ಸೆಸ್ಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
ವಿದ್ಯುತ್ ಪರಿವರ್ತಕ ಅಳವಡಿಸಲು ಸೆಸ್ಕ್ ಅಧಿಕಾರಿಗಳ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ತೇರಂಬಳ್ಳಿ ಗ್ರಾಮದ ರೈತರು ಸೆಸ್ಕ್ ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka 11 Nov 2018, 5:00 am
ಕೊಳ್ಳೇಗಾಲ : ವಿದ್ಯುತ್ ಪರಿವರ್ತಕ ಅಳವಡಿಸಲು ಸೆಸ್ಕ್ ಅಧಿಕಾರಿಗಳ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ತೇರಂಬಳ್ಳಿ ಗ್ರಾಮದ ರೈತರು ಸೆಸ್ಕ್ ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ತೇರಂಬಳ್ಳಿ ಗ್ರಾಮದ ಮೂರ್ತಿ ಎಂಬುವವರ ಹೊಸ ಮನೆಯ ಸಮೀಪ 25 ದಿನಗಳ ಹಿಂದೆ ಪರಿವರ್ತಕ ಕೆಟ್ಟಿರುವುದಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಕೋರಿಕೆಯ ಹಿನ್ನಲ್ಲೇ ಅಧಿಕಾರಿಗಳು ಹೊಸ ಟಿ.ಸಿಯನ್ನು ಅಳವಡಿಸಿದರು. ಆದರೇ ಹೊಸ ಟಿ.ಸಿ ನಿರುಪಯುಕ್ತವಾಗಿದೆ. ಗ್ರಾಮದ ರೈತರ ಸುಮಾರು 14 ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ, ಜಮೀನಿನ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ನೀರಿಲ್ಲದೆ ಬೆಳಗಳು ಒಣಗಿ ಹೋಗುತ್ತಿದ್ದು, ಕೂಡಲೇ ಟಿಸಿ ಅಳವಡಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೇರಂಬಳ್ಳಿ ಗ್ರಾಮದ ರೈತರಾದ ಮಹೇಶ್, ಸತೀಶ್, ಗಿರೀಶ್, ಮಹದೇವ ಪ್ರಭು, ಮೂರ್ತಿ, ಪ್ರವೀಣ್ಕುಮಾರ್, ಕುಮಾರಸ್ವಾಮಿ, ವಿನೋದ್, ಮಹೇಶ್ ಮುಂತಾದವರು ಇದ್ದರು.
ತಾಲೂಕಿನ ತೇರಂಬಳ್ಳಿ ಗ್ರಾಮದ ಮೂರ್ತಿ ಎಂಬುವವರ ಹೊಸ ಮನೆಯ ಸಮೀಪ 25 ದಿನಗಳ ಹಿಂದೆ ಪರಿವರ್ತಕ ಕೆಟ್ಟಿರುವುದಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಕೋರಿಕೆಯ ಹಿನ್ನಲ್ಲೇ ಅಧಿಕಾರಿಗಳು ಹೊಸ ಟಿ.ಸಿಯನ್ನು ಅಳವಡಿಸಿದರು. ಆದರೇ ಹೊಸ ಟಿ.ಸಿ ನಿರುಪಯುಕ್ತವಾಗಿದೆ. ಗ್ರಾಮದ ರೈತರ ಸುಮಾರು 14 ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ, ಜಮೀನಿನ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ನೀರಿಲ್ಲದೆ ಬೆಳಗಳು ಒಣಗಿ ಹೋಗುತ್ತಿದ್ದು, ಕೂಡಲೇ ಟಿಸಿ ಅಳವಡಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತೇರಂಬಳ್ಳಿ ಗ್ರಾಮದ ರೈತರಾದ ಮಹೇಶ್, ಸತೀಶ್, ಗಿರೀಶ್, ಮಹದೇವ ಪ್ರಭು, ಮೂರ್ತಿ, ಪ್ರವೀಣ್ಕುಮಾರ್, ಕುಮಾರಸ್ವಾಮಿ, ವಿನೋದ್, ಮಹೇಶ್ ಮುಂತಾದವರು ಇದ್ದರು.