ಆ್ಯಪ್ನಗರ

ಕ್ಯಾಮೆರಾದಲ್ಲಿಸೆರೆಯಾದ ಹುಲಿ: ಕಾರ್ಯಾಚರಣೆ ಚುರುಕು

ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ ಮೃತಪಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿಯಮ್ಮನ ಗುಡಿ ಪ್ರದೇಶದಲ್ಲಿಅಳವಡಿಸಿದ್ದ ಕ್ಯಾಮೆರಾದಲ್ಲಿ ಹುಲಿ ಛಾಯಚಿತ್ರ ಸೆರೆಯಾಗಿದ್ದು, ಇಲಾಖೆಯವರು ಸೋಮವಾರದಿಂದ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

Vijaya Karnataka 10 Sep 2019, 5:00 am
ಗುಂಡ್ಲುಪೇಟೆ: ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ ಮೃತಪಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿಯಮ್ಮನ ಗುಡಿ ಪ್ರದೇಶದಲ್ಲಿಅಳವಡಿಸಿದ್ದ ಕ್ಯಾಮೆರಾದಲ್ಲಿಹುಲಿ ಛಾಯಚಿತ್ರ ಸೆರೆಯಾಗಿದ್ದು, ಇಲಾಖೆಯವರು ಸೋಮವಾರದಿಂದ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
Vijaya Karnataka Web CHN9GPT4_18


ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿಯಮ್ಮನ ಗುಡಿ ಪ್ರದೇಶದಲ್ಲಿಹುಲಿ ದಾಳಿಯಿಂದ ರೈತ ಶಿವಮಾದಯ್ಯ ಮೃತಪಟ್ಟ ಹಿನ್ನೆಲೆಯಲ್ಲಿಹುಲಿ ಸೆರೆ ಸಲುವಾಗಿ ಹುಲಿಯಮ್ಮನಗುಡಿ ಮತ್ತು ಕೆಬ್ಬೇಪುರ ಭಾಗದಲ್ಲಿ2 ತಾತ್ಕಾಲಿಕ ಕ್ಯಾಂಪ್‌ ಆರಂಭಿಸಲಾಗಿತ್ತು. ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಮತ್ತು ಎಸ್‌ಟಿಪಿಎಫ್‌ ನೌಕರರು ಸಾಕಾನೆಗಳ ಸಹಾಯದಿಂದ ಮತ್ತು ಕಾಲ್ನಡಿಗೆಯಲ್ಲಿಸೆರೆ ಸಲುವಾಗಿ ಹುಲಿ ಜಾಡು ಹಿಡಿದು ಹುಡುಕಾಟ ನಡೆಸಿದ್ದರು. ಅರವಳಿಕೆ ತಜ್ಞರು ತಂಡದೊಂದಿಗೆ ಬಂದಿದ್ದರು. ಆದರೂ ಹುಲಿ ಸೆರೆ ಸಾಧ್ಯವಾಗಿರಲಿಲ್ಲ. ಹುಲಿ ಚಲನವಲನದ ಮೇಲೆ ನಿಗಾ ಇಡಲು ಅಳವಡಿಸಿದ್ದ ಕ್ಯಾಮೆರಾಗಳಲ್ಲಿಹುಲಿ ಬದಲು ಚಿರತೆ ಮತ್ತು ಸೀಳು ನಾಯಿಗಳು ಕಾಣಿಸಿಕೊಂಡಿದ್ದವು. ಈಗಾಗಿ ಶಿವಮಾದಯ್ಯರ ಸಾವಿಗೆ ಹುಲಿಯಲ್ಲದೇ ಬೇರೆ ಮಾಂಸಹಾರಿ ಪ್ರಾಣಿಗಳು ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಕ್ಯಾಮೆರಾ ಅಳವಡಿಸಿದ ಎಂಟು ದಿನದ ನಂತರ(ಸೆ.8) ರ ಸಂಜೆ ಕ್ಯಾಮೆರಾವೊಂದರಲ್ಲಿಹುಲಿ ಹಾದು ಹೋಗುವ ಚಿತ್ರ ಸೆರೆಯಾಗಿದೆ. ಸೋಮವಾರ ವಿಷಯ ತಿಳಿಯುತ್ತಲೇ ಸ್ಥಳೀಯ ಎಸ್‌ಟಿಪಿಎಫ್‌ ಮತ್ತು ಅರಣ್ಯ ಇಲಾಖೆ ನೌಕರರಲ್ಲದೇ ಎಚ್‌.ಡಿ.ಕೋಟೆ ತಾಲೂಕಿನ ಹ್ಯಾಂಡ್‌ಪೋಸ್ಟ್‌ನಿಂದಲೂ ಹೆಚ್ಚುವರಿಯಾಗಿ 8 ಮಂದಿ ಎಸ್‌ಟಿಪಿಎಫ್‌ ಸಿಬ್ಬಂದಿ ಕರೆಸಿಕೊಳ್ಳಲಾಗಿದ್ದು, ಹುಲಿ ಸೆರೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ, ಎಸಿಎಫ್‌ ರವಿಕುಮಾರ್‌, ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್‌ಕುಮರ್‌ ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹುಲಿ ಸೆರೆಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಿ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ