ಆ್ಯಪ್ನಗರ

ಜಿಲ್ಲಾ ಕ್ರೀಡಾಂಗಣ: ಸಂಸದರಿಂದ ದಿಢೀರ್‌ ಪರಿಶೀಲನೆ

ಅವ್ಯವಸ್ಥೆಯ ಆಗರವಾಗಿರುವ ನಗರದ ಜಿಲ್ಲಾ ಅಂಬೇಡ್ಕರ್‌ ಕ್ರೀಡಾಂಗಣವನ್ನು ಸಂಸದ ಆರ್‌. ಧ್ರುವನಾರಾಯಣ ಅವರು ಮಂಗಳವಾರ ಸಂಜೆ ದಿಢೀರ್‌ ಪರಿಶೀಲಿಸಿದರಲ್ಲದೇ, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka 12 Jul 2018, 5:00 am
ಚಾಮರಾಜನಗರ : ಅವ್ಯವಸ್ಥೆಯ ಆಗರವಾಗಿರುವ ನಗರದ ಜಿಲ್ಲಾ ಅಂಬೇಡ್ಕರ್‌ ಕ್ರೀಡಾಂಗಣವನ್ನು ಸಂಸದ ಆರ್‌. ಧ್ರುವನಾರಾಯಣ ಅವರು ಮಂಗಳವಾರ ಸಂಜೆ ದಿಢೀರ್‌ ಪರಿಶೀಲಿಸಿದರಲ್ಲದೇ, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web district stadium review by mp
ಜಿಲ್ಲಾ ಕ್ರೀಡಾಂಗಣ: ಸಂಸದರಿಂದ ದಿಢೀರ್‌ ಪರಿಶೀಲನೆ


ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣಗೊಂಡಿದ್ದು, ಇದನ್ನು ಆದಷ್ಟು ಬೇಗ ಉದ್ಘಾಟಿಸಿ, ಒಂದು ಅತ್ಯುತ್ತಮ ಅಥ್ಲೆಟಿಕ್‌ ಕೂಟ ಆಯೋಜಿಸಬೇಕಾಗಿದೆ ಎಂದು ಸಂಸದರು ಸೂಚಿಸಿದರು.

ಇದಕ್ಕೂ ಮೊದಲು ಕ್ರೀಡಾಪಟುವೊಬ್ಬರು, ಜಿಲ್ಲಾ ಕ್ರೀಡಾಂಗಣದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಗುಣಮಟ್ಟದ ಸಿಂಥೆಟಿಕ್‌ ಅಂಗಳದೊಳಗೆ ಕ್ರಿಕೆಟ್‌ ಆಟವಾಡಲಾಗುತ್ತಿದೆ. ಇದರಿಂದ ಟ್ರ್ಯಾಕ್‌ ಹಾಳಾಗಲಿದೆ ಎಂಬುದಾಗಿ ದೂರಿದರು.

ಈ ವಿಚಾರ ತಿಳಿದ ಸಂಸದರು ಬೇಸರ ವ್ಯಕ್ತಪಡಿಸಿದರಲ್ಲದೇ, ಅಧಿಕಾರಿಗಳನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು. ಇಂಥದೊಂದು ಟ್ರ್ಯಾಕ್‌ ದೊಡ್ಡ ದೊಡ್ಡ ಜಿಲ್ಲೆಗಳಲ್ಲೇ ಇಲ್ಲ. ಹೀಗಿರುವಾಗ ನೀವು ಹೇಗೆ ನಿರ್ವಹಣೆ ಮಾಡಬೇಕು. ಕ್ರೀಡಾಂಗಣದಲ್ಲಿ ಕಾವಲುಗಾರರು ಇರುವುದಿಲ್ಲವೇ? ನಿರ್ವಹಣೆ ಮಾಡಲು ಆಗುವುದಿಲ್ಲವೇ ಎಂದು ದಬಾಯಿಸಿದರು.

ಇನ್ನು ಖಾಸಗಿ ಬಸ್‌ ನಿಲ್ದಾಣದಿಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಸುತ್ತುಗೋಡೆಯನ್ನು ಒಡೆಯಲಾಗಿದ್ದು, ಕೂಡಲೇ ಆ ಸುತ್ತುಗೋಡೆಯನ್ನು ನಿರ್ಮಿಸಿಕೊಡುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕ್ರೀಡಾಂಗಣದಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಹಾಗೂ ಇತರೆ ಕಾಮಗಾರಿಗಳಿಗೆ 7 ಕೋಟಿ ರೂ. ಅನುದಾನ ಲಭ್ಯವಿದ್ದು, ಟೆಂಡರ್‌ ಸಹ ಆಗಿತ್ತು. ಆದರೆ, ಈ ಹಿಂದಿನ ಗುತ್ತಿಗೆದಾರರು ಕಾಮಗಾರಿ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಕಾಮಗಾರಿಗೆ ತಡೆ ಉಂಟಾಗಿದೆ ಎಂಬುದಾಗಿ ಯುವಜನ ಸೇವಾ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚೆಲುವಯ್ಯ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌, ತಾ.ಪಂ. ಮಾಜಿ ಸದಸ್ಯ ಚಿಕ್ಕಮಹದೇವ್‌, ನಗರಸಭೆ ಆಯುಕ್ತ ರಾಜಣ್ಣ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ