ಆ್ಯಪ್ನಗರ

ಮಹದೇಶ್ವರ ಬೆಟ್ಟದಲ್ಲಿಬೆನಕನ ಅಮಾವಾಸ್ಯೆ ಸಂಭ್ರಮ

ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕಾರ್ಯಗಳು ವಿಜೃಂಭಣೆಯಿಂದ ನಡೆಯಿತು.

Vijaya Karnataka 31 Aug 2019, 5:00 am
ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿಬೆನಕನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕಾರ್ಯಗಳು ವಿಜೃಂಭಣೆಯಿಂದ ನಡೆಯಿತು.
Vijaya Karnataka Web celebration at mahadeswara hills
ಮಹದೇಶ್ವರ ಬೆಟ್ಟದಲ್ಲಿಬೆನಕನ ಅಮಾವಾಸ್ಯೆ ಸಂಭ್ರಮ


ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿಸ್ವಾಮಿಗೆ ಬೇಡಗಂಪಣ ಸಮುದಾಯದ 108 ಅರ್ಚಕರಿಂದ ಕುಂಭಾಭಿಷೇಕ ಪೂಜಾ ಕಾರ್ಯಗಳು ಭಕ್ತಿ ಭಾವದೊಂದಿಗೆ ನೇರವೇರಿತು.

ಮಲೆ ಮಹದೇಶ್ವರ ಬೆಟ್ಟದಲ್ಲಿಅಮಾವ್ಯಾಸೆ ಅಂಗವಾಗಿ ಬೇಡಗಂಪಣ ಸಮುದಾಯದ 108 ಅರ್ಚಕರು ಕೆಂಪು ಬಣ್ಣದ ಪಂಚೆ ಹಾಗೂ ಶಲ್ಯ ಉಟ್ಟು ದೇವಾಲಯದ ಮಜ್ಜನ ಭಾವಿಯಿಂದ ಹೊರಟು ಚಪ್ಪರ ಮಾಳಿಗೆಯಲ್ಲಿದೇವರಿಗೆ ಕುಂಬಾಭಿಷೇಕವನ್ನು ನೆರವೇರಿಸಲಾಯಿತು. ಕುಂಬಾಭಿಷೇಕಗಳನ್ನು ಹೊತ್ತ ಅರ್ಚಕರು ಭಕ್ತಿ ಭಾವದಿಂದ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿದರು. ಹೋಮ ಹವನ, ಎಳೆ ನೀರು ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಶ್ರಾವಣ ಮಾಸದಿಂದ ಈ ಇಂದಿನ ಅಮಾವಾಸೆಯವರೆಗೆ ಪ್ರತಿ ದಿನ 12 ಕುಂಬಾಭಿಷೇಕದಿಂದ ಪೂಜೆ ಸಲ್ಲಿಸುತ್ತಾ ಬಂದಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಮಾದಪ್ಪನ ಸನ್ನಿದಿಧಿಗೆ ಆಗಮಿಸಿದ್ದ ಭಕ್ತರು ಸರಥಿ ಸಾಲಿನಲ್ಲಿನಿಂತು ಮಾದೇಶ್ವರನ ದರ್ಶನ ಪಡೆದು ಪುನೀತರಾದರು, ನಂತರ ಉತ್ಸವಗಳಾದ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ಸೋವ, ಸೇರಿದಂತೆ ವಿವಿಧ ಉತ್ಸವಗಳಲ್ಲಿಪಾಲ್ಗೊಂಡು ಉNೕ ಮಾದಪ್ಪನ ಉNೕ ಮಾದಪ್ಪನ ಎಂಬ ಘೋಷಣೆಗಳೊಂದಿಗೆ ಜೈಕಾರಗಳನ್ನು ಹಾಕಿದರು.

ಶ್ರಾವಣ ಮಾಸ ಮುಕ್ತಾಯ ಹಾಗೂ ಬೆನಕನ ಅಮಾವ್ಯಾಸೆ ಹಿನ್ನೆಲೆಯಲ್ಲಿಜರುಗಲಿರುವ ಈ ವಿಶೇಷ ಪೂಜಾ ಕಾರ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಭಕ್ತರು ಸಾವಿರಾರು ಸಂಖ್ಯೆಯಲ್ಲಿಪಾಲ್ಗೂಂಡಿದ್ದರು.

ಪೂಜಾ ಕಾರ್ಯದಲ್ಲಿಸಾಲೂರು ಮಠದ ಗುರುಸ್ವಾಮಿಗಳು, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಬಸವರಾಜು, ಪಾಲುಪತ್ತೆಧಾರಿ ಮಹಾಧೇವಸ್ವಾಮಿ ವೃತ್ತ ನಿರೀಕ್ಷಕ ಮಹೇಶ್‌, ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೂಂಡಿದ್ದರು. ಮಲೆಮಹದೇಶ್ವರ ಬೆಟ್ಟದ ಪೊಲೀಸ್‌ ಠಾಣಾ ವತಿಯಿಂದ ಸೂಕ್ತ ಬಂದೋಬಸ್‌್ತ ಕಲ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ