ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿಯಂದು ರಥೋತ್ಸವ ರದ್ದು

ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಪಾಸಿಟವ್ ಪ್ರಕರಣ ವರದಿಯಾಗಿಲ್ಲ. ವಿದೇಶದಿಂದ ಜಿಲ್ಲೆಗೆ ಮರಳಿದ್ದ 4 ಮಂದಿ ಮೇಲೆ ನಿಗಾ ಇಡಲಾಗಿದೆ ಎಂದು ಡಾ ಎಂ ಆರ್ ರವಿ ತಿಳಿಸಿದರು.

Vijaya Karnataka Web 17 Mar 2020, 7:42 pm
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಮಾ.25 ರಂದು ನಡೆಯಬೇಕಾಗಿದ್ದ ರಥೋತ್ಸವವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ತಿಳಿಸಿದ್ದಾರೆ.
Vijaya Karnataka Web ಮಹದೇಶ್ವರ ಬೆಟ್ಟ ಜಾತ್ರೆ
ಮಹದೇಶ್ವರ ಬೆಟ್ಟ ಜಾತ್ರೆ


ಮಹದೇಶ್ವರ ಬೆಟ್ಟದ ರಥೋತ್ಸವವೆಂದರೆ ಕನಿಷ್ಠ 2 ಲಕ್ಷ ಮಂದಿ ಭಕ್ತರು ಆಗಮಿಸುತ್ತಾರೆ. ತಮಿಳುನಾಡು ನಿಂದಲೂ ಸಾವಿರಾರು ಮಂದಿ ಬರುತ್ತಾರೆ. ಹೀಗಾಗಿ 5 ದಿನಗಳ ಯುಗಾದಿ ಜಾತ್ರೆ ಸೇರಿದಂತೆ ಮಾ.25 ರ ರಥೋತ್ಸವ ವನ್ನು ರದ್ದು ಮಾಡಲಾಗಿದೆ.

ಅದೇ ರೀತಿ ಮೈಸೂರಿನಲ್ಲಿ ಹಕ್ಕಿ ಜ್ವರ ದೃಢ ಪಟ್ಟಿರುವ ಕಾರಣ, ಜಿಲ್ಲೆಯಲ್ಲೂ ಕೋಳಿ ಮಾಂಸ, ಮೊಟ್ಟೆ ಮಾರಾಟ, ಸಾಗಾಣೆಯನ್ನು ನಿರ್ಬಂಧಿಸಿ ಆದೇಶಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾಸಿಟಿವ್ ಇಲ್ಲ

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಪಾಸಿಟವ್ ಪ್ರಕರಣ ವರದಿಯಾಗಿಲ್ಲ. ವಿದೇಶದಿಂದ ಜಿಲ್ಲೆಗೆ ಮರಳಿದ್ದ 4 ಮಂದಿ ಮೇಲೆ ನಿಗಾ ಇಡಲಾಗಿದೆ ಎಂದು ಡಾ ಎಂ ಆರ್ ರವಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ