ಆ್ಯಪ್ನಗರ

ಋುಣ ಪರಿಹಾರ ಕಾಯಿದೆ: 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಕರ್ನಾಟಕ ಋುಣ ಪರಿಹಾರ ಕಾಯಿದೆ 2018 ಜಾರಿಗೆ ಬರುತ್ತಿದ್ದಂತೆ ಒಡವೆ ಹಾಗೂ ಕೈ ಸಾಲ ಮಾಡಿರುವವರು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದು, ಮಂಗಳವಾರ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

Vijaya Karnataka 28 Aug 2019, 5:00 am
ಕೊಳ್ಳೇಗಾಲ: ಕರ್ನಾಟಕ ಋುಣ ಪರಿಹಾರ ಕಾಯಿದೆ 2018 ಜಾರಿಗೆ ಬರುತ್ತಿದ್ದಂತೆ ಒಡವೆ ಹಾಗೂ ಕೈ ಸಾಲ ಮಾಡಿರುವವರು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದು, ಮಂಗಳವಾರ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
Vijaya Karnataka Web debt relief act more than 500 applications
ಋುಣ ಪರಿಹಾರ ಕಾಯಿದೆ: 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ


ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ವಾರ್ಷಿಕ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ದುರ್ಬಲ ವರ್ಗದವರು ಋುಣ ಪರಿಹಾರಕ್ಕೆ ಅರ್ಹರಾಗಿದ್ದು, ಖಾಸಗಿ ಲೇವಾದೇವಿದಾರರು ಹಾಗೂ ಗಿರಿವಿದಾರರಿಂದ ಸಾಲ ಪಡೆದಿದ್ದರೆ ಋುಣ ಪರಿಹಾರ ಕಾಯ್ದೆಯ ಸೌಲಭ್ಯ ಪಡೆಯಬಹುದು. ಉಪ ವಿಭಾಗಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಅರ್ಜಿ ಸಲ್ಲಿಸುವಂತೆ ತಿಳಿಸುತ್ತಿದ್ದಂತೆ ಫಲಾನುಭವಿಗಳು ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ. ಅರ್ಜಿ ಪಡೆಯಲು ತಹಸೀಲ್ದಾರ್‌ ಕಚೇರಿಯಲ್ಲಿಎರಡು ಕೌಂಟರ್‌ ತೆರೆದಿದ್ದು, ಸಾವಿರಾರು ಜನ ಅರ್ಜಿ ಹಿಡಿದ ಸಾಲಾಗಿ ನಿಂತಿದ್ದರು.

ಗಿರವಿ ಅಂಗಡಿ ಚೀಟಿಗಳೆ ಹೆಚ್ಚು: ಋುಣ ಮುಕ್ತ ಕಾಯ್ದೆಯಡಿ ಸುಲಭವಾಗಿ ಋುಣ ಪರಿಹಾರವಾಗುವುದು ಗಿರವಿ ಅಂಗಡಿಗಳವರದೆ ಸುಲಭ ಎಂಬ ಮಾತುಗಳು ಕೇಳಿ ಬರುತ್ತಿದೆ. ಗಿರವಿ ಚೀಟಿ ಸುಲಭವಾಗಿರುವ ದಾಖಲೆಯಾಗಿರುವುದೆ ಇದಕ್ಕೆ ಕಾರಣ. ಒಬ್ಬಬ್ಬರ ಬಳಿ ಕನಿಷ್ಠ 3ರಿಂದ 10 ಗಿರವಿ ಚೀಟಿಗಳಿದ್ದು, ಇವುಗಳ ನಕಲನ್ನು ಅರ್ಜಿಯ ಜತೆ ಲಗತ್ತಿಸಿರುವುದು ವಿಶೇಷ. ಕೈ ಸಾಲ ಹಾಗೂ ಜಮೀನು ಅಡಮಾನು ಮಾಡಿದ ಸಾಲಗಳನ್ನು ಪಡೆದವರು ಕಾಯ್ದೆಯಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಗಿರವಿ ಇಟ್ಟ ಕೆಲವು ಗ್ರಾಮೀಣ ಪ್ರದೇಶದ ಜನ ಗಿರವಿ ಚೀಟಿಯನ್ನು ಗಿರಿವಿ ಅಂಗಡಿಯವರ ಬಳಿ ಇಟ್ಟು ಹೋಗುತ್ತಿದ್ದವರು. ಕಾಯ್ದೆ ಜಾರಿಗೆ ಬರುತ್ತಿದ್ದಂತೆ ಅಂಗಡಿಗಳಿಗೆ ಬಂದು ಚೀಟಿ ಕೊಡುವಂತೆ ಒತ್ತಾಯಿಸಿ ಪಡೆದುಕೊಂಡ ಘಟನೆಗಳು ನಡೆದಿದೆ. ಜೆರಾಕ್ಸ್‌ ಅಂಗಡಿಗಳಲ್ಲಿನೂಕು ನುಗ್ಗಲು ಏರ್ಪಟ್ಟಿತ್ತು,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ