಯಾಹ್ನ ಯಳಂದೂರು ಪಟ್ಟಣಕ್ಕೆ ಬರುತ್ತಿದ್ದ ವೇಳೆ ಪಟ್ಟಣದಿಂದ ಮುಂಟಿಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಮುಂಟಿಪಾಳ್ಯ ಹಾಗೂ ಗಂಗವಾಡಿ ರಸ್ತೆ ಮಾರ್ಗ ಮಧ್ಯೆ ತಿರುವಿನಲ್ಲಿ ಅತೀ ವೇಗದಿಂದ ಬಂದ ಕೆಎಸ್ಆರ್ಟಿಸಿ ಚಾ.ನಗರ ಡಿಪೋ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.Ü ಪರಿಣಾಮ ದ್ವಿಚಕ್ರ ವಾಹನ ಸವಾರನ ಎರಡೂ ಕಾಲು ಜಖಂಗೊಂಡಿದ್ದು, ಗಾಯಾಳನ್ನು ಅದೇ ಬಸ್ನಲ್ಲಿ ಕರೆದುಕೊಂಡು ಬಂದು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್-ಬೈಕ್ ಡಿಕ್ಕಿ : ಸವಾರನ ಕಾಲು ಜಖಂ
ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ಎರಡೂ ಕಾಲುಗಳು ಜಖಂಗೊಂಡಿರುವ ಘಟನೆ ನಡೆದಿದೆ.
Vijaya Karnataka 2 Feb 2019, 5:00 am