ಆ್ಯಪ್ನಗರ

ಮೇವು ಬೆಳೆಯಲು ಮನವಿ

ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರು, ಬೆಳೆಗಾರರು ಮೇವು ಬೆಳೆಸುವಂತೆ ಪಶುಪಾಲನಾ ಇಲಾಖೆ ಮನವಿ ಮಾಡಿದೆ...

Vijaya Karnataka Web 13 Oct 2016, 5:00 am

ಚಾಮರಾಜನಗರ : ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರು, ಬೆಳೆಗಾರರು ಮೇವು ಬೆಳೆಸುವಂತೆ ಪಶುಪಾಲನಾ ಇಲಾಖೆ ಮನವಿ ಮಾಡಿದೆ.

ಮೇವು ಬೀಜಗಳನ್ನು ಪಶುಪಾಲನಾ ಇಲಾಖೆ ವಿತರಿಸಲಿದೆ. ಮೇವು ಬೆಳೆದ ರೈತರು, ಬೆಳೆಗಾರರಿಂದ ಕಂದಾಯ ಇಲಾಖೆಯವರು ನಿಗದಿತ ದರದಲ್ಲಿ ಮೇವನ್ನು ಖರೀದಿಸಲಿದ್ದಾರೆ.

ಈ ಮೇವನ್ನು ಶೇ. 50 ರಷ್ಟು ದರದಲ್ಲಿ ಅಗತ್ಯ ಇರುವ ರೈತರಿಗೆ ವಿತರಿಸಲಾಗುತ್ತದೆ.

ಮೇವು ಬೆಳೆಯಲು. ಆಸಕ್ತಿ ಇರುವ ರೈತರು ಪಹಣಿಯೊಂದಿಗೆ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಆಸ್ಪತ್ರೆ, ಇಲ್ಲಿ ನೋಂದಣಿ ಮಾಡಿಕೊಳ್ಳಲು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಬಾಲಸುಂದರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ