ಕೊಳ್ಳೇಗಾಲ: ಸ್ನೇಹಿತರೊಡನೆ ಗುಂಡಾಲ್ ಜಲಾಶಯಕ್ಕೆ ಹೋಗಿ ಬರುವಾಗ ಮಾರ್ಗ ಮಧ್ಯೆನೇರಳೆ ಹಣ್ಣು ಕೀಳಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ವಿಶೇಷಚೇತನ ಯುವಕ ಮೃತಪಟ್ಟ ಘಟನೆ ತಾಲೂಕಿನ ಲಕ್ಷ್ಮೀಪುರ ಬಳಿ ನಡೆದಿದೆ.
ಲಕ್ಕರಸನಪಾಳ್ಯದ ಮಹದೇವಸ್ವಾಮಿ ಎಂಬುವವರ ಪುತ್ರ ಕಾರ್ತೀಕ್(24)ಮೃತರು. ಕಾರ್ತೀಕ್ ತನ್ನ ಮೂವರು ಸ್ನೇಹಿತರ ಜಗೆ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ಲಕ್ಷ್ಮೀಪುರ ಸಮೀಪ ಲೊಕ್ಕನಹಳ್ಳಿ ರಸ್ತೆಯ ಬದಿಯಲ್ಲಿದ್ದ ನೇರಳೆ ಮರದಲ್ಲಿದ್ದ ಹಣ್ಣುಗಳನ್ನು ಕೀಳಲು ಮರ ಹತ್ತಿದ್ದ ವೇಳೆ ಮರದ ರೆಂಬೆಗಳ ನಡುವೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಕೊಳಗೆ ಬಿದ್ದಿದ್ದಾನೆ. ಅಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಾರ್ಗಮಧ್ಯೆ ಕಾರ್ತೀಕ ಮೃತಪಟ್ಟಿದ್ದಾರೆ. ಕಾರ್ತೀಕ್ಗೆ ಕಿವುಡ ಮೂಗರ ಕಾಲೇಜಿನಲ್ಲಿ ಬಿ.ಕಾಂ ಪದವೀಧರ. ಇವನ ಜತೆ ಗುಂಡಾಲ್ಗೆ ಹೋಗಿದ್ದ ಮೂವರು ಸ್ನೇಹಿತರು ಸಹ ವಿಶೇಷಚೇತನರು.
ಲಕ್ಕರಸನಪಾಳ್ಯದ ಮಹದೇವಸ್ವಾಮಿ ಎಂಬುವವರ ಪುತ್ರ ಕಾರ್ತೀಕ್(24)ಮೃತರು. ಕಾರ್ತೀಕ್ ತನ್ನ ಮೂವರು ಸ್ನೇಹಿತರ ಜಗೆ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ಲಕ್ಷ್ಮೀಪುರ ಸಮೀಪ ಲೊಕ್ಕನಹಳ್ಳಿ ರಸ್ತೆಯ ಬದಿಯಲ್ಲಿದ್ದ ನೇರಳೆ ಮರದಲ್ಲಿದ್ದ ಹಣ್ಣುಗಳನ್ನು ಕೀಳಲು ಮರ ಹತ್ತಿದ್ದ ವೇಳೆ ಮರದ ರೆಂಬೆಗಳ ನಡುವೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಕೊಳಗೆ ಬಿದ್ದಿದ್ದಾನೆ. ಅಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಾರ್ಗಮಧ್ಯೆ ಕಾರ್ತೀಕ ಮೃತಪಟ್ಟಿದ್ದಾರೆ. ಕಾರ್ತೀಕ್ಗೆ ಕಿವುಡ ಮೂಗರ ಕಾಲೇಜಿನಲ್ಲಿ ಬಿ.ಕಾಂ ಪದವೀಧರ. ಇವನ ಜತೆ ಗುಂಡಾಲ್ಗೆ ಹೋಗಿದ್ದ ಮೂವರು ಸ್ನೇಹಿತರು ಸಹ ವಿಶೇಷಚೇತನರು.