ಆ್ಯಪ್ನಗರ

ಅಸ್ಸಾಂನಲ್ಲಿ ಚಾಮರಾಜನಗರದ ಯೋಧ ಸಾವು

ಚಾಮರಾಜನಗರ ಜಿಲ್ಲೆಯ ಯೋಧ ಎನ್. ಪುಟ್ಟಸ್ವಾಮಿ(42) ಅವರ ಅಂತ್ಯಕ್ರಿಯೆ ಬುಧವಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

Vijaya Karnataka Web 3 May 2017, 2:39 pm
ಚಾಮರಾಜನಗರ: ಅಸ್ಸಾಂನ ತ್ರಿಪುರದಲ್ಲಿ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದ ಜಿಲ್ಲೆಯ ಯೋಧ ಎನ್. ಪುಟ್ಟಸ್ವಾಮಿ(42) ಅವರ ಅಂತ್ಯಕ್ರಿಯೆ ಬುಧವಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
Vijaya Karnataka Web chamarajnagr solider died
ಅಸ್ಸಾಂನಲ್ಲಿ ಚಾಮರಾಜನಗರದ ಯೋಧ ಸಾವು


ಪುಟ್ಟಸ್ವಾಮಿ ಅವರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ನಿವಾಸಿಯಾಗಿದ್ದರು. ಪುಟ್ಟಸ್ವಾಮಿ ಬಿಎಸ್ ಎಫ್ ಬ್ಯಾಟಾಲಿಯನ್ ನ 145ರ ಬ್ಯಾಚ್ ನಲ್ಲಿ ಕುಕ್ ಆಗಿ ಅಸ್ಸಾಂ ನ ಸಲ್ಬಾಗಾನ್ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಸೋಮವಾರ ಇವರಿಗೆ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗಲಿಲ್ಲ.

ಮಂಗಳವಾರ ಕೋಲ್ಕತ್ತಾಗೆ ಪಾರ್ಥಿವ ಶರೀರ ತಂದು ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಮಂಗಳವಾರ ರಾತ್ರಿ ಪತ್ನಿಯ ಊರಾದ ಚಾ.ನಗರ ತಾಲೂಕಿನ ಕೂಡ್ಲೂರು ಗ್ರಾಮಕ್ಕೆ ತಂದು ಬುಧವಾರ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಜಿಲ್ಲಾಧಿಕಾರಿ ಬಿ.ರಾಮು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದು, ಗೌರವ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ