ಆ್ಯಪ್ನಗರ

ಸಂಭ್ರಮದ ಬ್ರಹ್ಮ ರಥೋತ್ಸವ

ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳೊಂದಾದ ಪ್ರಸನ್ನ ಮೀನಾಕ್ಷಿ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

Vijaya Karnataka 20 Mar 2019, 5:00 am
ಕೊಳ್ಳೇಗಾಲ : ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳೊಂದಾದ ಪ್ರಸನ್ನ ಮೀನಾಕ್ಷಿ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web celebration of brahma rathotsava
ಸಂಭ್ರಮದ ಬ್ರಹ್ಮ ರಥೋತ್ಸವ


ನಂಜನಗೂಡು ಮಹಾ ರಥೋತ್ಸವ ಸೇರಿದಂತೆ ಪಂಚ ರಥಗಳಲ್ಲಿ ಒಂದಾದ ಸೋಮೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 12. 30 ರಿಂದ 1ಗಂಟೆವರಗೆ ನಡೆಯಿತು. ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲಂಕರಿಸಲಾಯಿತು. ಉತ್ಸವ ಮೂರ್ತಿಯನ್ನು ದೇವ ಸ್ಥಾನದ ಸುತ್ತ ಮೆರವಣಿಗೆ ನಡೆಸಿ, ರಥಕ್ಕೆ ತಂದು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ರಥವನ್ನು ದೇವಸ್ಥಾನದ ಹೊರಭಾಗದ ಸುತ್ತ ಜಯ ಘೋಷ ಕೂಗಿ ರಥ ಎಳೆದು ಭಕ್ತಿ ಸಂಭ್ರಮಿಸಿದರು.

ಪ್ರಧಾನ ಅರ್ಚಕ ನಾಗರಾಜ ದೀಕ್ಷಿತ್‌, ಪ್ರಭಾಕರ್‌ ಅಯ್ಯರ್‌, ಸೂಪರಿಡೆಂಟ್‌ ಶ್ರೀಧರ್‌, ಸೀಗನಾಯಕ ಮುಂತಾದವರಿದ್ದರು.

ಪಟ್ಟಣದ ಮಳಿಗೆ ಮಾರಮ್ಮನ ದೇವಾಲಯದ ಅರ್ಚಕರಾದ ಸರ್ವೇಶ್‌,ಮಳವಳ್ಳಿ ಸುಬ್ರಹ್ಮಣ್ಯರವರ ನೇತೃತ್ವದಲ್ಲಿ ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು, ಮಳವಳ್ಳಿ ಮಾಜಿ ಶಾಸಕ ನರೇಂದ್ರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಮರಳೇಶ್ವರ ರಥೋತ್ಸವ: ಪಟ್ಟಣದ ಮರಳೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ನೂರಾರು ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು.

ಪಂಚರಥಗಳೊಂದಾದ ಮರಳೇಶ್ವರ ರಥವನ್ನು ಮಹಿಳೆಯರು ಎಳೆಯುವುದು ವಾಡಿಕೆ. ಬೆಳಗ್ಗೆ 11.40 ರಿಂದ 12.30ರವರಗೆ ರಥೋತ್ಸವ ನಡೆಯಿತು. ದೇವಸ್ಥಾನದ ಮೂಲ ದೇವರಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ಇತರೆ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ನಂತರ ಉತ್ಸವ ಮೂರ್ತಿ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಮಹಿಳೆಯರು ರಥವನ್ನು ಎಳೆದರು. ಬೆಳಗ್ಗಿನಿಂದಲೆ ಭಕ್ತರು ದೇವಸ್ಥಾನಕ್ಕೆ ತೆರಳು ವಿಶೇಷ ಪೂಜೆ ಸಲ್ಲಿಸಿದರು, ಪ್ರಧಾನ ಅರ್ಚಕ ನಾಗೇಂದ್ರ ಭಟ್‌ ಅವರು ಶ್ರೀಕಂಠಧೀಕ್ಷಿತರ ಮರ್ಗದರ್ಶನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ