ನೀತಿ ಸಂಹಿತೆ ಉಲ್ಲಂಘನೆ: ಜಿಟಿಡಿ, ಎಚ್ವಿ ಕಾರು ಸೇರಿದಂತೆ 150ಕ್ಕೆ ಹೆಚ್ಚು ವಾಹನಗಳು ವಶಕ್ಕೆ
ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡರ ಕಾರು ಸೇರಿದಂತೆ 10ಕ್ಕೂ ಹೆಚ್ಚು ಕಾರುಗಳನ್ನು ಹಾಗೂ 150 ಬೈಕ್ಗಳನ್ನು ಸೆಕ್ಟರ್ ಮ್ಯಾಜಿಸ್ಪ್ರೇಟ್ ವಶಕ್ಕೆ ಪಡೆದುಕೊಂಡರು.
Vijaya Karnataka 4 Apr 2018, 10:24 am
ಕೊಳ್ಳೇಗಾಲ: ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡರ ಕಾರು ಸೇರಿದಂತೆ 10ಕ್ಕೂ ಹೆಚ್ಚು ಕಾರುಗಳನ್ನು ಹಾಗೂ 150 ಬೈಕ್ಗಳನ್ನು ಸೆಕ್ಟರ್ ಮ್ಯಾಜಿಸ್ಪ್ರೇಟ್ ವಶಕ್ಕೆ ಪಡೆದುಕೊಂಡರು.
ಪಟ್ಟಣದ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ವಿಕಾಸಕ್ಕಾಗಿ ಬಿಎಸ್ಪಿ ಮತ್ತು ಜೆಡಿಎಸ್ ಬೃಹತ್ ಸಮಾವೇಶಕ್ಕೆ ಆಗಮಿಸಿದ ಈ ವಾಹನಗಳನ್ನು ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕೆ ಚುನಾವಣಾಧಿಕಾರಿ ಸೂಚನೆ ಮೇರೆಗೆ ವಶಕ್ಕೆ ಪಡೆದುಕೊಂಡರು.
ಧರಣಿ ಎಚ್ಚರಿಕೆ: ಇದನ್ನು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ಮುಖಂಡರು ತಂದಾಗ, ಕೋಪಗೊಂಡ ಅವರು ಚುನಾವಣಾ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.
''ನೀತಿ ಸಂಹಿತೆ ಹೆಸರಿನಲ್ಲಿ ಸಮಾವೇಶಕ್ಕೆ ಬಂದಿದ್ದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ವಾಹನಗಳನ್ನು ವಶಪಡಿಸಿಕೊಂಡಿದ್ದು ಸರಿಯಲ್ಲ. ಕೂಡಲೇ ಅವುಗಳನ್ನು ಬಿಟ್ಟು ಕಳುಹಿಸದಿದ್ದರೆ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ಕೂರುತ್ತೇವೆ,'' ಎಂದು ಕುಮಾರಸ್ವಾಮಿ ಎಚ್ಚರಿಸಿದರು.
''ಮಾದರಿ ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದಾರೆ. ಚುನಾವಣೆ ಮುಗಿಯುವ ತನಕ ನಿಮ್ಮ ದರ್ಬಾರ್ ಅಷ್ಟೆ, ಅಮೇಲೆ ನಾವೇನು ಮಾಡುತ್ತೀವಿ ಅಂತ ನೋಡುವಿರಂತೆ,'' ಎಂದರು.
''ಯಾರು ಆರ್ಓ, ಅವರ ಬಳಿ ಹೋಗಿ ಕೇಳುತ್ತೇನೆ, ಕಾರ್ಯಕರ್ತರು ಬೈಕ್ನಲ್ಲಿ ಬರಬಾರದು ಎಂಬ ನಿಯಮ ಇದೆಯೆ?, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆಇಲ್ಲದ ನಿಯಮ ನಮಗೇಕೆ? ಮೊದಲು ಪೊಲೀಸ್ ಜೀಪ್ಗಳಲ್ಲಿ ಹಣ ಸಾಗಿಸುವುದನ್ನು ನಿಲ್ಲಿಸಿ, ಸಣ್ಣ ಪುಟ್ಟ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತೀರಿ, ಸಿದ್ದರಾಮಯ್ಯ ಅವರ ಕಾರ್ ಅನ್ನು ಯಾವತ್ತಾದರು ಚೆಕ್ ಮಾಡಿದ್ದೀರಾ?, ಕಮಿಷನರ್ ಎಂದರೆ ಅವರಿಗೆ ಎರಡು ಕೊಂಬಿದೆಯೇ?,''ಎಂದು ಪ್ರಶ್ನಿಸಿದರು.
ಕಾರ್ಯಕ್ರಮ 8 ಗಂಟೆ ನಂತರವೂ ಮುಂದುವರಿದಿದ್ದರಿಂದ ಅಧಿಕಾರಿಗಳು ನಿಲ್ಲಿಸುವ ಸೂಚನೆ ನೀಡಿದರು. ನಂತರ ಕುಮಾರಸ್ವಾಮಿ ಮಾತು ನಿಲ್ಲಿಸಿ ತೆರಳಿದರು.
ಪಟ್ಟಣದ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ವಿಕಾಸಕ್ಕಾಗಿ ಬಿಎಸ್ಪಿ ಮತ್ತು ಜೆಡಿಎಸ್ ಬೃಹತ್ ಸಮಾವೇಶಕ್ಕೆ ಆಗಮಿಸಿದ ಈ ವಾಹನಗಳನ್ನು ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕೆ ಚುನಾವಣಾಧಿಕಾರಿ ಸೂಚನೆ ಮೇರೆಗೆ ವಶಕ್ಕೆ ಪಡೆದುಕೊಂಡರು.
ಧರಣಿ ಎಚ್ಚರಿಕೆ: ಇದನ್ನು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ಮುಖಂಡರು ತಂದಾಗ, ಕೋಪಗೊಂಡ ಅವರು ಚುನಾವಣಾ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.
''ನೀತಿ ಸಂಹಿತೆ ಹೆಸರಿನಲ್ಲಿ ಸಮಾವೇಶಕ್ಕೆ ಬಂದಿದ್ದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ವಾಹನಗಳನ್ನು ವಶಪಡಿಸಿಕೊಂಡಿದ್ದು ಸರಿಯಲ್ಲ. ಕೂಡಲೇ ಅವುಗಳನ್ನು ಬಿಟ್ಟು ಕಳುಹಿಸದಿದ್ದರೆ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ಕೂರುತ್ತೇವೆ,'' ಎಂದು ಕುಮಾರಸ್ವಾಮಿ ಎಚ್ಚರಿಸಿದರು.
''ಮಾದರಿ ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದಾರೆ. ಚುನಾವಣೆ ಮುಗಿಯುವ ತನಕ ನಿಮ್ಮ ದರ್ಬಾರ್ ಅಷ್ಟೆ, ಅಮೇಲೆ ನಾವೇನು ಮಾಡುತ್ತೀವಿ ಅಂತ ನೋಡುವಿರಂತೆ,'' ಎಂದರು.
''ಯಾರು ಆರ್ಓ, ಅವರ ಬಳಿ ಹೋಗಿ ಕೇಳುತ್ತೇನೆ, ಕಾರ್ಯಕರ್ತರು ಬೈಕ್ನಲ್ಲಿ ಬರಬಾರದು ಎಂಬ ನಿಯಮ ಇದೆಯೆ?, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆಇಲ್ಲದ ನಿಯಮ ನಮಗೇಕೆ? ಮೊದಲು ಪೊಲೀಸ್ ಜೀಪ್ಗಳಲ್ಲಿ ಹಣ ಸಾಗಿಸುವುದನ್ನು ನಿಲ್ಲಿಸಿ, ಸಣ್ಣ ಪುಟ್ಟ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತೀರಿ, ಸಿದ್ದರಾಮಯ್ಯ ಅವರ ಕಾರ್ ಅನ್ನು ಯಾವತ್ತಾದರು ಚೆಕ್ ಮಾಡಿದ್ದೀರಾ?, ಕಮಿಷನರ್ ಎಂದರೆ ಅವರಿಗೆ ಎರಡು ಕೊಂಬಿದೆಯೇ?,''ಎಂದು ಪ್ರಶ್ನಿಸಿದರು.
ಕಾರ್ಯಕ್ರಮ 8 ಗಂಟೆ ನಂತರವೂ ಮುಂದುವರಿದಿದ್ದರಿಂದ ಅಧಿಕಾರಿಗಳು ನಿಲ್ಲಿಸುವ ಸೂಚನೆ ನೀಡಿದರು. ನಂತರ ಕುಮಾರಸ್ವಾಮಿ ಮಾತು ನಿಲ್ಲಿಸಿ ತೆರಳಿದರು.