ಆ್ಯಪ್ನಗರ

ಚಾಮರಾಜನಗರಕ್ಕೆ ಬಿಎಸ್‌ವೈ ಭೇಟಿ ನೀಡಲಿ, ಇಲ್ಲದಿದ್ದರೆ ಬಸವನನಾಡು ಎಂದು ಪ್ರತ್ಯೇಕ ರಾಜ್ಯ ಮಾಡಲಿ

ಚಾಮರಾಜನಗರ ಕರ್ನಾಟಕದಲ್ಲಿದೆ ಎಂಬುದನ್ನು ಸಿಎಂ ಮರೆತಿದ್ದಾರೆ. ಬಂದರೆ ಅವರನ್ನು ಸ್ವಾಗತಿಸುತ್ತೇನೆ, ಬಾರದೇ ಇದ್ದರೆ ಬಸವನನಾಡು ಎಂದು ಚಾಮರಾಜನಗರಕ್ಕೆ ಹೆಸರಿಟ್ಟು ಪ್ರತ್ಯೇಕ ರಾಜ್ಯ ಮಾಡಬೇಕು.

Vijaya Karnataka Web 2 Jan 2021, 10:00 pm
ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.
Vijaya Karnataka Web ವಾಟಾಳ್‌ ನಾಗರಾಜ್‌
ವಾಟಾಳ್‌ ನಾಗರಾಜ್‌


ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಾರ‍್ಯಕರ್ತರೊಂದಿಗೆ ಸಮಾವೇಶಗೊಂಡ ವಾಟಾಳ್‌ ನಾಗರಾಜ್‌ ಅವರು ಮುಖ್ಯಮಂತ್ರಿ ಬಿಎಸ್‌ವೈ ಚಾಮರಾಜನಗರಕ್ಕೆ ಭೇಟಿ ನೀಡಿ, ಸಚಿವ ಸಂಪುಟ ಸಭೆ ನಡೆಸಿ ಜನರ ಸಮಸ್ಯೆ ನಿವಾರಣೆ ಮಾಡುವಂತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿ,''ರಾಜ್ಯದ ಗಡಿ ಜಿಲ್ಲೆ ಬೀದರ್‌ನಂತೆ ಚಾಮರಾಜನಗರವೂ ಗಡಿ ಜಿಲ್ಲೆಯಾಗಿದೆ. ಮುಖ್ಯಮಂತ್ರಿ ಅವರು ಸರಕಾರ ರಚನೆ ಮಾಡಿ ಒಂದು ವರ್ಷವೇ ಸಂದಿದೆ. ಆದರೂ, ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುವ ಮನಸ್ಸು ಮಾಡಲಿಲ್ಲ. ಚಾಮರಾಜನಗರ ಕರ್ನಾಟಕದಲ್ಲಿದೆ ಎಂಬುದನ್ನು ಸಿಎಂ ಮರೆತಿದ್ದಾರೆ. ಬಂದರೆ ಅವರನ್ನು ಸ್ವಾಗತಿಸುತ್ತೇನೆ, ಬಾರದೇ ಇದ್ದರೆ ಬಸವನನಾಡು ಎಂದು ಚಾಮರಾಜನಗರಕ್ಕೆ ಹೆಸರಿಟ್ಟು ಪ್ರತ್ಯೇಕ ರಾಜ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಾರದಿದ್ದಲ್ಲಿ ಈ ವಿಚಾರದ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ'' ಎಚ್ಚರಿಸಿದರು.

''ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಮೊದಲ ಹಂತದ ಕಾವೇರಿ ನೀರು ಕುಡಿಯುವ ನೀರು ಯೋಜನೆ ಕಲ್ಪಿಸಲಾಗಿದೆ. ಎರಡನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ ಆಗಬೇಕು, ಉಪನಗರ ನಿರ್ಮಾಣಕ್ಕೆ 10 ಸಾವಿರ ನಿವೇಶನ ವಿತರಣೆ ಮಾಡಬೇಕು ಎಂದು ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ