ಸಿಎಂಗೆ ರೈತರ ಕಾಳಜಿಯೇ ಇಲ್ಲ
ನಾನು ಸಿಎಂ ಆಗಿದ್ದರೆ ಸರ್ವ ಪಕ್ಷದ ನಿಯೋಗವನ್ನು ಕೇಂದ್ರ ಸರಕಾರದ ಬಳಿ ಕರೆದುಕೊಂಡು ಹೋಗಿ ನೆರೆ ಪರಿಹಾರಕ್ಕೆ ಅನುದಾನವನ್ನು ತರುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka 17 Sep 2019, 5:00 am
ಕೊಳ್ಳೇಗಾಲ: ನಾನು ಸಿಎಂ ಆಗಿದ್ದರೆ ಸರ್ವ ಪಕ್ಷದ ನಿಯೋಗವನ್ನು ಕೇಂದ್ರ ಸರಕಾರದ ಬಳಿ ಕರೆದುಕೊಂಡು ಹೋಗಿ ನೆರೆ ಪರಿಹಾರಕ್ಕೆ ಅನುದಾನವನ್ನು ತರುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿಸುದ್ದಿಗಾರರ ಜತೆ ಮಾತನಾಡಿದ ಅವರು, ''ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಎಲ್ಲಾಪಕ್ಷದ ನಾಯಕರನ್ನು ಎರಡು ಬಾರಿ ಕರೆದುಕೊಂಡು ಹೋಗಿದ್ದೆ. ಪ್ರತಿಪಕ್ಷದ ನಾಯಕರೇ ಇಲ್ಲದೆ ನಿಯೋಗ ಹೋಗುವುದು ಹೇಗೆ ಎಂಬುದು ಸರಿಯಲ್ಲ. ಸಿಎಲ್ಪಿ ನಾಯಕರಿಲ್ಲವೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಿಲ್ಲವೆ. ಅವರನ್ನು ಕರೆದುಕೊಂಡು ಹೋಗಬೇಕಿತ್ತು,'' ಎಂದರು.
''ಪ್ರವಾಹ ಬಂದು ಒಂದೂವರೆ ತಿಂಗಳಾಯಿತು. 6-7 ಲಕ್ಷ ಜನ ಸಮಸ್ಯೆಯಲ್ಲಿಸಿಲುಕಿದ್ದಾರೆ. ಒಂದೂ ಕಾಲು ಲಕ್ಷ ಕುಟುಂಬ ಮನೆ ಇಲ್ಲದೆ ಬೀದಿಪಾಲಾಗಿವೆ. ಲಕ್ಷಾಂತರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಸರಕಾರಕ್ಕೆ ನೆರೆ ಸಂತ್ರಸ್ತರು, ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ,'' ಎಂದು ಟೀಕಿಸಿದರು.
ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಎಸ್.ಬಾಲರಾಜ್ ಮುಂತಾದವರಿದ್ದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಸುದ್ದಿಗಾರರ ಜತೆ ಮಾತನಾಡಿದ ಅವರು, ''ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಎಲ್ಲಾಪಕ್ಷದ ನಾಯಕರನ್ನು ಎರಡು ಬಾರಿ ಕರೆದುಕೊಂಡು ಹೋಗಿದ್ದೆ. ಪ್ರತಿಪಕ್ಷದ ನಾಯಕರೇ ಇಲ್ಲದೆ ನಿಯೋಗ ಹೋಗುವುದು ಹೇಗೆ ಎಂಬುದು ಸರಿಯಲ್ಲ. ಸಿಎಲ್ಪಿ ನಾಯಕರಿಲ್ಲವೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಿಲ್ಲವೆ. ಅವರನ್ನು ಕರೆದುಕೊಂಡು ಹೋಗಬೇಕಿತ್ತು,'' ಎಂದರು.
''ಪ್ರವಾಹ ಬಂದು ಒಂದೂವರೆ ತಿಂಗಳಾಯಿತು. 6-7 ಲಕ್ಷ ಜನ ಸಮಸ್ಯೆಯಲ್ಲಿಸಿಲುಕಿದ್ದಾರೆ. ಒಂದೂ ಕಾಲು ಲಕ್ಷ ಕುಟುಂಬ ಮನೆ ಇಲ್ಲದೆ ಬೀದಿಪಾಲಾಗಿವೆ. ಲಕ್ಷಾಂತರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಸರಕಾರಕ್ಕೆ ನೆರೆ ಸಂತ್ರಸ್ತರು, ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ,'' ಎಂದು ಟೀಕಿಸಿದರು.
ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಎಸ್.ಬಾಲರಾಜ್ ಮುಂತಾದವರಿದ್ದರು.