ಆ್ಯಪ್ನಗರ

ಕಾಡಾನೆ ದಾಳಿಗೆ ಬೆಳೆ, ಕೃಷಿ ಪರಿಕರ ನಾಶ

ಅಜ್ಜೀಪುರ ಗ್ರಾಮದ ರೈತರ ಜಮೀನಿಗಳಿಗೆ ರಾತ್ರಿ ವೇಳೆ ಕಾಡಾನೆ ದಾಳಿ ನಡೆಸಿ ಫಸಲು ಹಾಗೂ ಕೃಷಿ ಪರಿಕರಗಳು ನಾಶಗೊಳಿಸಿದೆ.

Vijaya Karnataka 2 Nov 2019, 5:00 am
ಹನೂರು: ಅಜ್ಜೀಪುರ ಗ್ರಾಮದ ರೈತರ ಜಮೀನಿಗಳಿಗೆ ರಾತ್ರಿ ವೇಳೆ ಕಾಡಾನೆ ದಾಳಿ ನಡೆಸಿ ಫಸಲು ಹಾಗೂ ಕೃಷಿ ಪರಿಕರಗಳು ನಾಶಗೊಳಿಸಿದೆ.
Vijaya Karnataka Web CHN01HNR4_18


ತಾಲೂಕಿನ ಅಜ್ಜೀಪುರ ಗ್ರಾಮದ ಸುರೇಶ್‌ ಹಾಗೂ ಪ್ರಕಾಶ್‌ ರೈತರ ಜಮೀನಿನಲ್ಲಿ ಬಾಳೆ, ಮುಸುಕಿನ ಜೋಳ ಕೃಷಿ ಚಟುವಟಿಕೆ ಬಳಸುವ ಡ್ರೀಪ್‌ಕೇಶನ್‌ ಪರಿಕರಗಳನ್ನು ಕಳೆದ ಒಂದು ವಾರದಿಂದ ಒಂಟಿ ಕಾಡಾನೆ ದಾಳಿ ಮಾಡಿ ಫಸಲು ನಾಶಗೊಳಿಸಿ ಪರಿಕರಗಳನ್ನು ತುಳಿದ ಹಾಳು ಮಾಡುತ್ತಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲಎಂದು ರೈತರು ಆರೋಪಿಸಿದ್ದಾರೆ.

ಬೆಳೆ ಹಾನಿ: ಹನೂರು ಅಜ್ಜೀಪುರ ಮುಖ್ಯ ರಸ್ತೆಯ ಬದಿಯಲ್ಲಿಬರುವ ಅರಣ್ಯದಂಚಿನ ರೈತ ಸುರೇಶ್‌ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳ ಮತ್ತು ಕೃಷಿ ಉಪಯೋಗಿ ಡ್ರೀಪ್‌ ಪರಿಕರಗಳನ್ನು ತುಳಿದು ಹಾಳು ಮಾಡಿದೆ. ಪ್ರಕಾಶ್‌ ಎಂಬುವರ 2.5 ಎಕರೆ ಜಮೀನಿನಲ್ಲಿಬೆಳೆದ ಮುಸುಕಿನ ಜೋಳದ ಫಸಲು ದಿನನಿತ್ಯ ರಾತ್ರಿ ವೇಳೆ ಮಲೆಮಹದೇಶ್ವರ ವನ್ಯಜೀವಿ ವಲಯ ಹನೂರು ಬಫರ್‌ ರೇಂಜ್‌ನಿಂದು ಬರುವ ಒಂಟಿ ಕಾಡಾನೆ ತಿಂದು ತುಳಿದು ಹಾಳು ಮಾಡುತ್ತಿದ್ದು ರೈತರಿಗೆ ಆತಂಕಗೊಂಡಿದ್ದಾರೆ.

ಪರಿಹಾರಕ್ಕೆ ಒತ್ತಾಯ : ವರ್ಷದಲ್ಲಿನಿರಂತರವಾಗಿ ಬೆಳೆಹಾನಿ ಮಾಡುತ್ತಿರುವ ಕಾಡುಪ್ರಾಣಿಗಳ ಉಪಟಳದಿಂದ ನಷ್ಟದ ಜತೆಗೆ ಬೆಳೆಹಾನಿ ಪರಿಕಾರ ನಷ್ಟ ಉಂಟಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು. ಜತೆಗೆ ಅರಣ್ಯದಂಚಿನಲ್ಲಿಸೋಲಾರ್‌ ಬೇಲಿ ಹಾಗೂ ಶಾಶ್ವತವಾಗಿ ಕಾಡು ಪ್ರಾಣಿಗಳ ಉಪಟವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ