ಆ್ಯಪ್ನಗರ

ವಿಜ್ಞಾನದ ಕಡೆ ಆಸಕ್ತಿ ಬೆಳೆಸಿಕೊಳ್ಳಿ

Vijaya Karnataka 5 Jan 2020, 5:00 am
ಕೊಳ್ಳೇಗಾಲ: ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಜ್ಞಾನದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಿಎಫ್‌ಟಿಆರ್‌ಐನ ಪ್ರಧಾನ ವಿಜ್ಞಾನಿ ಎಎಸ್‌ಕೆವಿಎಸ್‌ ಶರ್ಮ ಹೇಳಿದರು.
Vijaya Karnataka Web ಕೊಳ್ಳೇಗಾಲ ಲಯನ್ಸ್‌ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿಸಿಎಫ್‌ಟಿಆರ್‌ಐನ ಪ್ರಧಾನ ವಿಜ್ಞಾನಿ ಎಎಸ್‌ಕೆವಿಎಸ್‌ ಶರ್ಮ ಮಾತನಾಡಿದರು.


ಪಟ್ಟಣದ ಲಯನ್ಸ್‌ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿಮಾತನಾಡಿದ ಅವರು,''ಶಿಕ್ಷಣ ಜ್ಞಾನವನ್ನು ನೀಡಿದರೆ ವಿಜ್ಞಾನ ನಮ್ಮಗೆ ಅರುವಿನ ಬೆಳಕನ್ನು ನೀಡುತ್ತದೆ. ಶಾಲೆಗಳಲ್ಲಿವಿಜ್ಞಾನ ಕಾರ‍್ಯಕ್ರಮಗಳನ್ನು ಹೆಚ್ಚಾಗಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು. ವಿದ್ಯಾರ್ಥಿಗಳಲ್ಲಿವಿಜ್ಞಾನ ಎಂದರೆ ಭಯ ಇದ್ದು ಇದನ್ನು ಶಿಕ್ಷಕರು ಹೋಗಲಾಡಿಸಬೇಕು,'' ಎಂದರು.

''ತಂತ್ರಜ್ಞಾನವನ್ನು ಬಳಸುವುದು ವಿಜ್ಞಾನ ಅಲ್ಲ, ತಂತ್ರಜ್ಞಾನದ ಮೂಲ ಮತ್ತು ಅದರ ಆವಿಷ್ಕಾರದ ಬಗ್ಗೆ ತಿಳಿಯುವುದು ವಿಜ್ಞಾನ, ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ವಿಜ್ಞಾನ, ಕೌಶಲ್ಯ ನಮಗೆ ಉದ್ಯೋಗ ಮಾಡುವುದನ್ನು ಕಲಿಸುತ್ತದೆ ಸಮಸ್ಯೆಗೆ ಪರಿಹಾರ ನೀಡುವುದನ್ನು ತಿಳಿಸುವುದಿಲ್ಲಈಗಾಗಿ ವಿಜ್ಞಾನವೇ ಬೇರೆ ಕೌಶಲ್ಯವೇ ಬೇರೆ. ಶಾಲೆಯಲ್ಲಿವಿಜ್ಞಾನಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಕಾರ್ಯ ಆಗಬೇಕಿದ್ದು ಇದಕ್ಕೆ ಬೇಕಾದ ಸಹಕಾರ ನೀಡಲು ಸಿದ್ಧನಿದ್ದೇನೆ,'' ಎಂದು ಹೇಳಿದರು.

ಲಯನ್‌ ಸುರೇಶ್‌ಕುಮಾರ್‌ ಮಾತನಾಡಿ,''ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಕೇವಲ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು ಬದುಕನ್ನು ಉತ್ತಮ ರೀತಿಯಲ್ಲಿಕಟ್ಟಿಕೊಡುವಂತಿರಬೇಕು. ಇಲ್ಲಿನ ಲಯನ್ಸ್‌ ಸಂಸ್ಥೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿಮುಂದಿರುವುದು ಸಂತೋಷ ತಂದಿದೆ. ತಂತ್ರಜ್ಞಾನ ಪ್ರಸ್ತುತ ನಮ್ಮ ಬದುಕಿನಲ್ಲಿಹಾಸು ಹೊಕ್ಕಾಗಿದೆ. ಮೊಬೈಲ್‌ ಬಳಕೆ ತಪ್ಪಲ್ಲಮೊಬೈಲ್‌ಗಳನ್ನು ಅವಶ್ಯಕತೆ ಇದ್ದಾಗ ಮಾತ್ರ ಬಳಕೆ ಮಾಡಬೇಕು. ಪೋಷಕರು ಮಕ್ಕಳಿಗೆ ಮೊಬೈಲ್‌ ಕೊಡಿಸಿ ಸುಮ್ಮನಾಗದೆ ಅದನ್ನು ಅವರು ಯಾವು ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು,'' ಎಂದರು.

''ದೊಡ್ಡವರಿಗಿಂದ ಪುಟ್ಟ ಮಕ್ಕಳು ಮೊಬೈಲ್‌ ಸೆಟ್‌ಗಳನ್ನು ಚೆನ್ನಾಗಿ ಅಪರೇಟ್‌ ಮಾಡುತ್ತಾರೆ. ನಿಜ ಆಗಂತ ಅವರಿಗೆ ಪ್ರೋತ್ಸಹ ನೀಡಬಾರದು. ವಿದ್ಯಾರ್ಥಿಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ತಾವು ಕಲಿತ ಶಾಲೆ ಬಗ್ಗೆ ಅಭಿಮಾನ ವಿರಬೇಕು, ತಂದೆ ತಾಯಿ ಮತ್ತು ಗುರುಹಿರಿಯರ ಬಗ್ಗೆ ಗೌರವ ಇರಬೇಕು,'' ಎಂದು ಹೇಳಿದರು.

ಲ¿åನ್ಸ್‌ ಅಧ್ಯಕ್ಷ ಎನ್‌,ವೀರೂಪಾಕ್ಷ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥಾಪಕ ಅಧ್ಯಕ್ಷ ಡಾ, ಶಿವರುದ್ರಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ನಾಗರಾಜು. ಲಯನ್ಸ್‌ ಎಜ್ಯೂಕೇಷನ್‌ ಸೊಸೈಟಿ ಕಾರ್ಯದರ್ಶಿ ಜಿಎಸ್‌ಎಂ ಪ್ರಸಾದ್‌, ಲಯನ್ಸ್‌ ಕಾರ್ಯದರ್ಶಿ ಎಸ್‌, ನಾಗರಾಜು, ನಿವೃತ್ತ ಪ್ರಾಂಶುಪಾಲರಾದ ಬಸವರಾಜಪ್ಪ. ಲಯನ್ಸ್‌ ವೀರೂಪಾಕ್ಷಸ್ವಾಮಿ, ಮುಖ್ಯ ಶಿಕ್ಷಕಿ ಮೇಬೆಲ್‌ ಮುಂತಾದವರಿದ್ದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು, ಕಾರ್ಯಕ್ರಮದಲ್ಲಿಲಯನ್ಸ್‌ ಪದಾಧಿಕಾರಿಗಳು, ಪೋಷಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ