ಆ್ಯಪ್ನಗರ

ಶಿಕ್ಷಣದಿಂದ ಸಮುದಾಯದ ಏಳಿಗೆ

ವಾಲ್ಮೀಕಿ ಜನಾಂಗ ಎಲ್ಲಾ ರಂಗದಲ್ಲೂ ಸಾಧನೆ ಯಶಸ್ವಿ ಸಿಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು. ಆಗ ಮಾತ್ರ ನಾಯಕ ಜನಾಂಗ ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಜಿ.ಪಂ ಅಧ್ಯಕ್ಷೆ ಶಿವಮ್ಮ ಪಾಳ್ಯಕೃಷ್ಣ ತಿಳಿಸಿದರು.

Vijaya Karnataka 17 Aug 2018, 5:00 am
ಯಳಂದೂರು : ವಾಲ್ಮೀಕಿ ಜನಾಂಗ ಎಲ್ಲಾ ರಂಗದಲ್ಲೂ ಸಾಧನೆ ಯಶಸ್ವಿ ಸಿಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು. ಆಗ ಮಾತ್ರ ನಾಯಕ ಜನಾಂಗ ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಜಿ.ಪಂ ಅಧ್ಯಕ್ಷೆ ಶಿವಮ್ಮ ಪಾಳ್ಯಕೃಷ್ಣ ತಿಳಿಸಿದರು.
Vijaya Karnataka Web education importent for community devepment
ಶಿಕ್ಷಣದಿಂದ ಸಮುದಾಯದ ಏಳಿಗೆ


ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ತಾಲೂಕು ನಾಯಕ ಮಂಡಳಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎ, ಎಂಎ ತರಗತಿಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

'' ಇಂದು ವಾಲ್ಮೀಕಿ ಜನಾಂಗ ಸರಿಯಾದ ಮಾರ್ಗದರ್ಶನ ಸಿಗದೇ ಶಿಕ್ಷಣದಿಂದ ದೂರ ಸರಿಯುತ್ತಿದ್ದಾರೆ. ಇಂತಹ ದಿನಗಳಲ್ಲಿ ಶಿಕ್ಷಣ ವಂಚಿತ ಜನಾಂಗದ ವಿದ್ಯಾರ್ಥಿ ಗಳನ್ನು ಗುರುತಿಸುವ ಜತೆಯಲ್ಲಿ ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ. ಇಂತಹ ಸಮಾಜ ಮುಖಿ ಕಾರ್ಯಗಳಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅವರಿಗೆ ಸಾಧಕರ ವಿಚಾರಗಳನ್ನು ಮುಟ್ಟಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕಾಗಿದೆ. ಅಲ್ಲದೆ ನಿರುದ್ಯೋಗ ನಿವಾರಣೆ ಮಾಡುವ ಸಲುವಾಗಿ ಸರಕಾರ ವಾಲ್ಮೀಕಿ ನಿಗಮಗಳನ್ನು ತೆರೆದು ಸಾಲ ಸೌಲಭ್ಯ ನೀಡುತ್ತಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ರಿಯಾತಿ ದರದಲ್ಲಿ ಕೃಷಿ ಪರಿಕರ ನೀಡುತ್ತಿದ್ದು , ಇದನ್ನು ರೈತರು ಬಳಸಿಕೂಳ್ಳಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸರಕಾರ ಪ್ರೋತ್ಸಾಹ ಧನ ನೀಡುತ್ತಿರುವುದರ ಜತೆಯಲ್ಲಿ ವಿದೇಶಗಳಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಗರ ವೆಂಕಟೇಶ್‌, ನಿವೃತ್ತ ಅಬಕಾರಿ ಉಪ ಅಧೀಕ್ಷಕ ಸೂರ್ಯನಾಯರಾಯಣ್‌, ತಾಲೂಕು ನಾಯಕ ಸಂಘದ ಅಧ್ಯಕ್ಷ ಮುರುಳಿ ಕೃಷ್ಣ, ಕಾರ್ಯದರ್ಶಿ ವೆಂಕಟಚಾಲ, ಖಜಾಂಚಿ ವೈ.ಆರ್‌. ಉಮೇಶ, ಯರಿಯೂರು ಗ್ರಾ.ಪಂ.ಉಪಾಧ್ಯಕ್ಷ ನಂಜುಂಡಸ್ವಾಮಿ, ಮದ್ದೂರ ಗ್ರಾ.ಪಂ. ಸದಸ್ಯ ಸೋಮಶೇಖರ್‌, ಅಗರ ಯಜಮಾನರಾದ ನರಸಿಂಹನಾಯಕ, ಸಂಜೀವನಾಯಕ,ಗೋವಿಂದನಾಯಕ, ನಾಗರಾಜು, ಸೈಕಲ್‌ ಷಾಪ್‌ ಮಂಜು, ಅಂಬಳೆ ರವಿ, ಅಂಗಡಿ ಮಹೇಶ್‌, ಯರಿಯೂರು ಗೋವಿಂದನಾಯಕ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ