ಆ್ಯಪ್ನಗರ

ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಶನಿವಾರ ಬೆಳಗ್ಗೆಯೇ ನಗರ ಸಂಚಾರ ಮಾಡುವ ಮೂಲಕ ಪರಿಸ್ಥಿತಿ ಅವಲೋಕಿಸಿದರು.

Vijaya Karnataka 20 Oct 2019, 5:00 am
ಚಾಮರಾಜನಗರ: ಜಿಲ್ಲಾಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಶನಿವಾರ ಬೆಳಗ್ಗೆಯೇ ನಗರ ಸಂಚಾರ ಮಾಡುವ ಮೂಲಕ ಪರಿಸ್ಥಿತಿ ಅವಲೋಕಿಸಿದರು.
Vijaya Karnataka Web IMG-20191019-WA0010_18


ನಗರದ ನಾನಾ ಭಾಗಗಳಲ್ಲಿಅಪೂರ್ಣಗೊಂಡಿರುವ ಕಾಮಗಾರಿಗಳು, ಅಭಿವೃದ್ಧಿ ಕಾಮಗಾರಿಗಳು, ಅವ್ಯವಸ್ಥಿತ ರಸ್ತೆಗಳು ಸೇರಿದಂತೆ ನಗರದ ಉದ್ದಗಲಕ್ಕೂ ಪರಿವೀಕ್ಷಣೆ ಮಾಡಿದರು.

ಶುಕ್ರವಾರ ರಾತ್ರಿಯೇ ನಗರಕ್ಕೆ ಬಂದು ಸರಕಾರಿ ಪ್ರವಾಸಿ ಮಂದಿರದಲ್ಲಿತಂಗಿದ್ದ ಅವರು, ಶನಿವಾರ ಬೆಳಗ್ಗೆ 8ರ ವೇಳೆಗಾಗಲೇ ಅಧಿಕಾರಿಗಳೊಂದಿಗೆ ನಗರ ವೀಕ್ಷಣೆಗೆ ಹೊರಟರು.

ಸಚಿವರೇ ನಗರದ ಮೂಲೆ ಮೂಲೆಗೆ ಭೇಟಿ ಕೊಡುತ್ತಿದ್ದರೆ ಅಧಿಕಾರಿಗಳು ಸುಮ್ಮನಿರಲು ಸಾಧ್ಯವೇ, ಅವರಿಗೂ ಸಹ ಸಚಿವರು ಚುರುಕು ಮುಟ್ಟಿಸಿದರು.

ಮೊದಲಿಗೆ ಕರಿನಂಜನಪುರ ರಸ್ತೆಯ ನಿಜಗುಣ ರೆಸಿಡೆನ್ಸಿ ಬಳಿ ಇರುವ ನಗರಸಭೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅದೇ ಕರಿನಂಜನಪುರ ರಸ್ತೆ ಹದಗೆಟ್ಟಿರುವ ಸ್ಥಿತಿಯನ್ನು ಮನಗಂಡು , ಅದರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನು ನ್ಯಾಯಾಲಯ ರಸ್ತೆ ಅಭಿವೃದ್ಧಿ ಅಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದ ಅವರು, ಸ್ವಾಧೀನಕ್ಕೆ ಅಗತ್ಯ ಕ್ರಮ ವಹಿಸಿ ನಿಗದಿತ ಅವಧಿಯಲ್ಲಿಅಭಿವೃದ್ಧಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಜೋಡಿ ರಸ್ತೆಯಲ್ಲೂಬಾಕಿ ಇರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದು, ತಹಸೀಲ್ದಾರ್‌ ಕಚೇರಿ ಬಳಿ ಇರುವ ದೊಡ್ಡ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಅಲ್ಲಿಂದ ಸಂತೇಮರಹಳ್ಳಿ ವೃತ್ತ ಹಾಗೂ ಹಳೇ ಮಾರುಕಟ್ಟೆ ಬಳಿ ನಗರಸಭೆ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿಜಿಲ್ಲಾಧಿಕಾರಿ ಬಿ. ಬಿ. ಕಾವೇರಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಆನಂದ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌, ಉಪ ವಿಭಾಗಾಧಿಕಾರಿ ನಿಖಿತಾ, ನಗರಸಭೆ ಆಯುಕ್ತ ರಾಜಣ್ಣ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಬಿಜೆಪಿ ಮುಖಂಡರಾದ ನಿಜಗುಣರಾಜು, ನಾರಾಯಣ ಪ್ರಸಾದ್‌, ಮಂಗಲ ಶಿವಕುಮಾರ್‌, ವಕೀಲ ಬಾಲಸುಬ್ರಹ್ಮಣ್ಯಂ ಇತರರು ಹಾಜರಿದ್ದರು.

ಆಷಾಡದೊಳಗೆ ರಥ ನಿರ್ಮಾಣ

ಮುಂದಿನ ಆಷಾಡದೊಳಗೆ ಚಾಮರಾಜೇಶ್ವರ ಸ್ವಾಮಿ ನೂತನ ರಥ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಜಿಲ್ಲಾಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಈಗಾಗಲೇ ರಥ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಹಾಗಾಗಿ ನಿಗದಿತ ಅವಧಿಯೊಳಗೆ ರಥ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ನಗರದ ಸಾಕಷ್ಟು ಮಂದಿ ರಥ ನಿರ್ಮಾಣ ಬೇಗ ಆಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಅದರಂತೆಯೇ ಆ ಕಾಮಗಾರಿ ಬೇಗ ಮುಗಿಯಲಿದೆ ಎಂದರು.

ಉಪ್ಪಾರ ಭವನ ವೀಕ್ಷಣೆ: ಇನ್ನು ಇದೇ ಸಂದರ್ಭದಲ್ಲಿಸಚಿವರು ನಗರದ ಮಹಾದೇಶ್ವರ ಬಡಾವಣೆ ಬಳಿ ನಿರ್ಮಾಣಗೊಳ್ಳುತ್ತಿರುವ ಉಪ್ಪಾರ ಭವನ ಕಾಮಗಾರಿಯನ್ನು ಪರಿಶೀಲಿಸಿದರು.

ಭವನ ಉತ್ತಮವಾಗಿ ನಿರ್ಮಾಣವಾಗುತ್ತಿದ್ದು, ನಿಗದಿತ ಅವಧಿಯಲ್ಲಿಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಶಾಸಕರ ಮುನಿಸು

ಜಿಲ್ಲಾಉಸ್ತುವಾರಿ ಸಚಿವರು ಇತ್ತ ನಗರ ಪರಿವೀಕ್ಷಣೆಯಲ್ಲಿತೊಡಗಿದ್ದರೆ, ಅತ್ತ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಸಚಿವರ ಆಗಮನ, ಪರಿವೀಕ್ಷಣೆ ಬಗ್ಗೆ ನನಗೆ ಮಾಹಿತಿ ನೀಡಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ತಮಗೆ ಆಹ್ವಾನ ನೀಡದೇ ಇರುವುದಕ್ಕೆ ಜಿಲ್ಲಾಧಿಕಾರಿಯವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನಗರ ಪರಿವೀಕ್ಷಣೆ ಮಾಡಿದರೆ ಪ್ರಯೋಜನವೇನು? ಸ್ಥಳೀಯ ಶಾಸಕನಾಗಿ ಜತೆಗೆ ನಾನಿದ್ದರೆ, ಅವರಿಗೆ ಇಲ್ಲಿಯ ಆಗು, ಹೋಗುಗಳ ಬಗ್ಗೆ ತಿಳಿಯಲಿದೆ. ಅದನ್ನು ಬಿಟ್ಟು ಅವರಿಗೆ ಪಕ್ಷದ ಕಾರ್ಯಕರ್ತರೇ ಮುಖ್ಯವಾಯಿತೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮನವರಿಕೆ ಮಾಡಿದ್ದೇನೆ: ಶಾಸಕರ ಮುನಿಸನ್ನು ತಿಳಿದ ಸಚಿವ ಸುರೇಶ್‌ಕುಮಾರ್‌ ಅವರು, ಪುಟ್ಟರಂಗಶೆಟ್ಟಿ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಸಂವಹನ ಕೊರತೆಯಿಂದಾಗಿ ತಮ್ಮ ಭೇಟಿ, ಪರಿವೀಕ್ಷಣೆ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಮುಂದೆ ಆ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕರನ್ನು ಸಮಾಧಾನ ಪಡಿಸಿದ್ದೇನೆ. ಅವರಿಗೂ ಸಹ ಪರಿಸ್ಥಿತಿ ಮನವರಿಕೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ