ಆ್ಯಪ್ನಗರ

ಚಿಕ್ಕಲ್ಲೂರು ಜಾತ್ರೆಯಂಗಳದ ಅಂತರ ನಿಗದಿ ಮಾಡಿಲ್ಲ: ಡಿಸಿ

ಚಿಕ್ಕಲ್ಲೂರು ಜಾತ್ರೆಯಂಗಳವನ್ನು ಇಂತಿಷ್ಟು ಕಿ.ಮೀ. ಸುತ್ತಳತೆಯಂದು ನಿಗದಿ ಮಾಡಿಲ್ಲ. ಹೀಗಾಗಿ ಜಾತ್ರೆ ದಿನಗಳಲ್ಲಿ ಎಲ್ಲೂ ಪ್ರಾಣಿವಧೆ ಮಾಡುವಂತಿಲ್ಲ ಎಂಅದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.

ವಿಕ ಸುದ್ದಿಲೋಕ 14 Jan 2017, 5:15 am
ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯಂಗಳವನ್ನು ಇಂತಿಷ್ಟು ಕಿ.ಮೀ. ಸುತ್ತಳತೆಯಂದು ನಿಗದಿ ಮಾಡಿಲ್ಲ. ಹೀಗಾಗಿ ಜಾತ್ರೆ ದಿನಗಳಲ್ಲಿ ಎಲ್ಲೂ ಪ್ರಾಣಿವಧೆ ಮಾಡುವಂತಿಲ್ಲ ಎಂಅದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
Vijaya Karnataka Web cikkalluru jatreyangalada have not fixed the gap dc
ಚಿಕ್ಕಲ್ಲೂರು ಜಾತ್ರೆಯಂಗಳದ ಅಂತರ ನಿಗದಿ ಮಾಡಿಲ್ಲ: ಡಿಸಿ


‘‘ಹೈಕೋರ್ಟ್ ಆದೇಶದನ್ವಯ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿವಧೆ ಮಾಡುವಂತಿಲ್ಲ. ಆ ಆದೇಶವನ್ನು ಪಾಲನೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯ. ಹೀಗಾಗಿ ಚಿಕ್ಕಲ್ಲೂರು ಜಾತ್ರೆ ಯ ಪ್ರದೇಶದ ಎಲ್ಲೂ ಪ್ರಾಣಿವಧೆಗೆ ಅವಕಾಶ ಮಾಡಿಕೊಡುವುದಿಲ್ಲ. ಇದಕ್ಕಾಗಿ ಇಂತಿಷ್ಟು ಪ್ರದೇಶವೆಂದೂ ತಾವು ನಿಗದಿ ಮಾಡಲು ಸಹ ಸಾಧ್ಯವಿಲ್ಲ,’’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘‘ಚಿಕ್ಕಲ್ಲೂರು ಜಾತ್ರೆಯಲ್ಲಿ ದೇವಾಲಯ 1 ಕಿ.ಮೀ. ಸುತ್ತಳತೆ ಯಲ್ಲಿ ಪ್ರಾಣಿವಧೆ ಮಾಡುವಂತಿಲ್ಲ. ಅದರ ಹೊರತಾದ ಪ್ರದೇಶದಲ್ಲಿ ಬಾಡೂಟದ ಪಂಕ್ತಿ ಸೇವೆ ಮಾಡ ಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಹಾಗೆ ಬೌಂಡರಿ ನಿಗದಿ ಮಾಡಲು ಸಾಧ್ಯವಿಲ್ಲ. ಜಾತ್ರೆ ಯಂದು ಆ ಅಂಗಳದಲ್ಲಿ ಎಲ್ಲೆ ಪ್ರಾಣಿವಧೆ ನಡೆದರೂ ಅದು ಬಲಿಯೇ ಆಗುತ್ತದೆ. ಹಾಗಂತ ನಾವು ಯಾರ ಆಹಾರ ಪದ್ಧತಿಯನ್ನೂ ವಿರೋಧಿಸುವುದಿಲ್ಲ. ಮಾಂಸಾಹಾರ ವೂ ಸಹ ಒಂದು ಆಹಾರ ಪದ್ಧತಿ. ಅದನ್ನು ಗೌರವಿಸು ತ್ತೇವೆ. ಆದರೆ ಪ್ರಾಣಿಬಲಿಯನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದು, ಅದನ್ನು ಜಿಲ್ಲಾ ಡಳಿತ ಪಾಲನೆ ಮಾಡಬೇಕಾ ಗಿದೆ. ಆದ್ದರಿಂದ ಭಕ್ತರು ಸಹಕಾರ ನೀಡಬೇಕು,’’ ಎಂದು ಮನವಿ ಮಾಡಿದರು.

ಶಿಸ್ತಿನ ಏರ್ಪಾಡು : ‘‘ಚಿಕ್ಕಲ್ಲೂರು ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಹೀಗಾಗಿ ಅಲ್ಲಿ ಸ್ವಚ್ಛತೆಯೊಂದಿಗೆ ಆರೋಗ್ಯಕರ ವಾತಾವರಣ ಇರಬೇಕು. ಹೀಗಾಗಿ ದೇವಾಲಯದ 100 ಮೀಟರ್ ಸುತ್ತಳತೆಯಲ್ಲಿ ಎಲ್ಲೂ ಅಂಗಡಿ ಮಳಿಗೆಗಳಿಗೆ ಅವಕಾಶ ನೀಡಿಲ್ಲ. ಇಂತಿಂಥ ವ್ಯಾಪಾರ ಇಂಥಲ್ಲೆ ನಡೆಯ ಬೇಕು ಎಂದು ನಿಗದಿ ಪಡಿಸಲಾಗಿದೆ. ಮುಡಿ ಸೇವೆಗೂ ಪ್ರತ್ಯೇಕ ವ್ಯವಸ್ಥೇ ಮಾಡಲಾಗಿದೆ. ಕಳೆದ ವರ್ಷದಂತೆ ಚಿಕ್ಕಲ್ಲೂರಿಗೆ ಹೋಗಿ, ಬರಲು (ಒನ್‌ವೇ) ಪ್ರತ್ಯೇಕ ಮಾರ್ಗಗಳನ್ನು ಗುರುತಿ ಸಲಾಗಿದೆ. ಅಲ್ಲದೇ ಜಾತ್ರೆ ಗಾಗಿಯೇ 150 ಕೆಎಸ್‌ಆರ್‌ಟಿಸಿ ಬಸ್‌ಗಳ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ,’’ ಎಂದರು.

ಕಾನೂನು ಗೌರವಿಸಬೇಕು: ‘‘ಸಹಪಂಕ್ತಿ ಭೋಜನ ವಿಚಾರದಲ್ಲಿ ಕೆಲವರು ಪರಂಪರೆ ಕುರಿತು ಭಾವನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ನೆಲದ ಕಾನೂನನ್ನೂ ಗೌರವಿಸು ವುದು ಸಹ ಎಲ್ಲರ ಕರ್ತವ್ಯ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ನ್ಯಾಯಾಲಯ ಆದೇಶವನ್ನು ಪಾಲಿಸು ತ್ತಿದ್ದೇವೆ,’’ ಎಂದು ಹೇಳಿದರು.

‘‘ಇನ್ನು ಕಾನೂನು ಸುವ್ಯವಸ್ಥೆ ಕಾಪಾಡು ವ ಸಲುವಾಗಿ ಚಿಕ್ಕಲ್ಲೂರಿನಲ್ಲಿ 800 ಮಂದಿ ಪೊಲೀಸರನ್ನು ನಿಯೋಜಿಸ ಲಾಗಿದೆ. ಕಳೆದ ಬಾರಿ ಜಾತ್ರೆ ಅಚ್ಚು ಕಟ್ಟಾಗಿ, ಪ್ರಾಣಿ ಬಲಿಗೆ ಅವಕಾಶ ಇಲ್ಲದೆಯೇ ನಡೆದಿದೆ. ಈ ಬಾರಿ ಯೂ ಭಕ್ತರೂ ಅದೇ ರೀತಿಯ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ,’’ಎಂದು ಹೇಳಿದರು.
ಗೋಷ್ಠಿಯಲ್ಲಿ ಎಸ್‌ಪಿ ಕುಲದೀಪ್‌ಕುಮಾರ್ ಜೈನ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ