ಚಾಮರಾಜನಗರ : ಬೇಧ, ಭಾವ ಇಲ್ಲದ ಮಾನವೀಯತೆ, ಶಾಂತಿ ಸಾರುವ ಸರಳ ಜೀವನವೇ ಬುದ್ಧ ಮಾರ್ಗವಾಗಿದ್ದು, ಇದನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೊರ ವಲಯದ ಯಡಬೆಟ್ಟದ ಬಳಿಯಲ್ಲಿ ನಳಂದ ವಿಶ್ವವಿದ್ಯಾಲಯ , ಜ್ಞಾನ ಹಾಗೂ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಅಸಮಾನತೆ, ಶೋಷಣೆ, ಅಮಾನವೀಯತೆ ಪದ್ಧತಿಗಳ ಆಚರಣೆಗಳನ್ನು ಕಿತ್ತೊಗೆಯುವ ಸಲುವಾಗಿಯೇ ಧರ್ಮಗಳು ಅಸ್ತಿತ್ವಕ್ಕೆ ಬಂದವು. ಬುದ್ದ ಶಾಂತಿ, ಸಹನೆ, ಮಾನವೀಯತೆಯನ್ನು ಬೋಧಿಸಿದರೆ, ಬಸವಣ್ಣ ತಮ್ಮ ವಚನ ಚಳವಳಿ ಮೂಲಕ ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿದ್ದಾರೆ. ಈ ಒಂದು ಸಾಲಿನ ವಚನದಲ್ಲೇ ಎಷ್ಟು ಅರ್ಥವಿದೆ ಎಂಬುದನ್ನು ಅರಿಯಬೇಕಾಗಿದೆ. ನಮ್ಮ ಸಮಾಜಕ್ಕೆ ವಚನ ಸಾಹಿತ್ಯ, ಹರಿದಾಸ ಸಾಹಿತ್ಯದ ಕೊಡುಗೆ ಅಪಾರವಾದದು ಎಂದರು.
5ನೇ ಶತಮಾನದಲ್ಲೇ ಬಿಹಾರದಲ್ಲಿದ್ದ ನಳಂದ ವಿಶ್ವವಿದ್ಯಾಲಯದಲ್ಲಿ ಒಮ್ಮೆಗೆ 10 ಸಾವಿರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದರಂತೆ, ಅಲ್ಲಿ ವಿದೇಶಿಗರು ವ್ಯಾಸಂಗ ಮಾಡುತ್ತಿದ್ದರಂತೆ. ಈ ವಿಶ್ವ ವಿದ್ಯಾಲಯ 12ನೇ ಶತಮಾನದವರೆಗೂ ಇತ್ತು ಎಂಬುದು ಇತಿಹಾಸ. ಅಂಥ ಇತಿಹಾಸವನ್ನು ಚಾ.ನಗರದಲ್ಲಿ ಮರುಕಳಿಸುವ ಯತ್ನ ನಡೆಯುತ್ತಿರುವುದು ಚರಿತ್ರಾರ್ಹವಾದದು ಎಂದರು.
ಇಡೀ ಜಗತ್ತಿಗೆ ಮಾನವತಾವಾದವನ್ನು ಸಾರಿದವನು ಬುದ್ಧ. ನ್ಯಾಯಯುತವಾದ ಬದುಕು, ಅಸಮಾನತೆ, ಶೋಷಣೆ ಇಲ್ಲದ ಬದುಕೇ ನಿಜವಾದ ಧರ್ಮ ಎಂಬುದು ಆತನ ಸಾರವಾಗಿತ್ತು. ಹೀಗಾಗಿ ಅದನ್ನು ಒಪ್ಪಿದ ಅಂಬೇಡ್ಕರ್ ಅವರು ಬೌದ್ಧ ಧರ್ಮದತ್ತ ಮುಖ ಮಾಡಿದರು ಎಂದರು.
ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗದೇ ಹೋದರೆ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ಶೋಷಿತ ಸಮುದಾಯಗಳಿಗೆ ಇಂಥ ಸೌಲಭ್ಯಗಳು ಸಿಗಬೇಕು ಎಂಬುದನ್ನು ಅರಿತು ನಮ್ಮ ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿತ್ತು ಎಂದರು.
ಸ್ವಾಭಿಮಾನ ಹೇಳಿಕೊಟ್ಟರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಶೋಷಿತ ಸಮುದಾಯದವರಲ್ಲಿ ಸ್ವಾಭಿಮಾನ ತುಂಬಲು ಯಾವುದೇ ತಾರತಮ್ಯ ಇಲ್ಲದ ಸಮ ಸಮಾಜವನ್ನು ಸ್ಥಾಪಿಸುವ ಉದ್ದೇಶದಿಂದ ಅಂಬೇಡ್ಕರ್ ಬುದ್ಧ ಮಾರ್ಗದತ್ತ ಮುಖ ಮಾಡಿದರು. ನಾವೆಲ್ಲರೂ ಅವರ ಆಶಯವನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಸಚಿವ ಸಿ. ಪುಟ್ಟರಂಗಶೆಟ್ಟಿ, ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ ಮಾತನಾಡಿದರು. ಭಂತೇಜಿಗಳಾದ ಆನಂದ ಮಹಾಥೇರ, ಮನೋರಕ್ಖಿತ, ಬೋದಿದತ್ತ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ, ಎಚ್.ಡಿ. ಕೋಟೆ ಶಾಸಕ ಅನಿಲ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಜಿ.ಪಂ. ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಸದಾಶಿವಮೂರ್ತಿ, ಎ.ಆರ್. ಬಾಲರಾಜು, ನವೀನ್, ಶಶಿಕಲಾ, ಜಿಲ್ಲಾಧಿಕಾರಿ ಕಾವೇರಿ, ಜಿ.ಪಂ. ಸಿಇಒ ಹರೀಶ್ಕುಮಾರ್ ಇತರರು ಹಾಜರಿದ್ದರು.
ಧ್ರುವನಾರಾಯಣ್ ಶ್ರಮ: ಮೆಚ್ಚುಗೆ
ನಗರದ ಹೊರ ವಲಯದಲ್ಲಿ ನಳಂದ ವಿಶ್ವವಿದ್ಯಾಲಯಕ್ಕೆ ಭೂಮಿ ಹಾಗೂ ಅನುದಾನ ಬಿಡುಗಡೆಯಾಗಲು ಸಂಸದ ಧ್ರುವನಾರಾಯಣ ಅವರ ಕಾಳಜಿ, ಅವಿರತ ಶ್ರಮವೇ ಕಾರಣ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಶಾಸಕ ಎನ್. ಮಹೇಶ, ಬೋದಿದತ್ತ ಬಂತೇಜಿ ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಧ್ರುವನಾರಾಯಣ ಅವರು ತಮ್ಮ ಭಾಷಣದಲ್ಲಿ ನಳಂದ ವಿವಿಗೆ ಅನುದಾನ ಹಾಗೂ ಭೂಮಿ ನೀಡಲು ಸಿದ್ದರಾಮಯ್ಯ ಅವರ ಉದಾರತೆ ಕಾರಣ ಎಂದು ಹೊಗಳಿದ್ದರು. ಇದಕ್ಕೆ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರು, ಧ್ರುವ ಇಲ್ಲದೇ ಇದ್ದರೆ ಇಲ್ಲ ವಿವಿಗೆ ಜಾಗ ಸಿಗುತ್ತಿರಲಿಲ್ಲ ಎಂದರು. ಇನ್ನು ಪರಮೇಶ್ವರ್ ಸಹ ಧ್ರುವ ಅವರ ಕಾಳಜಿ, ಸರಕಾರದ ಮಟ್ಟದಲ್ಲಿ ಸತತ ಒತ್ತಡ ಹೇರುತ್ತಿದ್ದ ಪರಿಯನ್ನು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೇ ಶಾಸಕ ಎನ್. ಮಹೇಶ್ ಅವರು ಸಹ ಪಕ್ಷಭೇದ ಮರೆತು ನಳಂದ ವಿವಿ ವಿಚಾರದಲ್ಲಿ ಧ್ರುವನಾರಾಯಣ ಅವರ ಕಾರ್ಯವನ್ನು ಶ್ಲಾಘಿಸಿದರು.
ನಗರದ ಹೊರ ವಲಯದ ಯಡಬೆಟ್ಟದ ಬಳಿಯಲ್ಲಿ ನಳಂದ ವಿಶ್ವವಿದ್ಯಾಲಯ , ಜ್ಞಾನ ಹಾಗೂ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಅಸಮಾನತೆ, ಶೋಷಣೆ, ಅಮಾನವೀಯತೆ ಪದ್ಧತಿಗಳ ಆಚರಣೆಗಳನ್ನು ಕಿತ್ತೊಗೆಯುವ ಸಲುವಾಗಿಯೇ ಧರ್ಮಗಳು ಅಸ್ತಿತ್ವಕ್ಕೆ ಬಂದವು. ಬುದ್ದ ಶಾಂತಿ, ಸಹನೆ, ಮಾನವೀಯತೆಯನ್ನು ಬೋಧಿಸಿದರೆ, ಬಸವಣ್ಣ ತಮ್ಮ ವಚನ ಚಳವಳಿ ಮೂಲಕ ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿದ್ದಾರೆ. ಈ ಒಂದು ಸಾಲಿನ ವಚನದಲ್ಲೇ ಎಷ್ಟು ಅರ್ಥವಿದೆ ಎಂಬುದನ್ನು ಅರಿಯಬೇಕಾಗಿದೆ. ನಮ್ಮ ಸಮಾಜಕ್ಕೆ ವಚನ ಸಾಹಿತ್ಯ, ಹರಿದಾಸ ಸಾಹಿತ್ಯದ ಕೊಡುಗೆ ಅಪಾರವಾದದು ಎಂದರು.
5ನೇ ಶತಮಾನದಲ್ಲೇ ಬಿಹಾರದಲ್ಲಿದ್ದ ನಳಂದ ವಿಶ್ವವಿದ್ಯಾಲಯದಲ್ಲಿ ಒಮ್ಮೆಗೆ 10 ಸಾವಿರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದರಂತೆ, ಅಲ್ಲಿ ವಿದೇಶಿಗರು ವ್ಯಾಸಂಗ ಮಾಡುತ್ತಿದ್ದರಂತೆ. ಈ ವಿಶ್ವ ವಿದ್ಯಾಲಯ 12ನೇ ಶತಮಾನದವರೆಗೂ ಇತ್ತು ಎಂಬುದು ಇತಿಹಾಸ. ಅಂಥ ಇತಿಹಾಸವನ್ನು ಚಾ.ನಗರದಲ್ಲಿ ಮರುಕಳಿಸುವ ಯತ್ನ ನಡೆಯುತ್ತಿರುವುದು ಚರಿತ್ರಾರ್ಹವಾದದು ಎಂದರು.
ಇಡೀ ಜಗತ್ತಿಗೆ ಮಾನವತಾವಾದವನ್ನು ಸಾರಿದವನು ಬುದ್ಧ. ನ್ಯಾಯಯುತವಾದ ಬದುಕು, ಅಸಮಾನತೆ, ಶೋಷಣೆ ಇಲ್ಲದ ಬದುಕೇ ನಿಜವಾದ ಧರ್ಮ ಎಂಬುದು ಆತನ ಸಾರವಾಗಿತ್ತು. ಹೀಗಾಗಿ ಅದನ್ನು ಒಪ್ಪಿದ ಅಂಬೇಡ್ಕರ್ ಅವರು ಬೌದ್ಧ ಧರ್ಮದತ್ತ ಮುಖ ಮಾಡಿದರು ಎಂದರು.
ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗದೇ ಹೋದರೆ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ಶೋಷಿತ ಸಮುದಾಯಗಳಿಗೆ ಇಂಥ ಸೌಲಭ್ಯಗಳು ಸಿಗಬೇಕು ಎಂಬುದನ್ನು ಅರಿತು ನಮ್ಮ ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿತ್ತು ಎಂದರು.
ಸ್ವಾಭಿಮಾನ ಹೇಳಿಕೊಟ್ಟರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಶೋಷಿತ ಸಮುದಾಯದವರಲ್ಲಿ ಸ್ವಾಭಿಮಾನ ತುಂಬಲು ಯಾವುದೇ ತಾರತಮ್ಯ ಇಲ್ಲದ ಸಮ ಸಮಾಜವನ್ನು ಸ್ಥಾಪಿಸುವ ಉದ್ದೇಶದಿಂದ ಅಂಬೇಡ್ಕರ್ ಬುದ್ಧ ಮಾರ್ಗದತ್ತ ಮುಖ ಮಾಡಿದರು. ನಾವೆಲ್ಲರೂ ಅವರ ಆಶಯವನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಸಚಿವ ಸಿ. ಪುಟ್ಟರಂಗಶೆಟ್ಟಿ, ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ ಮಾತನಾಡಿದರು. ಭಂತೇಜಿಗಳಾದ ಆನಂದ ಮಹಾಥೇರ, ಮನೋರಕ್ಖಿತ, ಬೋದಿದತ್ತ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ, ಎಚ್.ಡಿ. ಕೋಟೆ ಶಾಸಕ ಅನಿಲ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಜಿ.ಪಂ. ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಸದಾಶಿವಮೂರ್ತಿ, ಎ.ಆರ್. ಬಾಲರಾಜು, ನವೀನ್, ಶಶಿಕಲಾ, ಜಿಲ್ಲಾಧಿಕಾರಿ ಕಾವೇರಿ, ಜಿ.ಪಂ. ಸಿಇಒ ಹರೀಶ್ಕುಮಾರ್ ಇತರರು ಹಾಜರಿದ್ದರು.
ಧ್ರುವನಾರಾಯಣ್ ಶ್ರಮ: ಮೆಚ್ಚುಗೆ
ನಗರದ ಹೊರ ವಲಯದಲ್ಲಿ ನಳಂದ ವಿಶ್ವವಿದ್ಯಾಲಯಕ್ಕೆ ಭೂಮಿ ಹಾಗೂ ಅನುದಾನ ಬಿಡುಗಡೆಯಾಗಲು ಸಂಸದ ಧ್ರುವನಾರಾಯಣ ಅವರ ಕಾಳಜಿ, ಅವಿರತ ಶ್ರಮವೇ ಕಾರಣ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಶಾಸಕ ಎನ್. ಮಹೇಶ, ಬೋದಿದತ್ತ ಬಂತೇಜಿ ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಧ್ರುವನಾರಾಯಣ ಅವರು ತಮ್ಮ ಭಾಷಣದಲ್ಲಿ ನಳಂದ ವಿವಿಗೆ ಅನುದಾನ ಹಾಗೂ ಭೂಮಿ ನೀಡಲು ಸಿದ್ದರಾಮಯ್ಯ ಅವರ ಉದಾರತೆ ಕಾರಣ ಎಂದು ಹೊಗಳಿದ್ದರು. ಇದಕ್ಕೆ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರು, ಧ್ರುವ ಇಲ್ಲದೇ ಇದ್ದರೆ ಇಲ್ಲ ವಿವಿಗೆ ಜಾಗ ಸಿಗುತ್ತಿರಲಿಲ್ಲ ಎಂದರು. ಇನ್ನು ಪರಮೇಶ್ವರ್ ಸಹ ಧ್ರುವ ಅವರ ಕಾಳಜಿ, ಸರಕಾರದ ಮಟ್ಟದಲ್ಲಿ ಸತತ ಒತ್ತಡ ಹೇರುತ್ತಿದ್ದ ಪರಿಯನ್ನು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೇ ಶಾಸಕ ಎನ್. ಮಹೇಶ್ ಅವರು ಸಹ ಪಕ್ಷಭೇದ ಮರೆತು ನಳಂದ ವಿವಿ ವಿಚಾರದಲ್ಲಿ ಧ್ರುವನಾರಾಯಣ ಅವರ ಕಾರ್ಯವನ್ನು ಶ್ಲಾಘಿಸಿದರು.